ನಂಜನಗೂಡು: ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ಬಾ ನಲ್ಲೆ ಮದುವೆಗೆ ಚಿತ್ರದ ಟೀಸರ್ ಅನ್ನು ಖ್ಯಾತ ವಕೀಲ ಮಲ್ಲಿಕಾರ್ಜುನಸ್ವಾಮಿ ಬಿಡುಗಡೆ ಮಾಡಿದರು. ಬಳಿಕ ವಕೀಲ ಎ.ಆರ್. ಕಾಂತರಾಜ್ ಮಾತನಾಡಿ, ಬಾ ನಲ್ಲೆ ಮದುವೆಗೆ ಚಿತ್ರವು ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳು ಸೇರಿ ಸಿನಿಮಾ ಮಾಡಿದ್ದಾರೆ.
ಜನತೆ ಗ್ರಾಮೀಣ ಪ್ರತಿಭೆಗಳನ್ನು ಬೆಳೆಸಲು ಮುಂದಾಗಬೇಕು ಎ೦ದು ತಿಳಿಸಿದರು. ಬಾ ನಲ್ಲೆ ಮದುವೆಗೆ ಚಲನಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿ ವೀಕ್ಷಿಸಿಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಗಟ್ಟವಾಡಿ ಮಂಜುನಾಥ್, ಬಾ ನಲ್ಲಿ ಮದುವೆಗೆ ಚಿತ್ರದ ನಿರ್ದೆಶಕ ಯೋಗೇಶ್ ನಂದನ್, ನಟಿ ಶೋಭಾ, ನಟ ಸಚಿನ್, ಸೇರಿದಂತೆ ಹಲವರು ಭಾಗವಹಿಸಿದ್ದರು.