News Kannada
Tuesday, March 28 2023

ವಿಶೇಷ

ಕಾಡ್ಗಿಚ್ಚು ತಡೆಗೆ ಬೆಂಕಿರೇಖೆ ಅಸ್ತ್ರ

Fireline weapon to prevent forest fires
Photo Credit : By Author

ಬಂಡೀಪುರ, ಕುದುರೆಮುಖ, ಮುತ್ತೋಡಿ ಅರಣ್ಯ ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಅಭಯಾರಣ್ಯ, ಮೀಸಲು ಅರಣ್ಯಪ್ರದೇಶಗಳ‌ಲ್ಲಿ ಪ್ರತಿವರ್ಷ ಬೇಸಿಗೆ ಆರಂಭವಾದ ಕೂಡಲೇ ಕಾಡ್ಗಿಚ್ಚು ಹರಡಿ ಲಕ್ಷಾಂತರ ಸರಸೃಪಗಳು, ವಿವಿಧ ಸಸ್ತನಿಗಳು ಸೇರಿದಂತೆ ಮೂಕಪ್ರಾಣಿಗಳು ಪ್ರಾಣಕಳೆದುಕೊಳ್ಳುವ ಘಟನೆ ಪರಿಸರ ಪ್ರಿಯರು, ಅರಣ್ಯ ಇಲಾಖೆಗೆ ಚಿಂತೆಗೀಡು ಮಾಡುತ್ತಿತ್ತು. ಆದರೆ ಪ್ರಸಕ್ತ ವರ್ಷ ಡಿಸೆಂಬರ್‌, ಜನವರಿ ವೇಳೆ ಸುರಿದ ಮಳೆ, ಅರಣ್ಯ ಇಲಾಖೆಯ ಸಕಾಲಿಕ ಕ್ರಮದಿಂದ ಅರಣ್ಯ ಸೇರಿದಂತೆ ಅಪರೂಪದ ವನ್ಯ ಸಂಪತ್ತು ನಾಶವಾಗುವುದು ತಪ್ಪಿದೆ.

ಬೆಂಕಿ ರೇಖೆ ನಿರ್ಮಾಣ: ಅರಣ್ಯ ಪ್ರದೇಶದ ಬಂಡೆಗಳ ಮೇಲೆ ಗೊರಸು ಹೊಂದಿರುವ ಪ್ರಾಣಿಗಳು ಓಡಾಟ ನಡೆಸುವಾಗ ಕಿಡಿಗಳು ಉಂಟಾಗಿ ಕಾಡ್ಗಿಚ್ಚು ಉಂಟಾಗುವ ಸಂಭವ ಇರುತ್ತದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ ಸೇರಿದಂತೆ ರಾಜ್ಯದ ವಿವಿಧ ಅರಣ್ಯ ಪ್ರದೇಶದ ಸೂಕ್ಷ್ಮ ಸ್ಥಳಗಳಲ್ಲಿ ಫೈರ್‌ ಲೈನ್‌ ನಿರ್ಮಾಣ ಕಾರ್ಯ ನಡೆದಿದೆ. ಜನವರಿಯಿಂದ ಮುಂಗಾರು ಆರಂಭದವರೆಗೆ ಅರಣ್ಯದಲ್ಲಿ ಬೆಂಕಿ ಹರಡುವ ಅಪಾಯ ಹೆಚ್ಚಿರುತ್ತದೆ. ವನ್ಯಜೀವಿ ವಿಭಾಗವಲ್ಲದೆ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ರಸ್ತೆಗಳಾದ ಚಾರ್ಮಾಡಿ ಘಾಟಿ ರಸ್ತೆ, ನಿಡಿಗಲ್‌ ಮೊದಲಾದ ಪ್ರದೇಶಗಳಲ್ಲಿಯೂ ಬೆಂಕಿ ರೇಖೆ ನಿರ್ಮಾಣ ನಡೆದಿದೆ.

ಬೆಳ್ತಂಗಡಿ ಭಾಗದಲ್ಲಿ ಕಡಿರುದ್ಯಾವರ ಗ್ರಾಮದ ಬಂಡಾಜೆ ಫಾಲ್ಸ್‌ನಿಂದ ಬಲ್ಲಾಳರಾಯನ ದುರ್ಗ, ರಾಣಿಝರಿವರೆಗೆ ಬೆಂಕಿ ರೇಖೆ ನಿರ್ಮಾಣ ಮಾಡಲಾಗಿದೆ. ಮೊಬೈಲ್‌ ಸೇರಿದಂತೆ ಯಾವುದೇ ಸಂಪರ್ಕ ಸಾಧನ ಬಳಕೆಗೆ ಬರದ ಪ್ರದೇಶಗಳಲ್ಲಿಯೂ ಅರಣ್ಯ ಇಲಾಖೆ ಸಿಬ್ಬಂದಿ ಟೆಂಟ್‌ ನಿರ್ಮಾಣ ಮಾಡಿ ಕಾರ್ಯ ನಡೆಸಿದ್ದಾರೆ. ಅದೇ ಪ್ರಕಾರ ಎಳನೀರು, ದಿಡುಪೆಗಳಲ್ಲಿಯೂ ಬೆಂಕಿರೇಖೆ ನಿರ್ಮಾಣ ನಡೆದಿದೆ.

2019ರಲ್ಲಿ ಬಂಡೀಪುರದಲ್ಲಿ ಭೀಕರ ದುರಂತ: 2019 ಫೆಬ್ರವರಿಯಲ್ಲಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು 4 ಸಾವಿರ ಹೆಕ್ಟೇರ್‌ ಅರಣ್ಯಪ್ರದೇಶ ನಾಶವಾಗಿತ್ತು. ಅಲ್ಲದೆ ಸಹಸ್ರಾರು ಅಪರೂಪದ ಸರಿಸೃಪ, ಪ್ರಾಣಿ ಪಕ್ಷಿಗಳು ಬೆಂಕಿಯಲ್ಲಿ ಬೆಂದುಹೋಗಿದ್ದವು.

ಶೇ 22ರಷ್ಟು ಅರಣ್ಯ: ಅರಣ್ಯ ಇಲಾಖೆಯ ಅಧಿಕೃತ ದಾಖಲೆ ಪ್ರಕಾರ ರಾಜ್ಯದಲ್ಲಿ ಒಟ್ಟು 43,356 ಚದರ ಕಿ. ಮೀ ವಿಸ್ತೀರ್ಣದಲ್ಲಿ ಅರಣ್ಯ ಪ್ರದೇಶ ಹರಡಿಕೊಂಡಿದೆ. ಅಂದರೆ ಇದು ಒಟ್ಟು ಭೌಗೋಳಿಕ ಪ್ರದೇಶದ ಶೇ 22ರಷ್ಟಿದೆ.

ಮುಂಗಾರು ಮಳೆ ಆರಂಭಗೊಳ್ಳುವ (ಮೇ ಕೊನೆಯವರೆಗೆ) ಅರಣ್ಯದಲ್ಲಿ ಕಾಡ್ಗಿಚ್ಚು ಹರಡಂತೆ ತಡೆಯುವುದು ಮಹತ್ತರ ಕಾರ್ಯ. ಇದಕ್ಕಾಗಿ ಅರ‌ಣ್ಯದಂಚಿನ ಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜಾಗೃತಿಗಾಗಿ ಬೀದಿ ನಾಟಕಗಳನ್ನು ಆಯೋಜಿಸಲಾಗುತ್ತಿದೆ. 8 ರೇಂಜಗಳಲ್ಲಿರುವ ರಸ್ತೆ, ಸೂಕ್ಷ್ಮ ಪ್ರದೇಶಗಳಲ್ಲಿ ಫೈರ್‌ಲೈನ್‌ ಹಾಕುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕೆಲಸ ಪೂರ್ಣಗೊಂಡ ಬಳಿಕ ಮರುಪರಿಶೀಲನೆ ಆರಂಭಿಸಲಾಗುವುದು. ಡಿಸೆಂಬರ್‌ ಕೊನೆ ವಾರದಲ್ಲಿ ಮಳೆಯಾಗಿರುವುದು ಪ್ರಾಣಿ ಸಂಕುಲ ಸೇರಿದಂತೆ ಅರಣ್ಯ ರಕ್ಷಣೆಗೆ ನೆರವಾಗಿದೆ.
-ದಿನೇಶ್‌ ಡಿಸಿಎಫ್‌ ಮಂಗಳೂರು

ಉಪಗ್ರಹ ಮೂಲಕ ಕರ್ನಾಟಕದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಉಂಟಾಗುವ ಬೆಂಕಿ ಅವಘಡ ಮಾಹಿತಿ ಕಲೆಹಾಕುವ ವ್ಯವಸ್ಥೆ ಇದೆ. ಈ ಮೂಲಕ ಅರಣ್ಯದೊಳಗೆ ಬೆಂಕಿ, ಹೊಗೆ ಕಂಡುಬಂದ ತಕ್ಷಣ ಅರಣ್ಯ ಕಚೇರಿಗಳಿಗೆ ಮಾಹಿತಿ ರವಾನೆ ಆಗುತ್ತದೆ. ಅರಣ್ಯ ಇಲಾಖೆ ಬೆಂಕಿ ಅನಾಹುತ ಉಂಟಾಗುವ ಸಂಭಾವ್ಯ ಸ್ಥಳಗಳನ್ನು ಗುರುತಿಸಿದೆ. ಈ ಸ್ಥಳಗಳಲ್ಲಿ ಅಗ್ನಿ ಅವಘಡ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುತ್ತದೆ. ಅಲ್ಲದೆ ವಿವಿಧ ತಂಡಗಳನ್ನು ರಚಿಸಿ ಬೆಂಕಿ ರೇಖೆ ನಿರ್ಮಾಣ ಮಾಡಿದೆ. ಅರಣ್ಯ ರಕ್ಷಣೆಗೆ ಕಾಡಂಚಿನ ಜನರ ಸಹಕಾರ ಅತೀ ಅಗತ್ಯ.
-ಸ್ವಾತಿ ‌ಆರ್‌ಎಫ್‌ಒ
ಕುದುರೆಮುಖ ವನ್ಯಜೀವ ವಿಭಾಗ ಬೆಳ್ತಂಗಡಿ ವಲಯ

See also  ತಿರುವನಂತಪುರಂ: ಸಾಲ ತೀರಿಸಲಾಗದೆ ಕೇರಳದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

39339
ಉಮೇ‌ಶ ಎಚ್‌.ಎಸ್‌.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು