ರೈತರ ನಿಜಜೀವನದ ಕಥಾ ಹಂದರ ಹೊಂದಿರುವ “ಶ್ರೀಮಂತ” ಚಲನಚಿತ್ರವೂ ಮೇ.19ರಂದು ರಾಜ್ಯದ 200ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹಾಯಕ ನಿರ್ದೇಶಕ ಶಿವರಾಜ ದಳವಾಯಿ ತಿಳಿಸಿದ್ದಾರೆ
ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ರೈತನ ಬದುಕನ್ನು ಇಟ್ಟುಕೊಂಡು ಶ್ರೀಮಂತ ಚಿತ್ರ ನಿರ್ಮಾಣ ಮಾಡಲಾಗಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಹುಭಾಷ ಸೋನ್ ಸೂದ್ ಅವರು ನಟ ಕನ್ನಡದಲ್ಲಿ ಪ್ರಥಮ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದಾರೆ. ನಾಯಕ ನಟಿಯಾಗಿ ಮುಂಬೈ ಬೆಡಗಿ ವೈಷ್ಣವಿ ಪಟವರ್ಧನ್ ನಟಿಸಿದ್ದಾರೆ.
ನವನಟ ಕ್ರಾಂತಿ, ಹಿರಿಯ ನಟರಾದ ರಮೇಶ್ ಭಟ್, ರವಿಶಂಕರ್ಗೌಡ, ಸಾಧುಕೋಕಿಲ. ಚರಣ್ರಾಜ್, ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ ಸೇರಿದಂತೆ ಹಿರಿಯರ ಕಲಾ ತಂಡವೇ ಅಭಿನಯಿಸಿದೆ. ಪ್ರಸಿದ್ದ ಗಾಯಕ ಎಸ್.ಪಿ.ಬಾಲಸುಬ್ರಮಣ್ಯ ಅವರು ಕನ್ನಡದಲ್ಲಿ ಕೊನೆಯ ಹಾಡನ್ನು ನಮ್ಮ ಚಿತ್ರಕ್ಕೆ ಹಾಡಿದ್ದಾರೆ. ನಾದ ಬ್ರಹ್ಮ ಡಾ.ಹಂಸಲೇಖ ಅವರು ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಚಿತ್ರವನ್ನು ಹಾಸನ ರಮೇಶ್ ಅವರು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ ಎಂದು ಹೇಳಿದರು.
ರಾಮನಗರ, ಹಾಸನ, ಮಂಡ್ಯ ಸೇರಿದಂತೆ ಉತ್ತರ ಕರ್ನಾಟಕ ಕೆಲವು ಭಾಗದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ರೈತರ ಕಥಾ ವಸ್ತು ಹೊಂದಿರುವುದರಿಂದ 100ರಕ್ಕೂ ಹೆಚ್ಚು ರೈತರು ಅಭಿನಯಿಸಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಹಳೆಯ ಕನ್ನಡ ಭಾಷಾ ಪ್ರಯೋಗವನ್ನು ಚಿತ್ರದಲ್ಲಿ ಮಾಡಲಾಗಿದೆ, 150ಕ್ಕೂ ಹೆಚ್ಚು ಗಾದೆ ಮಾತುಗಳನ್ನು ಬಳಕೆ ಮಾಡಿಕೊಂಡಿದ್ದೇವೆ ಎಂದು ಕನ್ನಡದ ಸೊಗಡಿನ ಬಳಕೆ ಬಗ್ಗೆ ವಿವರಿಸಿದ್ದಾರೆ.
ಈ ವೇಳೆ ಚಿತ್ರತಂಡ ಸದಸ್ಯರಾಗಿರುವ ಗುರು ಸಿದ್ದೇಗೌಡ, ಸುರೇಶ್ ಅವರ ಜತೆಗಿದ್ದರು.