News Kannada
Thursday, March 23 2023

ಸಮುದಾಯ

ಕುಂದಾಪುರ: ಗ್ರಾಮೀಣ ಭಾಗದ ಜನರಿಗೆ ಸೇವಾ ಕಾರ್ಯಗಳು ಮುಟ್ಟಿರುವುದು ಖುಷಿಕೊಟ್ಟಿದೆ

People in rural areas are happy that service works have reached out to them.
Photo Credit : News Kannada

ಕುಂದಾಪುರ: ಗ್ರಾಮೀಣ ಭಾಗದ ಜನರು ಕೂಡ ಲಯನ್ಸ್ ಕ್ಲಬ್ಬಿನ ಕಾರ್ಯ ಚಟುವಟಿ ಬಗ್ಗೆ ಮಾತನಾಡುತ್ತಿದ್ದಾರೆ ಸಾಮಾಜಿಕ ಸೇವಾ ಕಾರ್ಯಗಳು ಹಳ್ಳಿ ಜನರಿಗೆ ಮುಟ್ಟಿರುವುದು ಖುಷಿಕೊಟ್ಟಿದೆ ಮಾನವನು ಸಂಘ ಜೀವಿ ಆದಾಗ ಮಾತ್ರ ಜೀವನದಲ್ಲಿ ಅನುಭವಗಳನ್ನು ಅನುಭವಿಸಲು ಸಾಧ್ಯವಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಎಂ.ಕೆ.ಭಟ್ ಎಂಜೆಎಫ್ ಹೇಳಿದರು.

ನಾವುಂದ ಲಯನ್ಸ್ ಕ್ಲಬ್ಬ್ ವತಿಯಿಂದ ನಾವುಂದ ಅರೆಹೊಳೆ ಕ್ರಾಸ್ ಮಾಹಲಸಾ ಮಾಂಗಲ್ಯ ಹಾಲ್‍ನಲ್ಲಿ ನಡೆದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಮಾನ್ಯ ಜನರು ಲಯನ್ಸ್ ಕ್ಲಬ್ಬಿನಲ್ಲಿ ಸೇರಿಕೊಂಡು ಅಶಕ್ತರ ಬಾಳಿಗೆ ನೆರವನ್ನು ನೀಡುತ್ತಿದ್ದಾರೆ ಸಾಮಾಜಿಕ ಕಾರ್ಯದ ಮೂಲಕ ಊರಿನ ಅಭಿವೃದ್ಧಿಗೂ ಶ್ರಮಿಸುತ್ತಿದ್ದಾರೆ ಸಮಾಜ ಸೇವೆ ಮುಖೇನ ನಾವುಂದ ಕ್ಲಬ್ಬ್ ಟಾಪ್ 10 ರಲ್ಲಿ ಗುರುಸಿಕೊಂಡಿರುವುದು ಶ್ಲಾಘನೀಯ ಎಂದರು.

ಲಯನ್ಸ್ ಕ್ಲಬ್ ನಾವುಂದ ಅಧ್ಯಕ್ಷ ಜಗದೀಶ ಶೆಟ್ಟಿ ಕುದ್ರುಕೋಡು ಅಧ್ಯಕ್ಷತೆ ವಹಿಸಿ ಮಾತನಾಡಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ಸಮಾಜದಲ್ಲಿ ಆತ್ಮ ವಿಶ್ವಾಸದಿಂದ ಬದುಕಬಹುದು ಎಂದು ಹೇಳಿದರು.

ಫಸ್ಟ್ ವೈಸ್ ಡಿಸ್ಟ್ರಿಕ್ ನೇರಿ ಕರ್ನೆಲಿಯೋ,ಸೆಕೆಂಡ್ ವೈಸ್ ಡಿಸ್ಟ್ರಿಕ್ ಗವರ್ನರ್ ಮೊಹಮ್ಮದ್ ಹನಿಫ್ ಎಂಜೆಎಫ್,ರಿಜನ್ ಚೇರ್ ಪರ್ಸನ್ ಕಿರಣ್ ಕುಂದಾಪುರ, ಎಕ್ಸ್‍ಟೆನ್ಯನಲ್ ಚೇರ್ ಪರ್ಸನ್ ವಿಶ್ವನಾಥ ಶೆಟ್ಟಿ ಗಾಯಾಡಿ,ವಲಯಾಧ್ಯಕ್ಷ ನರಸಿಂಹ ದೇವಾಡಿಗ,ನಾವುಂದ ಕ್ಲಬ್ಬಿನ ಕಾರ್ಯದರ್ಶಿ ದಿನೇಶ್ ಆಚಾರ್ಯ,ಕೋಶಾಧಿಕಾರಿ ಸಮರ ಶೆಟ್ಟಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಗದೀಶ ಪೂಜಾರಿ ಹಕ್ಕಾಡಿ,ಭರತ ನಾಟ್ಯ ಕಲಾವಿದೆ ಶ್ವೇತಾ ರಾವ್ ಅರೆಹೊಳೆ,ಬಿ.ಬಿ.ಎ ಅಂತಿಮ ಪರೀಕ್ಷೆಯಲ್ಲಿ 2 ನೇ ಸ್ಥಾನ ಪಡೆದ ಶುಭಾಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು,8 ಜನ ಹೊಸ ಸದಸ್ಯರು ನಾವುಂದ ಕ್ಲಬ್ಬಿಗೆ ಸೇರ್ಪಡೆಗೊಂಡರು.ಜಗದೀಶ್ ಶೆಟ್ಟಿ ಸ್ವಾಗತಿಸಿದರು.ದಿನೇಶ್ ಆಚಾರ್ಯ ವರದಿ ವಾಚಿಸಿ ವಂದಿಸಿದರು.ಶಶಿಧರ ಶೆಟ್ಟಿ ನಿರೂಪಿಸಿದರು.

See also  `ರಾಷ್ಟ್ರೀಯ ಇಂಜಿನಿಯರ್ಸ್ ಡೇ' ಆಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು