ಹುಬ್ಬಳ್ಳಿ: ಕಿಚ್ಚ ಸುದೀಪ್ ಕೊನೆಗೂ ಮಂಗಳವಾರ ಮೌನ ಮುರಿದ್ದಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ಗೆ ತೀಕ್ಷ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಟ್ವೀಟ್ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ “I would respect.If he respect me” ನನಗೆ ಮಾರ್ಯಾದೆ ನೀಡಿದರೆ ನಾನೂ ಮರ್ಯಾದೆ ಕೊಡ್ತೇನೆ. ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇದೀಗ ಮಾಧ್ಯಮಗಳಲ್ಲಿ , ಸಾಮಾಜಿಕ ತಾಣಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಕಾರಣ “ನಾವಿಬ್ಬರು ಇನ್ನು ಮುಂದೆ ಸ್ನೇಹಿತರಲ್ಲ, ಒಂದೇ ಚಿತ್ರರಂಗದಲ್ಲಿ ಕೆಲಸಮಾಡುವ ಇಬ್ಬರು ನಟರು ಅಷ್ಟೇ ಎಂದು ದರ್ಶನ್ ಸುದೀಪ್ ವಿರುದ್ಧ ಟ್ವೀಟ್ ಮಾಡಿದ್ದರು.