News Karnataka Kannada
Tuesday, April 16 2024
Cricket
ವಿಶೇಷ

ಜೀರಿಗೆ ಕೃಷಿ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information about cumin cultivation
Photo Credit : Pixabay

ಜೀರಿಗೆ ಮೂಲತಹ ಈಜಿಪ್ಟ್ ಗೆ ಸ್ಥಳೀಯವಾದ ಬೆಳೆಯಾಗಿದ್ದು ಇದು ಈಗ ಭಾರತ, ಉತ್ತರ ಆಫ್ರಿಕಾ, ಚೀನಾದಂತಹ ದೇಶದಲ್ಲಿ ಬೆಳೆಯುತ್ತದೆ. ಭಾರತದಲ್ಲಿ ಜೀರಿಗೆಯನ್ನು ‘ಜೀರಾ’ ಎಂದು ಜನಪ್ರಿಯವಾಗಿದೆ.ಇದು ಆಹಾರ ತಯಾರಿಕೆಗಳಲ್ಲಿ ಉತ್ತಮ ಪರಿಮಳ ಹಾಗೂ ಅರೋಗ್ಯಕರ ರೀತಿಯಲ್ಲೂ ಬಳಸುತ್ತಾರೆ.

ಮಣ್ಣಿನ ಅವಶ್ಯಕತೆ: ಜೀರಿಗೆ ಬೇಸಾಯಕ್ಕೆ ಸಾವಯವ ಪದಾರ್ಥಗಳೊಂದಿಗೆ ಪೂರಕವಾದ ಉತ್ತಮ ಲೋಮಿ ಮಣ್ಣು ಬೇಕಾಗುತ್ತದೆ. ವಾಣಿಜ್ಯ ಕೃಷಿಗಾದರೆ ೩ರಿಂದ ೪ ವರ್ಷಗಳಿಂದ ಜೀರಿಗೆ ಕೃಷಿ ಮಾಡದ ಕ್ಷೇತ್ರವನ್ನು ಆಯ್ಕೆ ಮಾಡಿ.

ಜೀರಿಗೆ ಬೀಜ ಬಿತ್ತನೆಗೆ ಉತ್ತಮ ಸಮಯ ನವೆಂಬರ್ ನಿಂದ ಡಿಸೆಂಬರ್ ಇದು ಮಧ್ಯ ಶುಷ್ಕ ಮತ್ತು ತಂಪಾದ ವಾತಾವರಣವಿರುವುದರಿಂದ ಇದಕ್ಕೆ ಉತ್ತಮವಾಗಿದೆ. ಜೀರಿಗೆ ಕೃಷಿಯಲ್ಲಿ ಕಳೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಇದು ಜೀರಿಗೆ ಬೀಜವನ್ನು ಬಿತ್ತಿದ ನಂತರ ೧ ತಿಂಗಳು ಮತ್ತು ೨ಪಂತಗಳಲ್ಲಿ ಕೀಳುವ ಅಗತ್ಯವಿದೆ

ಜೀರಿಗೆ ಬೇಸಾಯದಲ್ಲಿ ನೀರಾವರಿ: ಬೀಜಗಳನ್ನು ಬಿತ್ತಿದ ಕೂಡಲೆ ನೀರುಹಾಯಿಸಬೇಕು. ೧ನೇ ನೀರಾವರಿ ನಂತರ ೭ರಿಂದ ೧೦ದಿನಗಳ ನಂತರ ೨ನೇ ನೀರಾವರಿ ಮಾಡಬೇಕು. ಮಣ್ಣಿನ ಪ್ರಕಾರ ಮತ್ತು ಪರಿಸ್ಥಿತಿಗಳನ್ನು ಅವಲಂಬಿಸಿ ನೀರಾವರಿ ಮಾಡಬೇಕಾಗುತ್ತದೆ.

ಜೀರಿಗೆ ಕೊಯ್ಲು ಮತ್ತು ಇಳುವರಿ: ಕೊಯ್ಲು ಮಾಡುವ ಮೊದಲು ಹೊಲವನ್ನು ಸ್ವಚ್ಛಗೊಳಿಸಲಾಗುತ್ತದೆ. ಜೀರಿಗೆ ಗಿಡಗಳನ್ನು ಕತ್ತರಿಸಿ ಕೊಯ್ಲು ಮಾಡಲಾಗುತ್ತದೆ. ಸ್ವಚ್ಛವಾದ ನೆಲದ ಮೇಲೆ ಜೋಡಿಸಬೇಕು. ಬಿಸಿಲಿನಲ್ಲಿ ಒಣಗಿದ ನಂತರ ಕೋಲುಗಳಿಂದ ಲಘುವಾಗಿ ಹೊಡೆಯುವ ಮೂಲಕ ಬೀಜಗಳನ್ನು ಬೇರ್ಪಡಿಸಬೇಕು.

ಆರೋಗ್ಯ ಪ್ರಯೋಜನಗಳು:
• ಜೀರಿಗೆ ಜೀರ್ಣಕ್ರಿಯೆಯಲ್ಲಿ ಬಹಳಷ್ಟು ಉಪಯೋಗವಾಗುತ್ತದೆ.
• ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ
• ಪೈಲ್ಸ್, ಅಸ್ತಮಾ, ನಿದ್ರಾಹೀನತೆ, ಶೀತ, ರಕ್ತಹೀನತೆ ಮುಂತಾದವುಗಳನ್ನು ಕಡಿಮೆ ಮಾಡುತ್ತದೆ.
• ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಕ್ಷಣ ಕಡಿಮೆ ಮಾಡುತ್ತದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು