News Kannada
Saturday, September 23 2023
ಸಮುದಾಯ

ಚಾಮರಾಜನಗರ: ಶಿವಪುರ ಗ್ರಾಮದಲ್ಲೊಂದು ವಾನರ ದೇಗುಲ

A monkey temple in Chamarajanagar
Photo Credit : News Kannada

ಚಾಮರಾಜನಗರ: ಸಾಮಾನ್ಯವಾಗಿ ಎಲ್ಲ ಕಡೆಯೂ ಆಂಜನೇಯನ ದೇಗುಲವಿರುತ್ತದೆ. ಆದರೆ ವಾನರನಿಗಾಗಿಯೇ ನಿರ್ಮಿಸಿದ ದೇಗುಲವೊಂದು ಜಿಲ್ಲೆಯಲ್ಲಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ.

ಚಾಮರಾಜನಗರ ತಾಲೂಕಿನ ಶಿವಪುರ ಗ್ರಾಮದಲ್ಲಿ ವಾನರನ ದೇಗುಲವಿದ್ದು, ಈ ದೇಗುಲದಲ್ಲಿ ಪ್ರತಿನಿತ್ಯವೂ ವಾನರನಿಗೆ ಪೂಜಾಕೈಂಕರ್ಯಗಳು ನಡೆಯುತ್ತಿವೆ. ಇಷ್ಟಕ್ಕೂ ಈ ವಾನರ ದೇಗುಲ ನಿರ್ಮಾಣವಾಗಿದ್ದು, ಹೇಗೆ ಎಂಬುದನ್ನು ನೋಡುವುದಾದರೆ ಶಿವಪುರ ಗ್ರಾಮದಲ್ಲಿ 2017ರಲ್ಲಿ ಕೋತಿ ಮರಿಯೊಂದು ಆಕಸ್ಮಿಕವಾಗಿ ಮೃತಪಟ್ಟಿತ್ತು.

ಹೀಗೆ ಮೃತಪಟ್ಟ ಕೋತಿ ಮರಿಯನ್ನು ಗ್ರಾಮಸ್ಥರು ಎಸೆಯದೆ ಅದನ್ನು ಶಾಸ್ತ್ರೋಕ್ತವಾಗಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಿ ಸಮಾಧಿ ಮಾಡಿದರು. ಅದಾದ ನಂತರ ಸ್ಥಳೀಯ ಪುರೋಹಿತರ ಸಲಹೆ ಪಡೆದು ಪುಟ್ಟದಾದ ಗುಡಿಯೊಂದನ್ನು ನಿರ್ಮಿಸಿ ಅದರ ಉದ್ಘಾಟನೆ ಮಾಡಿ ಪೂಜೆ ಸಲ್ಲಿಸಿದರು. ಆ ವರ್ಷ (2017) ಶ್ರಾವಣ ಮಾಸದ ಶನಿವಾರ ಪೂಜಾ ಕಾರ್ಯವನ್ನು ನಡೆಸಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಜನ ಈ ದೇಗುಲಕ್ಕೆ ಕೈ ಮುಗಿಯುತ್ತಾ ಬರುತ್ತಿದ್ದಾರೆ.

ಒಟ್ಟಾರೆ ಶಿವಪುರ ಗ್ರಾಮದಲ್ಲಿರುವ ಪುಟ್ಟದಾದ ವಾನರನ ದೇಗುಲ ಗಮನಸೆಳೆಯುತ್ತಿದ್ದು, ಎಲ್ಲರೂ ಈ ದೇಗುಲಕ್ಕೆ ನಮಿಸಿ ಮುಂದೆ ಸಾಗುವುದು ಮಾಮೂಲಿಯಾಗಿದೆ.

See also  ಮಂಗಳೂರು: ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಮತ್ತೆ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು