News Karnataka Kannada
Thursday, April 18 2024
Cricket
ಸಾಂಡಲ್ ವುಡ್

ರೈತರ ನಿಜಜೀವನದ “ಶ್ರೀಮಂತ” ಚಿತ್ರ ತೆರೆಗೆ

farmers Real-life film "shreemantha" hit the screens
Photo Credit : By Author

ರೈತರ ನಿಜಜೀವನದ ಕಥಾ ಹಂದರ ಹೊಂದಿರುವ “ಶ್ರೀಮಂತ” ಚಲನಚಿತ್ರವೂ ಮೇ.19ರಂದು ರಾಜ್ಯದ 200ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹಾಯಕ ನಿರ್ದೇಶಕ ಶಿವರಾಜ ದಳವಾಯಿ ತಿಳಿಸಿದ್ದಾರೆ

ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ರೈತನ ಬದುಕನ್ನು ಇಟ್ಟುಕೊಂಡು ಶ್ರೀಮಂತ ಚಿತ್ರ ನಿರ್ಮಾಣ ಮಾಡಲಾಗಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಹುಭಾಷ ಸೋನ್ ಸೂದ್ ಅವರು ನಟ ಕನ್ನಡದಲ್ಲಿ ಪ್ರಥಮ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದಾರೆ. ನಾಯಕ ನಟಿಯಾಗಿ ಮುಂಬೈ ಬೆಡಗಿ ವೈಷ್ಣವಿ ಪಟವರ್ಧನ್ ನಟಿಸಿದ್ದಾರೆ.

ನವನಟ ಕ್ರಾಂತಿ, ಹಿರಿಯ ನಟರಾದ ರಮೇಶ್ ಭಟ್, ರವಿಶಂಕರ್‌ಗೌಡ, ಸಾಧುಕೋಕಿಲ. ಚರಣ್‌ರಾಜ್, ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ ಸೇರಿದಂತೆ ಹಿರಿಯರ ಕಲಾ ತಂಡವೇ ಅಭಿನಯಿಸಿದೆ. ಪ್ರಸಿದ್ದ ಗಾಯಕ ಎಸ್.ಪಿ.ಬಾಲಸುಬ್ರಮಣ್ಯ ಅವರು ಕನ್ನಡದಲ್ಲಿ ಕೊನೆಯ ಹಾಡನ್ನು ನಮ್ಮ ಚಿತ್ರಕ್ಕೆ ಹಾಡಿದ್ದಾರೆ. ನಾದ ಬ್ರಹ್ಮ ಡಾ.ಹಂಸಲೇಖ ಅವರು ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಚಿತ್ರವನ್ನು ಹಾಸನ ರಮೇಶ್ ಅವರು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ ಎಂದು ಹೇಳಿದರು.

ರಾಮನಗರ, ಹಾಸನ, ಮಂಡ್ಯ ಸೇರಿದಂತೆ ಉತ್ತರ ಕರ್ನಾಟಕ ಕೆಲವು ಭಾಗದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ರೈತರ ಕಥಾ ವಸ್ತು ಹೊಂದಿರುವುದರಿಂದ 100ರಕ್ಕೂ ಹೆಚ್ಚು ರೈತರು ಅಭಿನಯಿಸಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಹಳೆಯ ಕನ್ನಡ ಭಾಷಾ ಪ್ರಯೋಗವನ್ನು ಚಿತ್ರದಲ್ಲಿ ಮಾಡಲಾಗಿದೆ, 150ಕ್ಕೂ ಹೆಚ್ಚು ಗಾದೆ ಮಾತುಗಳನ್ನು ಬಳಕೆ ಮಾಡಿಕೊಂಡಿದ್ದೇವೆ ಎಂದು ಕನ್ನಡದ ಸೊಗಡಿನ ಬಳಕೆ ಬಗ್ಗೆ ವಿವರಿಸಿದ್ದಾರೆ.

ಈ ವೇಳೆ ಚಿತ್ರತಂಡ ಸದಸ್ಯರಾಗಿರುವ ಗುರು ಸಿದ್ದೇಗೌಡ, ಸುರೇಶ್ ಅವರ ಜತೆಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು