News Karnataka Kannada
Thursday, April 25 2024
Cricket
ಸಮುದಾಯ

ಕೆ.ಆರ್.ಪೇಟೆ: ಮಾದಾರ ಚನ್ನಯ್ಯ ದಾಳದ ಹಬ್ಬ ಆಚರಣೆ

K.R. Pet: Madara Channayya Dalada festival celebrated
Photo Credit : By Author

ಕೆ.ಆರ್.ಪೇಟೆ: ಕೊರೋನಾ ಹಿನ್ನಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿಂತು ಹೋಗಿದ್ದ ತಾಲೂಕಿನ ಹೊಸಹೊಳಲು ಮಾದಾರ ಚನ್ನಯ್ಯ ದಾಳದ ಹಬ್ಬವನ್ನು ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಯಿತು.

ಹಬ್ಬದ ಹಿನ್ನಲೆಯಲ್ಲಿ ಯುವತಿಯರು, ಮಹಿಳೆಯರು ತಂಬಿಟ್ಟು ಆರತಿ ಹಾಗೂ ಪೂರ್ಣ ಕುಂಭ ಕಳಸದೊಂದಿಗೆ ಗ್ರಾಮದಿಂದ ಹೊರಟು ಊರಿನ ಹೊರಗೆ ಇರುವ ಕೆರೆಯ ಪಕ್ಕದಲ್ಲಿರುವ ಜಮೀನಿನಲ್ಲಿ ಒಂದು ಚರ್ಮದಾಳ ಹಾಗೂ ಇನ್ನೊಂದು ಬಟ್ಟೆದಾಳವನ್ನು ತಯಾರು ಮಾಡಿ ಅದನ್ನು ಐದು ಹೆಣ್ಣುಮಕ್ಕಳಿಂದ ವಿಶೇಷ ಪೂಜೆಯನ್ನು ಮಾಡಿಸಿದರು. ಇದೇ ವೇಳೆ ಯುವಕರು ಪಟಾಕಿ‌ ಸಿಡಿಸಿ ಕುಣಿದು ಕುಪ್ಪಳಿಸಿದರೆ. ಇಡೀ ಗ್ರಾಮವೇ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಿತು.

ಹಬ್ಬದಲ್ಲಿ ಪಾಲ್ಗೊಂಡು ಹಬ್ಬದ ಮಾಹಿತಿ ನೀಡಿದ ಯಜಮಾನರಾದ ಎಚ್ ಎಂ ಪುಟ್ಟರಾಜು ಅವರು, ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸುವ ಹಬ್ಬಹರಿದಿನಗಳು ಹಳ್ಳಿಗಳ ಸೊಗಡಿನ ಮಹತ್ವವನ್ನು ಹೆಚ್ಚಿಸುತ್ತವೆ. ನಮ್ಮ ಗ್ರಾಮದಲ್ಲಿ ಪ್ರತಿವರ್ಷವೂ ಮಾದಾರ ಚನ್ನಯ್ಯ ದಾಳದ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮಹಾಮಾರಿ ಕೊರೋನಾ ವೈರಸ್ ನ ಉಪಟಳದಿಂದ ಎರಡ್ಮೂರು ವರ್ಷಗಳಿಂದ ಹಬ್ಬವನ್ನು ಆಚರಿಸಲಾಗಲಿಲ್ಲ‌ ಎಂದರು.

ಈ ವೇಳೆ ಎಸ್ ಶಿವಣ್ಣ, ಗಣೇಶ್, ಹೆಚ್ ಬಿ ಬಸವರಾಜು, ಹೆಚ್ ಎಂ ಪುಟ್ಟರಾಜು, ಶಿವನಂಜಯ್ಯ, ನಾಗರಾಜು, ಹೆಚ್ ಪುಟ್ಟರಾಜು, ರಾಜು, ಸೊಸೈಟಿ ಉಪಾಧ್ಯಕ್ಷ ಸಿದ್ದಯ್ಯ, ಹೆಚ್ ಬಿ ಚಂದ್ರಶೇಖರ್, ಅನಸೂಯಾ ರಾಜು, ಕಲಾವಿದ ಪುಟ್ಟಸ್ವಾಮಿ, ಸುರೇಶ್ ಹರಿಜನ, ಪೂಜಾರಿ ಯಾಲಕ್ಕಯ್ಯ, ದೇವರಾಜು, ಅರ್ಜುನ, ನಾಗೇಶ್ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಯುವತಿಯರು, ಮಹಿಳೆಯರು ಮಕ್ಕಳು ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು