News Karnataka Kannada
Thursday, March 28 2024
Cricket
ಮಂಗಳೂರು

ಮಂಗಳೂರು: ಸ್ವಸ್ತಿಕ ನ್ಯಾಷನಲ್‌ ಸ್ಕೂಲ್‌ನಲ್ಲಿ ತರಬೇತಿ ಕಾರ್ಯಾಗಾರ

Photo Credit : News Kannada

ಮಂಗಳೂರು: ಉರ್ವ ಸ್ಟೋರ್‌ ನಲ್ಲಿರುವ ಸ್ವಸ್ತಿಕ ನ್ಯಾಷನಲ್‌ ಸ್ಕೂಲ್‌ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಗೋ ಸ್ಕಿಲ್‌ ಲಾಜಿಕ್‌ ತರಬೇತಿ ಕಾರ್ಯಾಗಾರ ನಡೆಯಿತು. ಮಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಸ್ವಸ್ತಿಕ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಮತ್ತು ಉದ್ಯೋಗವನ್ನು ಜೊತೆ ಜೊತೆಯಾಗಿ ಮುಂದುವರಿಸುವ ಅಪೂರ್ವ ಅವಕಾಶವಿದೆ. ಕಲಿಯವ ಹಂತದಲ್ಲಿಯೇ ಉದ್ಯೋಗಿಗಳಾಗಿ ತೊಡಗಿಸಿಕೊಳ್ಳುವ ವಿನೂತನ ಪರಿಕಲ್ಪನೆ ವಿಶಿಷ್ಟವಾಗಿದೆ. ಹೀಗಾಗಿ ಶಿಕ್ಷಣ ಸಂಸ್ಥೆ ಮೇಲೆ ಅಭಿಮಾನ ಮೂಡಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಮಂಗಳೂರಿನಲ್ಲಿ ಇರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸ್ವಸ್ಥಿಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಮುಖದಲ್ಲಿ ಲವಲವಿಕೆ ಇದೆ. ಈ ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳು ಯಶಸ್ಸು ಕಾಣಲಿ ಎಂದು ಹಾರೈಸುವ ಅವಶ್ಯಕತೆಯೇ ಇಲ್ಲ. ನೀವೆಲ್ಲರೂ ಕಲಿಕೆಯ ಹಂತದಲ್ಲಿಯೇ ಔದ್ಯೋಗಿಕ, ಔದ್ಯಮಿಕ ರಂಗದ ಒಳಹೊರಗಿನ ಪ್ರತಿ ಅಂಶಗಳನ್ನು ಕಂಡುಕೊಂಡಿದ್ದೀರಿ ಹಾಗಾಗಿ ನಿಮಗೆ ಯಶಸ್ಸು ನಿಶ್ಚಿತ ಎಂದರು.

ಸಾಮಾನ್ಯ ಕಾಲೇಜುಗಳಲ್ಲಿ ಪದವಿ ಪಡೆದು ಹೊರಬರುವ ವಿದ್ಯಾರ್ಥಿಗಳಿಗೂ ಸ್ವಸ್ಥಿಕ ಸಂಸ್ಥೆಯ ವಿದ್ಯಾರ್ಥಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿನ ವಿದ್ಯಾರ್ಥಿಗಳು ಪಠ್ಯಕ್ರಮದೊಂದಿಗೆ ಉದ್ಯೋಗ, ಔದ್ಯೋಗಿಕ ಮಾರುಕಟ್ಟೆಯ ವಾಸ್ತವಿಕ ನೆಲಗಟ್ಟನ್ನು ಅರಿತುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಕರ ಶ್ರಮ ಸಾರ್ಥಕವಾಗಿದೆ ಎಂದರು.

ಎನ್‌ಐಪಿಎಂ ಮಂಗಳೂರು ಚಾಪ್ಟರ್‌ ಚೇರ್ಮನ್‌ ಸ್ಟೀವನ್‌ ಪಿಂಟೋ, ಜಿಪಂ ಸಿಇಒ ಡಾ. ಕುಮಾರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜೆಸಿಐ ಇಂಡಿಯಾ ನ್ಯಾಶನಲ್‌ ಟ್ರೈನರ್‌ ಎ.ವಿ. ವಾಮನ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಸಂಸ್ಥೆ ಚೇರ್ಮನ್‌ ಡಾ. ರಾಘವೇಂದ್ರ ಹೊಳ್ಳ, ಕಾಲೇಜು ಪ್ರಾಂಶುಪಾಲರಾದ ಮಾಲಿನಿ ಎನ್‌. ಹೆಬ್ಬಾರ್‌, ಫ್ಯಾಕಲ್ಟಿ ಕೋ ಆರ್ಡಿನೇಟರ್‌ ಪೂಜಾ ರಾವ್‌ ಮೊದಲಾದವರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು