News Kannada
Thursday, March 30 2023

ಅಂಕಣ

ಪರಿಸರದೊಂದಿಗೆ ಮನುಷ್ಯನ ಸಹನಡಿಗೆಯ ಕಥನವೇ ಬೆಟ್ಟದ ಜೀವ

Photo Credit :

“ಬೆಟ್ಟದ ಜೀವ” ಶಿವರಾಮ ಕಾರಂತರ ಮೇರುಕೃತಿಗಳಲ್ಲೊಂದು. ಬೆಟ್ಟದ ಪರಿಸರದಲ್ಲಿ ತೋಟ ಮಾಡಿಕೊಂಡು ಬದುಕುವ ಗೋಪಾಲಯ್ಯ ಮತ್ತು ಶಂಕರಿ ಎನ್ನುವ, ಇಳಿವಯಸ್ಸಿನಲ್ಲೂ ಜೀವನೋತ್ಸಾಹ ಕಳೆದುಕೊಳ್ಳದ ಅಪರ್ವಲ ದಂಪತಿಯ ಜೀವನಗಾಥೆಯಿದು. ಪರಿಸರದೊಂದಿಗೆ ಮನುಷ್ಯ ಪ್ರಕೃತಿಯ ಸಹನಡಿಗೆಯ ಕಥನವಿದು. ಇಂಥ ಅದ್ಭುತ ಕಾದಂಬರಿಯನ್ನು ಅದರ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ದೃಶ್ಯರೂಪಕ್ಕೆ ರೂಪಾಂತರಿಸುವಲ್ಲಿ ನರ್ದೇ ಶಕ ಪಿ.ಶೇಷಾದ್ರಿ ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಓಡುನಡಿಗೆಯ ಬದುಕಿನಲ್ಲಿ ನಮಗರಿವಿಲ್ಲದೆಯೇ ನಾವು ಕಳೆದುಕೊಂಡಿರಬಹುದಾದ ಸುಖಗಳನ್ನು `ಬೆಟ್ಟದ ಜೀವ~ ನೆನಪಿಸುತ್ತದೆ. ಶಿವರಾಮಯ್ಯ ನದಿಯಲ್ಲಿ ಮೀಯುವಾಗ, ಗೋಪಾಲಯ್ಯನಿಂದ ಅಭ್ಯಂಜನ ಮಾಡಿಸಿಕೊಳ್ಳುವಾಗ, ಬೆಟ್ಟ ಬಯಲಿನ ಅಗಾಧತೆಗೆ ಕಣ್ಣರಳಿಸುವಾಗ- ಆ ಎಲ್ಲ ಅನುಭವಗಳು ಪ್ರೇಕ್ಷಕನದೂ ಆಗುತ್ತವೆ. ಕಾಡಿನಲ್ಲಿ ವಿಹರಿಸಿ ಬಂದ ಅನುಭವವಾಗುತ್ತದೆ. ಈ ಹಿತಾನುಭವದ ನಡುವೆ ಮಂದ್ರಸ್ವರದಂತೆ ಕೇಳಿಸುತ್ತದೆ- ಮಗನ ಅಗಲಿಕೆಯನ್ನು ಹತ್ತಿಕ್ಕಿಕೊಂಡು ಬದುಕುವ ದಂಪತಿಯ ತಳಮಳ. `ಸುಖ ಇದೆ ಅಂದ್ರೆ ಇದೆ, ಇಲ್ಲ ಅಂದ್ರೆ ಇಲ್ಲ~ ಎನ್ನುವ ಗೋಪಾಲಯ್ಯನ ದೃಷ್ಟಿಕೋನ ಬದುಕಿನ ವಿಮಾರ್ಶೆಯಂತೆ ತೋರುತ್ತದೆ.

ಕಾದಂಬರಿಯಲ್ಲಿನ ಗೋಪಾಲಯ್ಯ ದೈಹಿಕವಾಗಿ ಚಟುವಟಿಕೆಯಿಂದಿರುವ ವ್ಯಕ್ತಿ. ಆದರೆ, ಚಿತ್ರದಲ್ಲಿನ ಗೋಪಾಲಯ್ಯ ದಣಿದಿದ್ದಾನೆ. ಈ ಪಾತ್ರದಲ್ಲಿ ನಟಿಸಿರುವ ದತ್ತಾತ್ರೇಯನವರಿಗೆ ವಯಸ್ಸಾಗಿರುವುದು ಈ ದಣಿವಿಗೆ ಕಾರಣ. ಆದರೆ, ಅವರ ಪ್ರತಿಭೆಯ ಪ್ರಖರತೆಯಲ್ಲಿ ದಣಿವಿನ ಕೊರತೆ ಮುಚ್ಚಿಹೋಗುತ್ತದೆ.ಈ ಮಾತು ಶಿವರಾಮಯ್ಯನ ಪಾತ್ರಧಾರಿ ಸುಚೇಂದ್ರಪ್ರಸಾದ್ ಅವರಿಗೆ ಅನ್ವಯಿಸುವುದಿಲ್ಲ. ಅವರ ಪಾತ್ರ ನರ್ವೊಹಣೆಯಲ್ಲಿ ನಾಟಕೀಯತೆ ಒಡೆದುಕಾಣುತ್ತದೆ. ಶಂಕರಿ ಪಾತ್ರದಲ್ಲಿನ ರಾಮೇಶ್ವರಿ ರ್ಮೆ `ಬೆಟ್ಟದ ಜೀವ~ವೇ ಆಗಿಹೋಗಿದ್ದಾರೆ.

ಸಿನಿಮಾದಲ್ಲಿನ ನಾಯಕ ಸ್ವಾತಂತ್ರ್ಯ್ ಹೋರಾಟಗಾರ. ಪೊಲೀಸರಿಂದ ತಪ್ಪಿಸಿಕೊಂಡು ಕಾಡಿನ ದಾರಿಯಲ್ಲಿ ದಿಕ್ಕುತಪ್ಪಿ ಗೋಪಾಲಯ್ಯನವರ ಮನೆ ಸೇರುತ್ತಾನೆ. ಚಳವಳಿಯ ಈ ಹಿನ್ನೆಲೆ ಕಾದಂಬರಿಯಲ್ಲಿಲ್ಲ. ಸಿನಿಮಾದ ಕೊನೆಯಲ್ಲಿನ ರೆಸರ್ಟ್ ಸಂಸ್ಕೃತಿಯ ಚಿತ್ರಣವೂ ಕಾದಂಬರಿಗೆ ಹೊರತಾದುದು.

ಈ ಬದಲಾವಣೆಗಳಿಂದ ಸಿನಿಮಾಕ್ಕೆ ಉಪಯೋಗವೇನೂ ಆಗಿಲ್ಲ. ಬದಲಾಗಿ, ಈ ವಿವರಗಳು ಕಾದಂಬರಿಯ ಧ್ವನಿಶಕ್ತಿಯನ್ನು ಸರಳಗೊಳಿಸಿದಂತೆ ಕಾಣಿಸುತ್ತದೆ. ಇನ್ನೂ ಬಿಗಿಗೊಳಿಸಬಹುದಾಗಿದ್ದ ಒಳ್ಳೆಯ ಕವಿತೆಯಂತೆ ಬೆಟ್ಟದ ಜೀವ ಗಮನಸೆಳೆಯುತ್ತದೆ. ‘ಕಾಡ ನೋಡ ಹೋಗಿ ಕವಿತೆಯೊಡನೆ ಬಂದೆ’ ಎನ್ನುವ ಹಿತಾನುಭವ ಉಂಟುಮಾಡುವ ಶಕ್ತಿ ಈ ದೃಶ್ಯಕಾವ್ಯದ್ದು.

See also  ಸರ್ವಶಕ್ತಳಾಗಿ ಬೆಳೆದು ನಾಡ ಬೆಳಗಲಿ ನಾರಿ..!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

4383

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು