ಬೆಂಗಳೂರು: ದುರ್ಯೋಧನ ಪಾತ್ರ ಆಯ್ಕೆ ಎಂದಾಗ ಮೊದಲ ಹೆಸರು ಬಂದದ್ದೆ ದರ್ಶನ್. ದರ್ಶನ್ ಇಲ್ಲದೆ ಕುರುಕ್ಷೇತ್ರ ಇಲ್ಲ ಎಂದು ನಿರ್ಮಾಪಕ ಮುನಿರತ್ನ ಹೇಳಿದರು.
ಇದೇ 9ರಂದು ವರಮಹಾಲಕ್ಷ್ಮೀ ಹಬ್ಬದಂದು ಚಿತ್ರ ಐದು ಭಾಷೆಗಳಿಗೆ ತೆರೆ ಕಾಣಲಿದೆ. ಚಿತ್ರ ಆಗಸ್ಟ್ 2ಕ್ಕೆ ರಿಲೀಸ್ ಆಗಬೇಕಿತ್ತು ಕಾರಣತರಂಗಳಿಂದ ಆಗಸ್ಟ್ 9ಕ್ಕೆ ಮುಂದೂಡಲಾಗಿದೆ. ಯಾವುದೇ ಕಾರಣಕ್ಕೂ ಹಿಂದೆಕ್ಕೆ ಹೋಗುವ ಸಾಧ್ಯನೇ ಇಲ್ಲ ಎಂದು ಮುನಿರತ್ನ ಹೇಳಿದರು.
ಚಿತ್ರ ಬಿಡುಗಡೆಯ ಸಂಪೂರ್ಣ ಜವಾಬ್ದಾರಿಯನ್ನು ರಾಕ್ ಲೈನ್ ವೆಂಕಟೇಶ್ ಹೊತ್ತುಕೊಮಡಿದ್ದಾರೆ. ಎಲ್ಲ ಕಲಾವಿದರೂ ಶ್ರದ್ಧೆಯಿಂದ ಕೆಲಸ ಮಾಡಿದ್ದು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.