News Kannada
Saturday, April 01 2023

ಆರೋಗ್ಯ

ನಾವು ಖುಷಿಯಾಗಿರಲು ಮಾನಸಿಕ ಆರೋಗ್ಯವೂ ಬೇಕು!

Photo Credit :

ನಾವು ಖುಷಿಯಾಗಿರಲು ಮಾನಸಿಕ ಆರೋಗ್ಯವೂ ಬೇಕು!

ನಾವು ಯಾವುದೇ ಕಾಯಿಲೆ ಇಲ್ಲದೆ ದೈಹಿಕವಾಗಿ ಆರೋಗ್ಯವಾಗಿದ್ದರೂ ಕೆಲವೊಮ್ಮೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗಿರುತ್ತೇವೆ. ಇದಕ್ಕೆ ಕಾರಣಗಳು ಹಲವು ಇರಬಹುದು. ಆದರೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿಯಲೇ ಬೇಕು.

ಮಾನಸಿಕ ಆರೋಗ್ಯವನ್ನು ನಾವು ಕಾಪಾಡಿಕೊಳ್ಳದೆ ಹೋದರೆ ಯಾವುದೇ ಸುಂದರ ಕ್ಷಣಗಳನ್ನು ಸಂಭ್ರಮಿಸಲು ಸಾಧ್ಯವಿಲ್ಲ. ಜತೆಗೆ ನಾವು ಎಲ್ಲದರಲ್ಲೂ ಪ್ರತ್ಯೇಕವಾಗಿ ಒಂಟಿತನ ನಮ್ಮನ್ನು ಆವರಿಸಿಬಿಡಬಹುದು. ಅದು ಕ್ರಮೇಣ ನಮ್ಮನ್ನು ಖಿನ್ನತೆಗೆ ತಳ್ಳಿದರೆ ಅಚ್ಚರಿ ಪಡಬೇಕಾಗಿಲ್ಲ.

ಕೆಲವರು ಇರುತ್ತಾರೆ. ಅವರು ಯಾವ ವಿಚಾರವನ್ನೂ ಹಗುರವಾಗಿ ಪರಿಗಣಿಸುವುದಿಲ್ಲ. ಎಲ್ಲವನ್ನು ಅದು ತಮಗೆ ಸಂಬಂಧಿಸಿದಲ್ಲದಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸುವುದು ಮತ್ತು ಅದರ ಬಗ್ಗೆಯೇ ಆಲೋಚನೆ ಮಾಡುವುದರ ಮೂಲಕ ತಮ್ಮ ಸಂತಸದ ಕ್ಷಣಗಳನ್ನು ಕಳೆದುಕೊಳ್ಳುತ್ತಾರೆ.

ಇನ್ನೊಂದು ವಿಚಾರವನ್ನು ಇಲ್ಲಿ ನಾವು ಗ್ರಹಿಸಲೇ ಬೇಕಾಗುತ್ತದೆ. ಅದು ಏನೆಂದರೆ ಇಲ್ಲಿ ದೈಹಿಕ ಮತ್ತು ಮಾನಸಿಕ ಶ್ರಮದ ದುಡಿಮೆಗಳಿದ್ದು ಎರಡರಲ್ಲಿಯೂ ಸಮಸ್ಯೆಯಿದೆ. ಎರಡನ್ನೂ ಮಾಡುವ ಜನ ಖುಷಿಯಾಗಿ ಜೀವನ ಸಾಗಿಸಬೇಕು. ಆದರೆ ಇಬ್ಬರೂ ಕೂಡ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮ ದುಡಿಮೆಗಳು ನಮಗೆ ತೃಪ್ತಿ ಕೊಡುತ್ತಿಲ್ಲ. ದೈಹಿಕ ಶ್ರಮದ ದುಡಿಮೆಯಿಂದ ಬದುಕುವಾತ ಆರೋಗ್ಯಕರವಾಗಿದ್ದರೆ, ಮಾನಸಿಕ ಶ್ರಮದ ದುಡಿಮೆಯಾತನಿಗೆ ನೆಮ್ಮದಿಯಾಗಿ ಬದುಕುವುದು ಕಷ್ಟವಾಗಿ ಗೋಚರಿಸುತ್ತಿದೆ. ಈತನ ಬಳಿ ಕೈ ತುಂಬಾ ಹಣವಿದ್ದರೂ ಒಂದು ಒಳ್ಳೆಯ ಆರೋಗ್ಯಕರ ಬದುಕು ಕಟ್ಟಿಕೊಳ್ಳುವಲ್ಲಿ ಪರದಾಡುತ್ತಿರುವುದು ಎದ್ದು ಕಾಣುತ್ತಿದೆ.

ಇವತ್ತು ದೈಹಿಕ ಶ್ರಮದ ಕೆಲಸ ಕಾರ್ಯಗಳನ್ನು ಮಾಡುವ ವ್ಯಕ್ತಿಗೂ ಮಾನಸಿಕ ಶ್ರಮದಿಂದ ದುಡಿಯುವ ಹೋಲಿಕೆ ಮಾಡಿದರೆ ದೈಹಿಕ ಶ್ರಮವಹಿಸಿ ಕೆಲಸ ಮಾಡುವ ವ್ಯಕ್ತಿ ಹೆಚ್ಚಿನ ಚಟುವಟಿಯಲ್ಲಿರುತ್ತಾನೆ. ಅಷ್ಟೇ ಅಲ್ಲ ಆರೋಗ್ಯವಾಗಿರುವುದನ್ನು ನಾವು ಕಾಣಬಹುದು. ಕೆಲವರು ಹೆಚ್ಚುತ್ತಿರುವ ದೇಹದ ತೂಕವನ್ನು ಇಳಿಸಿಕೊಳ್ಳುವುದೇ ಕೆಲವರಿಗೆ ಸಮಸ್ಯೆಯಾಗಿ ಕಾಡುತ್ತದೆ. ಮಡಕೆ ಕಟ್ಟಿದ ಡೊಳ್ಳು ಹೊಟ್ಟೆ, ಡ್ರಮ್‍ಗಳಂತೆ ಗೋಚರಿಸುವ ದೇಹ ಎಲ್ಲವೂ ಅಸಹ್ಯ ಮೂಡಿಸಬಹುದು.

ಈಗಿನ ಪರಿಸ್ಥಿತಿಯಲ್ಲಿ ತಾವು ಆಯ್ದುಕೊಂಡಿರುವ ದುಡಿಮೆಯ ಕ್ಷೇತ್ರಗಳಲ್ಲಿ ಕೆಲವು ಬಹಳ ಮಾನಸಿಕವಾಗಿ ಕಿರಿಕಿರಿ ತರುವ ಮತ್ತು ಒತ್ತಡದ ಕೆಲಸಗಳಾಗಿವೆ. ಇಂತಹ ಕ್ಷೇತ್ರಗಳಲ್ಲಿ ದುಡಿಯುವವರು ತಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕು. ಕೋಪ, ಆಕ್ರೋಶ, ಸೇರಿದಂತೆ ಉದ್ವೇಗಕ್ಕೊಳಗಾಗದೆ ಎಲ್ಲವನ್ನು ಸಮಾಧಾನವಾಗಿ, ಸಮಚಿತ್ತದಿಂದ ಎದುರಿಸುವ ಮಾನಸಿಕ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಇದು ಸುಲಭದ ಕೆಲಸವಲ್ಲ. ಇಲ್ಲಿ ಎಷ್ಟು ತಾಳ್ಮೆ ವಹಿಸುತ್ತೇವೆಯೋ ಅಷ್ಟೇ ಒಳ್ಳೆಯದು.

ಇನ್ನು ಸಾರ್ವಜನಿಕರ ಒಡನಾಟದಲ್ಲಿ ಕೆಲಸ ಮಾಡುವವರ ಪರಿಸ್ಥಿತಿಯಂತು ವಿಭಿನ್ನವಾಗಿರುತ್ತದೆ. ನೂರಾರು ಜನರರೊಂದಿಗೆ ವ್ಯವಹರಿಸುವಾಗ ಒಬ್ಬೊಬ್ಬರು ಒಂದೊಂದು ಮನಸ್ಥಿತಿಯಲ್ಲಿರುತ್ತಾರೆ. ಅವರೆಲ್ಲರನ್ನು ನಿಭಾಯಿಸಿಕೊಂಡು ಮುಂದುವರೆಯಬೇಕಾದರೆ ದೈಹಿಕ ಆರೋಗ್ಯಕ್ಕಿಂತ ಮಾನಸಿಕವಾಗಿ ಆರೋಗ್ಯವಂತನಾಗಿರುವುದು ತುಂಬಾ ಒಳ್ಳೆಯದಾಗಿರುತ್ತದೆ.

ದೇಹದ ಸಮಸ್ಯೆಗಳಿಗೆ ನಾವು ತಕ್ಷಣ ಚಿಕಿತ್ಸೆ ಪಡೆದುಕೊಂಡು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಆದರೆ ಮಾನಸಿಕ ಒತ್ತಡ ಅಷ್ಟು ಸುಲಭವಲ್ಲ. ಅದು ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡಕ್ಕೆ ಒಳಗಾದವರು ಬಹಳಷ್ಟು ಮಂದಿ ಕಚೇರಿ ಮಾತ್ರವಲ್ಲದೆ ತಮ್ಮ ಮನೆಯಲ್ಲಿಯೂ ಚಿಕ್ಕಪುಟ್ಟ ವಿಚಾರಗಳಿಗೆ ರಂಪಾಟ ಮಾಡುತ್ತಾ ಸ್ವಾಸ್ಥ್ಯವನ್ನೇ ಹಾಳುಗೆಡವುತ್ತಾರೆ. ಇನ್ನು ಕೆಲವರು ಖಿನ್ನತೆಗೊಳಗಾಗಿ ಆತ್ಮಹತ್ಯೆಗೂ ಶರಣಾಗಿ ಬಿಡಬಹುದು.

See also  ಬದುಕಿನ ಎರಡು ಆನಂದಗಳು ಗೊತ್ತಾ?

ನಾವು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮೊದಲಿಗೆ ದೇಹವನ್ನು ದಂಡಿಸಬೇಕು. ಅಂದರೆ ವ್ಯಾಯಾಮ ಮಾಡುವುದು, ವಾಕಿಂಗ್ ಮಾಡುವುದು, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದು, ಹೆಂಡತಿ ಮಕ್ಕಳೊಂದಿಗೆ ದೇವಸ್ಥಾನ ಅಥವಾ ಯಾವುದಾದರೂ ಪ್ರವಾಸಿ ತಾಣಗಳಿಗೆ ತೆರಳುವುದು, ಸಾರ್ವಜನಿಕ ಕಾರ್ಯಕ್ರಮಗಳು, ಬಂಧುಬಳಗದವರೊಂದಿಗೆ ಸೇರಿ ಒಂದಷ್ಟು ಸಮಯ ಕಳೆಯುವುದು, ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಚೆನ್ನಾಗಿ ನಿದ್ದೆ ಮಾಡುವುದು ಹೀಗೆ ತಮ್ಮ ಬಿಡುವಿನ ಸಮಯವನ್ನು ಕಳೆಯಬೇಕು. ಹೀಗೆ ನಾವಾಗಿಯೇ ನಾವು ಸಂತಸದ ಕ್ಷಣಗಳನ್ನು ಸೃಷ್ಠಿ ಮಾಡಿಕೊಳ್ಳಬೇಕು. ಆಗ ಮಾತ್ರ ನೆಮ್ಮದಿಯಾಗಿರಲು ಸಾಧ್ಯ ಎಂಬುದನ್ನು ಮರೆಯಬಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು