News Karnataka Kannada
Friday, March 29 2024
Cricket
ಪ್ರವಾಸ

ನಾಗರಹೊಳೆಯ ನಿಸರ್ಗದ  ನೋಟಕ್ಕೆ ಪ್ರವಾಸಿಗರು ಫಿದಾ

Photo Credit :

ಮೈಸೂರು: ಇದೀಗ ಪ್ರವಾಸಿ ತಾಣ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ್ದೇ ಆದರೆ ಈಗ ಜಿಂಕೆ, ಸಾರಂಗ, ಕಾಡುಕೋಣ, ಕಾಡಾನೆಗಳು ಎಲ್ಲೆಂದರಲ್ಲಿ ಕಾಣಿಸುತ್ತಿದ್ದು, ಎಲ್ಲವೂ ಖುಷಿಯಾಗಿ ಅರಣ್ಯದಲ್ಲಿ ಅಲೆಯುತ್ತಿರುವುದು  ಕಂಡು ಬರುತ್ತಿದೆ.

ಇನ್ನು ಹಸಿರು ತುಂಬಿದ ನಿಸರ್ಗದೊಳಗೆ  ಜಿಂಕೆಗಳು ನೆಗೆಯುತ್ತಾ ಓಡಾಡುತ್ತಿದ್ದರೆ, ಕಾಡು ಕೋಣಗಳು ಎಲ್ಲೆಂದರಲ್ಲಿ ಅಲೆಯುತ್ತಿವೆ.  ಬಿದಿರು ಮೆಳೆಗಳು ಬೆಳೆದು ಕಾಡನ್ನು ಆವರಿಸಿಕೊಳ್ಳುತ್ತಿದ್ದರೆ, ಸಸ್ಯಹಾರಿ ಪ್ರಾಣಿಗಳು ಆಹಾರದ ಸಮಸ್ಯೆ ನೀಗಿದ ಸಂಭ್ರಮದಲ್ಲಿವೆ.

ಮೇಲ್ನೋಟಕ್ಕೆ ನಾಗರಹೊಳೆಯ ಚೆಲುವು ಹಸಿರ ಲೋಕವನ್ನು ಧರೆಗೆ  ಇಳಿಸಿದಂತೆ ಕಾಣಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವ ಕಾರಣ ಕಾಡ್ಗಿಚ್ಚಿಲ್ಲದೆ ಕಾಡುಗಳು ಸಮೃದ್ಧಿಯಾಗಿವೆ. ಹೀಗಾಗಿ ಸಣ್ಣಪುಟ್ಟ ಜಂತುಗಳಿಂದ ಆರಂಭವಾಗಿ ದೊಡ್ಡ ಪ್ರಾಣಿಗಳ ತನಕ ಎಲ್ಲವೂ ಅರಣ್ಯಗಳ ನಡುವೆ ಹಾಯಾಗಿವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಚೆಲುವು ಮೈಸೂರು ಮತ್ತು ಕೊಡಗಿಗೆ ವರದಾನವಾಗಿದ್ದು, ಸುಮಾರು 643ಚ.ಕಿ.ಮೀ ವ್ಯಾಪ್ತಿಯಲ್ಲಿರುವ ಅರಣ್ಯವನ್ನು  ವನ್ಯಪ್ರಾಣಿಗಳ ಆಹಾರ ಮತ್ತು ಕಾಡಿನ ರಕ್ಷಣೆ ದೃಷ್ಠಿಯಿಂದ ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ಹೀಗೆ ಎಂಟು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ. ಅರಣ್ಯದ ನಡುವೆ ಹೆಮ್ಮರಗಳು, ಕುರುಚಲು ಕಾಡುಗಳು, ಬಿದಿರುಮೆಳೆಗಳು, ಕೆರೆ, ನದಿ, ತೊರೆ, ಬೆಟ್ಟ ಗುಡ್ಡ ಹೀಗೆ ಹತ್ತಾರು ಪ್ರಕೃತಿ ವಿಸ್ಮಯಗಳೊಂದಿಗೆ ಅಡಕವಾಗಿ ಕ್ರೂರ, ಸಾಧು ಪ್ರಾಣಿಗಳಿಗೆ ಆವಾಸ ಸ್ಥಾನಗಳಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಇದೀಗ ಸುರಿದ ಮಳೆ ನಾಗರಹೊಳೆ ಅರಣ್ಯಕ್ಕೊಂದು ಹೊಸ ಕಳೆ ನೀಡಿದ್ದು ನಿಸರ್ಗ ಪ್ರಿಯರು ನೆಮ್ಮದಿಪಡುವಂತೆ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು