News Kannada
Wednesday, December 06 2023
ಕ್ಯಾಂಪಸ್

ಮಂಗಳೂರು: ನಿಟ್ಟೆ ವಿವಿ ಕ್ಯಾಂಪಸ್ ನಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಘಟಕ ಉದ್ಘಾಟನೆ

Inaugural Ceremony of Nitte Solid Waste Management Plant
Photo Credit : News Kannada

ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯದ ಪಾನೀರು ಕ್ಯಾಂಪಸ್ ನಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಘಟಕವನ್ನು ದ. ಕ. ಜಿಲ್ಲಾಧಿಕಾರಿಡಾ. ರಾಜೇಂದ್ರ ಕೆ. ವಿ. ಉದ್ಘಾಟಿಸಿದರು.

ನೂತನವಾಗಿ ನಿರ್ಮಾಣಗೊಂಡ ಈ ಘಟಕವು ನಿಟ್ಟೆ ವಿ. ವಿ. ಮತ್ತು ಮಂಗಳ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿ. ಮಂಗಳೂರು ಇದರ ಸಹಯೋಗದೊಂದಿಗೆ ಮುನ್ನಡೆಯಲಿದೆ.

ಜಿಲ್ಲಾಧಿಕಾರಿಡಾ. ರಾಜೇಂದ್ರ ಕೆ. ವಿ. ಮಾತನಾಡಿ, ‘ತ್ಯಾಜ್ಯ ನಿರ್ವಹಣೆ ಸಂಕೀರ್ಣ ವಿಚಾರ. ಮೇಲ್ನೋಟಕ್ಕೆ ಲಾಭದಾಯಕವೆಂದು ಕಂಡರೂ ನಿರಂತರ ಪರಿಶ್ರಮವಿದೆ. ನಿಟ್ಟೆ ವಿವಿಯಲ್ಲಿ ಅಳವಡಿಸಿರುವ ವೈಜ್ಞಾನಿಕ ವಿಧಾನ ನಿಜಕ್ಕೂ ಮಾದರಿ ಆಗಲಿದೆ. ಭವಿಷ್ಯದಲ್ಲಿ ಪಾಲಿಕೆ ಕೂಡ ಇಲ್ಲಿನ ವಿಧಾನವನ್ನು ಅಳವಡಿಸುವ ನಿಟ್ಟಿನಲ್ಲಿ ಚಿಂತಿಸಬಹುದು’ ಎಂದರು.

‘ಸ್ವಚ್ಛ ಮಂಗಳೂರು ಸ್ವಯಂ ಸೇವಕರಿಂದ ನಡೆಯುತ್ತಿರುವ ಮಂಗಳ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಯೋಜನೆಗಳು ಬಹಳ ಪರಿಣಾಮಕಾರಿಯಾಗಿದೆ. ಕಡಿಮೆ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣೆಯೊಂದಿಗೆ ಉದ್ಯೋಗ ಸೃಷ್ಟಿ ಆಗಲಿದೆ’ ಎಂದು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದಜಿ ಹೇಳಿದರು.

ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮಾತನಾಡಿ, ‘ನಮ್ಮ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಿರುವ ಈ ತ್ಯಾಜ್ಯ ನಿರ್ವಹಣಾ ಘಟಕವು ದೇಶದ ಎಲ್ಲಾ ವಿವಿಗಳಿಗೆ ಮಾದರಿಯಿಯಾಗಲಿದೆ’, ಎಂದು ಹೇಳಿದರು.

ನಿಟ್ಟೆ ವಿವಿಯ ಕುಲಪತಿಡಾ. ಸತೀಶ್‌ಕುಮಾರ್ ಭಂಡಾರಿ, ಕುಲಸಚಿವಡಾ. ಹರ್ಷ ಹಾಲಹಳ್ಳಿ ಉಪಸ್ಥಿತರಿದ್ದರು.
ವಿಧಾನಪರಿಷತ್ತಿನ ಮಾಜಿ ಸದಸ್ಯಕ್ಯಾ. ಗಣೇಶ್‌ಕಾರ್ಣಿಕ್ ಸ್ವಾಗತಿಸಿದರು. ಸ್ಮಿತಾ ಶೆಣೈಕಾರ್ಯಕ್ರಮ ನಿರೂಪಿಸಿದರು. ಮಂಗಳ ರಿಸೋರ್ಸ್ ಮ್ಯಾನೇಜ್ಮೆಂಟ್ ಆಡಳಿತ ನಿರ್ದೇಶಕ ದಿಲ್ ರಾಜ್ ಆಳ್ವ ವಂದಿಸಿದರು.

See also  ಪ್ರಕೃತಿಯೊಂದಿಗಿನ ಸಮನ್ವಯದ ಬದುಕೇ ನೈಜ ಪರಿಸರ ಪ್ರಜ್ಞೆ- ಪ್ರತಾಪ್ ಸಿಂಹ ನಾಯಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು