News Karnataka Kannada
Thursday, April 18 2024
Cricket
ಮಂಗಳೂರು

ಮಂಗಳೂರು: ಫೆ.5 ರಿಂದ ಸುಳ್ಯದಿಂದ ಕರಾವಳಿ ಧ್ವನಿ ಯಾತ್ರೆ ಆರಂಭ – ಆರ್.ವಿ.ದೇಶಪಾಂಡೆ

Coastal sound to begin from Sullia from February 5: R V Deshpande
Photo Credit : News Kannada

ಮಂಗಳೂರು: ಫೆಬ್ರವರಿ 5 ರಿಂದ ಸುಳ್ಯದಿಂದ ಕರಾವಳಿ ಧ್ವನಿ ಯಾತ್ರೆ ಆರಂಭಿಸಲಾಗುವುದು,ಇದು ಐದು ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಆಗಿತ್ತು, ಆದರೆ ಇದೀಗ ನಾವು ನೀಡಿದ ಕೆಲ ಪ್ರಮುಖ ಕೈಗಾರಿಕೆ ಬಂದ್ ಆಗುತ್ತಿರುವುದನ್ನು ನಂಬಲಾಗುತ್ತಿಲ್ಲ. ಕೇಂದ್ರ ಮುಂಗಡ ಪತ್ರದಲ್ಲಿ ನರೇಗಾ ಯೋಜನೆಗೆ ಬಜೆಟ್ ಹಂಚಿಕೆ ಕಡಿಮೆಯಾಗಿದೆ. ಈ ಸರ್ಕಾರ ಕಮಿಷನ್ ತೆಗೆದುಕೊಳ್ಳುವುದು ಬಿಟ್ಟು ಬೇರೆ ಏನು ಚಿಂತೆ ಇಲ್ಲ ಹೀಗಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗತ್ತಿದೆ ಎಂದರು.

ಬಿಜೆಪಿ ಅಭಿವೃದ್ಧಿಗೆ ಒತ್ತು ನೀಡಲಾಗದೆ, ಬಡತನ, ನಿರುದ್ಯೋಗವೇ ಹೆಚ್ಚಿಸಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಹೀಗಾಗಿ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ಮತ ಕೇಳುವ ಅಧಿಕಾರವೂ ಇಲ್ಲ. ಅದಕ್ಕಾಗಿ ಕರಾವಳಿಗಾಗಿ ಹೊಸ ಪ್ರಣಾಳಿಕೆ ಮಾಡಿದ್ದೇವೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು