News Karnataka Kannada
Thursday, April 25 2024
ಸಮುದಾಯ

ಕುಂದಾಪುರ: ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಇಂದಿನಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಾರಂಭ

Ashtabandha Brahmakalashotsava to begin from today at Kollur Mookambika Sannidhi
Photo Credit : News Kannada

ಕುಂದಾಪುರ: ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಂತಹ ಶಕ್ತಿ ಪೀಠವಾದ ಉಡುಪಿ ಜಿಲ್ಲೆಯ ಪ್ರಸಿದ್ಧ ಕುಂದಾಪುರ ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ವಿದ್ಯುಕ್ತವಾಗಿ ಆರಂಭಗೊಂಡಿದೆ.

ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂಜಾ ವಿಧಿ ವಿಧಾನ ಕಾರ್ಯಕ್ರಮ ಬೆಳಗ್ಗೆ 6.30 ರ ಸುಮಾರಿಗೆ ದೇವಸ್ಥಾನದ ಮುಂಭಾಗದಲ್ಲಿರುವ ಕಂಬದ ಗಣಪತಿಗೆ ಪ್ರಾರ್ಥನೆ ಮತ್ತು ಗಣ ಹೋಮವನ್ನು ನಡೆಸುವುದರ ಮೂಲಕ ಪೂಜಾ ಕೈಂಕರ್ಯಗಳು ಪ್ರಾರಂಭಿಸಲಾಯ್ತು.ಬಿಳಿ ಹಾಗು ಗುಲಾಬಿ ಬಣ್ಣದ ಸೇವಂತಿಗೆ ಕಮಲ‌,ಅರಶಿನ ಬಣ್ಣದ ಚೆಂಡು ಹೂವಿನಿಂದ ಕಂಬದ ಗಣಪತಿಯನ್ನ ಅಲಂಕರಿಸಲಾಗಿತ್ತು.ಜೊತೆಗೆ ದಿನನಿತ್ಯ ನಡೆಸುವಂತಹ ಬಲಿ ಉತ್ಸವದ ದೃಶ್ಯಾವಳಿಗಳೂ ಕಂಡು ಬಂದಿದೆ.

ಅರ್ಚಕರು ಪೂಜಾ ವಿಧಿ ವಿಧಾನವನ್ನು ನೆರವೇರಿಸಿ ಅಷ್ಟಬಂಧ ಹೊರೆ ಕಾಣಿಕೆ ಉಗ್ರಾಣದ ಉದ್ಘಾಟನೆಯನ್ನು ನೆರವೇರಿಸಿದರು.

ಇಂದು ರಾತ್ರಿ ಯಾಗ ಶಾಲಾ ಪ್ರವೇಶ,ಮಂಟಪ ಸಂಸ್ಕಾರ, ವಾಸ್ತು ಹೋಮ, ರಾಕ್ಷೋಘ್ನಹೋಮ, ಕಲಶಸ್ಥಾಪನೆ,ಅಸ್ತ್ರಯಾಗ, ಅಗ್ನಿಜನನ ಅಧಿವಾಸಹೋಮಗಳನ್ನು ನೆರವೇರಿಸಲಾಗುತ್ತೆ. ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಏ.30 ರಿಂದ ಮೇ.11 ನೇ ತಾರೀಕಿನವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಮೇ. 4 ರಂದು ಸಹಸ್ರ ಕಲಶಸ್ಥಾಪನೆ. ಮೇ.5 ರಂದು ಸಹಸ್ರ ಕಲಶದೊಂದಿಗೆ ಬ್ರಹ್ಮ ಕಲಶಾಭಿಷೇಕ. ಮೇ.6 ಮತ್ತು 7 ರಂದು ಸಂಗೀತ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಮೇ.9 ರಂದು ಮನ್ಮಹಾ ರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು