News Kannada
Saturday, June 03 2023
ಮನರಂಜನೆ

ಕೇರಳ ಸ್ಟೋರಿ ಸತ್ಯವೆಂದು ನಿರೂಪಿಸುವವರಿಗೆ 1 ಕೋಟಿ ರೂ. ಬಹುಮಾನ

Kerala story row: Number of missing persons reduced from 3,000 to 3
Photo Credit : News Kannada

ತಿರುವನಂತಪುರಂ: “ದಿ ಕೇರಳ ಸ್ಟೋರಿ” ಚಲನಚಿತ್ರದಲ್ಲಿ ಇರುವ ಅಂಶಗಳು ಸತ್ಯವೆಂದು ನಿರೂಪಿಸುವವವರಿಗೆ 1 ಕೋಟಿ ರೂ. ನೀಡುವುದಾಗಿ ಯುಡಿಎಫ್‌ನ ಯುವ ಘಟಕ ಮುಸ್ಲಿಂ ಲೀಗ್‌ ಮುಖ್ಯಸ್ಥ ಮುಖ್ಯಸ್ಥ ಫಿರೋಜ್ ಹೇಳಿದ್ದಾರೆ.

ಮೇ 5 ರಂದು ಚಲನಚಿತ್ರ ಬಿಡುಗಡೆಯಾಗಲಿದ್ದು, ಕೇರಳದಿಂದ ಸುಮಾರು 32,000 ಮಹಿಳೆಯರನ್ನು ಬ್ರೈನ್ ವಾಶ್ ಮಾಡಿ, ಮತಾಂತರಗೊಳಿಸಿ ಭಾರತ ಮತ್ತು ವಿದೇಶಗಳಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳಿಗೆ ಅವರನ್ನು ಬಳಕೆ ಮಾಡಿಕೊಂಡಿದ್ದು, ನಂತರ ಅವರು ನಾಪತ್ತೆಯಾಗಿದ್ದಾರೆ ಎಂಬ ಕಥಾಹಂದರ ಹೊಂದಿದೆ.

ಅದೇ ರೀತಿ ಮತಾಂತರಗೊಂಡ ಮತ್ತು ನಂತರ ಇಸ್ಲಾಮಿಕ್ ಸ್ಟೇಟ್‌ಗೆ ಸೇರಿದ ಕೇರಳದ ಮಹಿಳೆಯರನ್ನು ಹೆಸರಿಸುವ ಯಾರಿಗಾದರೂ 11 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ವಕೀಲ ಮತ್ತು ನಟ ಶುಕ್ಕೂರ್ ಹೇಳಿದ್ದಾರೆ.

ಚಿತ್ರದ ಟೀಸರ್ ಬಿಡುಗಡೆಯಾದ ಕೂಡಲೇ ಆಡಳಿತಾರೂಢ ಸಿಪಿಐ-ಎಂ ನೇತೃತ್ವದ ಎಡಪಕ್ಷಗಳು ಮತ್ತು ಯುಡಿಎಫ್ ಚಿತ್ರ ಪ್ರದರ್ಶನ ಮಾಡಬಾರದು ಎಂದು ಒತ್ತಾಯಿಸಿದವು. ಕೇರಳದ ಸಂಸ್ಕೃತಿ ಸಚಿವ ಸಾಜಿ ಚೆರಿಯನ್, ‘ದಿ ಕೇರಳ ಸ್ಟೋರಿ’ ತೆರೆಕಂಡರೆ ಜನರು ಬಹಿಷ್ಕಾರ ಹಾಕಬೇಕು. ಅಲ್ಲದೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

See also  ಮೈಸೂರು: ಬಿಜೆಪಿಯಲ್ಲಿ ಮೂರನೇ ಮುಖ್ಯಮಂತ್ರಿ ಪ್ರಸ್ತಾಪವೇ ಇಲ್ಲ ಎಂದ ಎಸ್‌.ಟಿ ಸೋಮಶೇಖರ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು