News Kannada
Sunday, March 26 2023

ಕ್ಯಾಂಪಸ್

ವಿನೂತನ ಸಂಶೋಧನೆಗಾಗಿ ಆಸ್ಟ್ರೇಲಿಯಾ ಸರಕಾರದಿಂದ ಪೇಟೆಂಟ್ ಮಾನ್ಯತೆ

Photo Credit :

ಬೆಳ್ತಂಗಡಿ: ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ನಾರಾಯಣ ಎಸ್. ಹೆಬ್ಬಾರ್ ರಾಸಾಯನಶಾಸ್ತ್ರದಲ್ಲಿನ ತಮ್ಮ ವಿನೂತನ ಸಂಶೋಧನೆಗಾಗಿ ಆಸ್ಟ್ರೇಲಿಯಾ ಸರಕಾರದಿಂದ ಪೇಟೆಂಟ್ ಮಾನ್ಯತೆ ಪಡೆದುಕೊಂಡು ಸಾಧನೆ ಮೆರೆದಿದ್ದಾರೆ.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಾರಾಯಣ.ಎಸ್.ಹೆಬ್ಬಾರ್ ತಮ್ಮ ಸಂಶೋಧನೆ ‘ಪ್ರೇಪರೇಶನ್ ಆಫ್ ಸೈಕ್ಲೋಹೆಕ್ಸೆನ್ ಡಿರೈವೇಟಿವ್ ಆಂಡ್ ಆಸ್ ಕೊರೋಷನ್ ಇನ್ಹಿಬಿಟರ್ ಫಾರ್ ಮೈಲ್ಡ್ ಸ್ಟೀಲ್ ‘ ಗಾಗಿ ಆಸ್ಟ್ರೇಲಿಯ ಸರಕಾರದ ಕಾಮನ್ವೆಲ್ತ್ನಿಂದ ಪ್ರತಿಷ್ಠಿತ ಪೇಟೆಂಟ್ ಪಡೆದುಕೊಂಡಿದ್ದಾರೆ. ಈ ಸಂಶೋಧನೆ ಮೃದು ಉಕ್ಕಿಗೆ ಬಳಸಬಹುದಾದ ತುಕ್ಕು ಪ್ರತಿಬಂಧಕ ಸಂಯುಕ್ತದ ತಯಾರಿಯ ಕುರಿತಾಗಿದೆ.

ಪ್ರಸ್ತುತ ಪೇಟೆಂಟ್ ಗೌರವ ಪಡೆದುಕೊಂಡ 8 ಸದಸ್ಯರನ್ನೊಳಗೊಂಡ ತಂಡದಲ್ಲಿ ಒಬ್ಬರಾಗಿರುವ ಡಾ. ನಾರಾಯಣ ಹೆಬ್ಬಾರ್ ಅವರು ಕೆಲ ವರ್ಷಗಳಿಂದ ರಾಸಾಯನಕ್ಷೇತ್ರದಲ್ಲಿ ಅನೇಕ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಸಂಶೋಧನೆಯ ಭಾಗವಾಗಿ ಇವರು ತುಕ್ಕಿಗೆ ಸಂಬಂದಿಸಿದ ಅಧ್ಯಯನಗಳಲ್ಲಿ ಹೆಚ್ಚು ಒಳಗೊಂಡಿದ್ದರು.

ಈ ಕುರಿತು ಮಾತನಾಡಿದ ಅವರು “ ಈ ಹಿಂದೆ 2017ರಲ್ಲಿ ಪೇಟೆಂಟ್ ಮಾನ್ಯತೆಯಿಂದ ವಂಚಿತರಾಗಿದ್ದೆವು. ಹಲವು ಪ್ರಯತ್ನಗಳ ಬಳಿಕ ಈ ಬಾರಿ ಯಶಸ್ಸು ಕಂಡಿರುವುದಕ್ಕೆ ಖುಷಿಯಿದೆ. ಭವಿಷ್ಯದಲ್ಲಿ ಮತ್ತಷ್ಟು ಸಂಶೋಧನೆಗಳಲ್ಲಿ ತೊಡಗಿಕೊಂಡು ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸುವ ಇರಾದೆಯಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಧ್ಯಾಪಕರು ವಿದೇಶಿ ಸರಕಾರದಿಂದ ಪೇಟೆಂಟ್ ಪಡೆದುಕೊಂಡಿರುವುದು ಇದೇ ಮೊದಲು ಎಂಬುದು ಗಮನಾರ್ಹ. ಪ್ರಸ್ತುತ ಪೇಟೆಂಟ್ 8 ವರ್ಷಗಳ ಕಾಲಾವಧಿಯನ್ನು ಹೊದಿರಲಿದ್ದು, ನಿರ್ದಿಷ್ಟ ರಾಯಧನವನ್ನೂ ಒಳಗೊಳ್ಳಲಿದೆ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಪೇಟೆಂಟ್ ಸಹಕಾರಿಯಾಗಲಿದೆ.

“ವಿದ್ಯಾರ್ಥಿಗಳಲ್ಲಿ ಸಂಶೋಧನಾ ಕೌಶಲ್ಯ ವೃದ್ಧಿಸಬೇಕು. ಅದಕ್ಕಾಗಿ ಅವಕಾಶಗಳನ್ನು ಕಲ್ಪಿಸುವುದು ಮತ್ತು ಅವಕಾಶಗಳ ಸದ್ಭಳಕೆ ಅಗತ್ಯ. ಉನ್ನತ ಶಿಕ್ಷಣಕ್ಕಷ್ಟೇ ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಸೀಮಿತಗೊಳಿಸಬಾರದು. ಸಂಶೋಧನೆ, ಪೇಟೆಂಟ್ಗಳ ಕಡೆಗೂ ಗಮನಹರಿಸಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ಎಸ್.ಡಿ.ಎಂ ಕಾಲೇಜಿನ ನೈತಿಕ ಬೆಂಬಲ ಮತ್ತು ಸಹಕಾರವೂ ಇವರ ಈ ಸಾಧನೆಗೆ ಪ್ರೇರಣೆಯಾಗಿದೆ.

See also  ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪಿಸಲು ಮಂಜೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು