ಮಂಗಳೂರು: ಫೆಬ್ರವರಿ 5 ರಿಂದ ಸುಳ್ಯದಿಂದ ಕರಾವಳಿ ಧ್ವನಿ ಯಾತ್ರೆ ಆರಂಭಿಸಲಾಗುವುದು,ಇದು ಐದು ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಆಗಿತ್ತು, ಆದರೆ ಇದೀಗ ನಾವು ನೀಡಿದ ಕೆಲ ಪ್ರಮುಖ ಕೈಗಾರಿಕೆ ಬಂದ್ ಆಗುತ್ತಿರುವುದನ್ನು ನಂಬಲಾಗುತ್ತಿಲ್ಲ. ಕೇಂದ್ರ ಮುಂಗಡ ಪತ್ರದಲ್ಲಿ ನರೇಗಾ ಯೋಜನೆಗೆ ಬಜೆಟ್ ಹಂಚಿಕೆ ಕಡಿಮೆಯಾಗಿದೆ. ಈ ಸರ್ಕಾರ ಕಮಿಷನ್ ತೆಗೆದುಕೊಳ್ಳುವುದು ಬಿಟ್ಟು ಬೇರೆ ಏನು ಚಿಂತೆ ಇಲ್ಲ ಹೀಗಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗತ್ತಿದೆ ಎಂದರು.
ಬಿಜೆಪಿ ಅಭಿವೃದ್ಧಿಗೆ ಒತ್ತು ನೀಡಲಾಗದೆ, ಬಡತನ, ನಿರುದ್ಯೋಗವೇ ಹೆಚ್ಚಿಸಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಹೀಗಾಗಿ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ಮತ ಕೇಳುವ ಅಧಿಕಾರವೂ ಇಲ್ಲ. ಅದಕ್ಕಾಗಿ ಕರಾವಳಿಗಾಗಿ ಹೊಸ ಪ್ರಣಾಳಿಕೆ ಮಾಡಿದ್ದೇವೆ ಎಂದರು.