News Kannada
Wednesday, December 06 2023
ಮನರಂಜನೆ

ಸೈಮಾ 2023: ಕನ್ನಡಿಗರ ಗಮನ ಸೆಳೆದ ರಿಷಬ್ ಶೆಟ್ಟಿ & ಜ್ಯೂ.ಎನ್​ಟಿಆರ್​

rishab JNR 1
Photo Credit : Twitter News Kannada

ದುಬೈನಲ್ಲಿ 2023ನೇ ವರ್ಷದ ಸೈಮಾ ಪ್ರಶಸ್ತಿಗಳ ಸಮಾರಂಭ ನಡೆದಿದೆ.  ಈ ಸಂಭ್ರಮದಲ್ಲಿ ಕನ್ನಡಿಗರಿಗೆ ತುಂಬಾ ವಿಶೇಷವಾಗಿ ಗಮನ ಸೆಳೆದಿದ್ದು ರಿಷಬ್ ಶೆಟ್ಟಿ ಹಾಗೂ ಜ್ಯೂನಿಯರ್ ಎನ್​ಟಿಆರ್​ ನಡುವೆ ನಡೆದ ಕನ್ನಡ ಸಂಭಾಷಣೆ.

ಸೆ.15ರಂದು ದುಬೈನಲ್ಲಿ 2023ನೇ ವರ್ಷದ ಸೈಮಾ ಪ್ರಶಸ್ತಿಗಳ ಸಮಾರಂಭ ನಡೆದಿತ್ತು. ತೆಲುಗು ಮತ್ತು ಕನ್ನಡ ಇಂಡಸ್ಟ್ರಿಯ ಸಾಕಷ್ಟು ಕಲಾವಿದರು ಭಾಗಿವಹಿಸಿದ್ದರು. ಈ ವೇಳೆ ಜ್ಯೂನಿಯರ್ ಎನ್​ಟಿಆರ್ ಮತ್ತು ಕನ್ನಡ ನಟ ರಿಷಬ್ ಶೆಟ್ಟಿ ಪರಸ್ಪರ ಕನ್ನಡದಲ್ಲಿ ಮಾತಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು,  ಕನ್ನಡಿಗರ ಮನ ಗೆದ್ದಿದೆ. ಕಾಂತಾರ ಸಿನಿಮಾದ ನಟನೆ ಹಾಗೂ ನಿರ್ದೇಶನಕ್ಕಾಗಿ ರಿಷಬ್ ಶೆಟ್ಟಿ ಪ್ರಶಸ್ತಿ ಪಡೆದುಕೊಂಡರು. ಈ ವೇಳೆ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಜ್ಯೂನಿಯರ್ ಎನ್​ಟಿಆರ್​, ರಿಷಬ್ ಶೆಟ್ಟಿ ಅವರನ್ನು ಕನ್ನಡದಲ್ಲಿ ಮಾತಾಡಿಸಿದ್ದಾರೆ.

ʼರಿಷಬ್ ನೋಡಿ ಹೇಗಿದ್ದೀರಾ ಸರ್’ ಅಂತ ಕನ್ನಡದಲ್ಲಿ ಕೇಳಿ ಅಭಿನಂದಿಸಿದ್ದಾರೆ. ಅದಕ್ಕೆ ರಿಷಬ್ ಸಹ ಕನ್ನಡದಲ್ಲೇ ‘ಚೆನ್ನಾಗಿದ್ದೀನಿ ಸರ್’ ಎಂದಿದ್ದಾರೆ. ಅಷ್ಟರಲ್ಲೇ ಮಧ್ಯ ಪ್ರವೇಶಿಸಿದ ನಿರೂಪಕ ಅಕುಲ್ ಬಾಲಾಜಿ ಸರ್ ಕುಂದಾಪುರದಲ್ಲಿ ಹೀಗೇ ಮಾತಾಡ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಜ್ಯೂನಿಯರ್ ಎನ್​ಟಿಆರ್ ನಮ್ಮ ಅಮ್ಮನ ಜೊತೆಯೂ ಹೀಗೆ ಮಾತಾಡ್ತೀನಿ ಎಂದಿದ್ದಾರೆ. ಹೀಗೆ ಮಾತು ಮುಂದುವರಿಸಿದ ರಿಷಬ್ ಶೆಟ್ಟಿ ‘ಸರ್ ನಿಮ್ಮನ್ನು ನೇರವಾಗಿ ಭೇಟಿ ಮಾಡಿ ಧನ್ಯವಾದ ತಿಳಿಸಲು ಸಾಧ್ಯವಾಗಲಿಲ್ಲ. ಕಿರಿಕ್ ಪಾರ್ಟಿ ತಂಡ ಬಂದಾಗ ನೀವೇ ಪ್ರಶಸ್ತಿ ಕೊಟ್ಟಿದ್ದೀರಿ. ನಿಮ್ಮ ತಾಯಿ, ನಮ್ಮೂರು ಒಂದೇ ಆಗಿರೋದ್ರಿಂದ ನಾವೆಲ್ಲಾ ಒಂದು ಕುಂದಾಪುರದವರು’’ ಎಂದು ಸಂತಸ ಹಂಚಿಕೊಂಡರು.

 

See also  ಗೋಲ್ಡನ್ ಸ್ಟಾರ್ ಗಣೇಶ್ ಗೆ ಸಿನಿಮಾ ಮಾಡೋ ಆಸೆ ಇದೆ: ಪವನ್ ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು