ಉಜಿರೆ, ಜ.10: ಶ್ರೀ.ಧ. ಮಂ.ಕಾಲೇಜಿನ ಪ್ರಥಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸರ್ಕಾರದಿಂದ ಕೊಡಲ್ಪಡುವ ನರೇಗಾ ಯೋಜನೆಯ ಸವಲತ್ತುಗಳನ್ನು ಮತ್ತು ಕೃಷಿಯ ಇನ್ನಿತರ ಮಾಹಿತಿಗಳನ್ನು ಪಡೆಯಲು ಕೃಷಿಕರ ಮನೆಗಳಿಗೆ ಭೇಟಿ
ನೀಡಿದರು.
ಈ ಸಂದರ್ಭದಲ್ಲಿ ಮೋಹನದಾಸ್ ಅವರ ಮನೆಗೆ ಭೇಟಿ ನೀಡಿ ಅಡಿಕೆ , ರಬ್ಬರ್, ತೆಂಗು,ಕೋಕೋ ಕೃಷಿ , ಅಡಿಕೆ ರೋಗ, ಕೊಯ್ಲು, ಫಸಲು,ರಾಸಾಯನಿಕಗಳು ಈ ಎಲ್ಲಾ ವಿಚಾರದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಪಡೆದರು.
ಸರ್ಕಾರದ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಕೃಷಿಯಲ್ಲೇ ಜೀವನ ಕಂಡುಕೊಂಡಿರುವ ಮತ್ತೊಬ್ಬ ಕೃಷಿಕರಾದ ಗೋಪಾಲಕೃಷ್ಣರವರ ಮನೆಗೆ ಭೇಟಿ ನೀಡಿ ಎರೆಹುಳು ಗೊಬ್ಬರದ ತಯಾರಿ, ಸವಾಲುಗಳು, ಜೇನು ಕೃಷಿ, ಮಲ್ಲಿಗೆ ಕೃಷಿ ಮತ್ತು ದನ ಸಾಕಾಣಿಕೆಯ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳಲಾಯಿತು .
ಈ ಸಂದರ್ಭದಲ್ಲಿ ಪ್ರಥಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮತ್ತು ವಿಭಾಗದ ಉಪನ್ಯಾಸಕಿ ಶೃತಿ ಜೈನ್ ಉಪಸ್ಥಿತರಿದ್ದರು.