News Kannada
Wednesday, March 29 2023

ಸಾಂಡಲ್ ವುಡ್

ಬೆಳ್ತಂಗಡಿ: ಮಾ.17 ರಂದು ತೆರೆ ಕಾಣಲಿದೆ ಮಗಳು ಚಲನಚಿತ್ರ

Daughter's film to hit the screens on March 17
Photo Credit : News Kannada

ಬೆಳ್ತಂಗಡಿ: ‘ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನೇ ಇಟ್ಟುಕೊಂಡು ರಚಿಸಲಾದ ಮಗಳು ಎಂಬ ಕನ್ನಡ ಚಲನಚಿತ್ರ ಮಾ.17 ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು ಚಿತ್ರಮಂಡಳಿಯಿಂದ ಅತ್ಯುತ್ತಮ ಚಲನಚಿತ್ರವೆಂದು ಯು ಸರ್ಟಿಫಿಕೆಟ್ ಲಭಿಸಿದೆ’ ಎಂದು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ತೋಮಸ್ ಎಂ.ಎಂ. ಹೇಳಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜ. 10.ರಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಚಿತ್ರದ ಧ್ವನಿಸುರುಳಿ ಬಿಡುಗಡೆಗೊಳಿಸಿದ್ದಾರೆ. ಇವತ್ತಿನ ಕಾಲಘಟ್ಟದಲ್ಲಿ ಮದ್ಯಪಾನ ಜೀವನದ ಅಂಗವಾಗಿ ಬಿಟ್ಟಿದೆ. ಮದ್ಯಪಾನ ಎಂಬ ಒಂದು ಕೆಟ್ಟ ಚಟದಿಂದ ಒಂದು ಕುಟುಂಬ ಹೇಗೆ ಬೀದಿಗೆ ಬೀಳುತ್ತದೆ. ಓರ್ವ ಕುಡುಕ ತಂದೆಯ ಜೀವನವನ್ನು ಮಗಳು ಯಾವ ರೀತಿ ಪರಿವರ್ತಿಸುತ್ತಾಳೆ, ಕುಡುಕನ ಕತ್ತಲ ಜೀವನಕ್ಕೆ ಮಗಳು ಯಾವ ರೀತಿ ಬೆಳಕು ಆಗುತ್ತಾಳೆ ಅನ್ನುವುದೇ ಕಥೆಯ ಆಸಕ್ತಿದಾಯಕ ವಿಷಯವಾಗಿದೆ ಎಂದರು.

ಗಾಡ್ ಗಿಫ್ಟ್ ಫ್ಯಾಮಿಲಿ ಫಿಲಂ ಬ್ಯಾನರ್‌ನಡಿ ನಿರ್ಮಾಣ ಆಗಿರುವ ಇದು ಸಮಾಜಕ್ಕೆ ಒಂದು ಭಾಂದವ್ಯದ ಸಂದೇಶ ಸಾರಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಪೋಣಿಸಲಾದ ಚಿತ್ರವಾಗಿದ್ದು, ಕುಟುಂಬ ಸಮೇತ ನೋಡಬಹುದಾದ ಚಲನಚಿತ್ರ ಇದಾಗಿದೆ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರಖ್ಯಾತ ತುಳು ಚಲನಚಿತ್ರ ನಟ ನವೀನ್ ಡಿ. ಪಡೀಲ್, ರಾಮು ಪಾತ್ರದಲ್ಲಿ ನಿರ್ದೇಶಕ ತೋಮಸ್‌ ಎಂ.ಎಂ. ಮಗಳ ಪಾತ್ರದಲ್ಲಿ ಭಾರ್ಗವಿ ಆರ್. ಶೇಟ್, ತಾಯಿ ಪಾತ್ರದಲ್ಲಿ ಸವಿತಾ ಪ್ಲಾವ್ಯಾ ನಟಿಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ. ವಿವೇಕ್ ವಿನ್ಸೆಂಟ್ ಪಾಯಸ್, ಸುಂದರ ಹೆಗ್ಡೆ ಬಿ.ಇ., ಪಿ. ಧರಣೇಂದ್ರ ಕುಮಾರ್, ಶ್ರವಣ ಕುಮಾರಿ, ಅರ್ಪಿತಾ ಕೋಟ್ಯಾನ್ , ಶ್ರೀಮಾ ಉಜಿರೆ, ಶರಣ್ ಶೆಟ್ಟಿ ವೇಣೂರು, ಆನಂದ ಗಾಂಧಿನಗರ, ಬಿಜಿಲ್ ಮ್ಯಾಥ್ಯೂ, ತನಿಷಾ ಕಾರ್ಕಳ ಮುಂತಾದವರು ನಟಿಸಿದ್ದಾರೆ ಎಂದರು.

ಚಿತ್ರದ ಸಹ ನಿರ್ಮಾಪಕರಾಗಿ ಬಿಜಿಲ್‌ ಮ್ಯಾಥ್ಯೂ, ಲತಾ ಮಂಗಳೂರು ಹಾಗೂ ಅರುಣ್ ಬೆಳ್ತಂಗಡಿ ಸಹಕರಿಸಿದ್ದಾರೆ. ಸಹ ನಿರ್ದೇಶಕರಾಗಿ ಮಹಾಲಕ್ಷ್ಮೀ ಪೆರಾಡಿ ಮತ್ತು ಸಂದೇಶ ಬಡಕೋಡಿ ಕೆಲಸ ಮಾಡಿದ್ದಾರೆ. ಛಾಯಾಗ್ರಹಣ ಶಶಿಧರ ದೇವಾಡಿಗ ಉಡುಪಿ, ಸಂಗೀತಾ ಗುರುರಾಜ್ ಎಂ.ಬಿ., ನೃತ್ಯ ಸಂಯೋಜನೆ ಶ್ರವಣ ಕುಮಾರಿ ಮಾಡಿದ್ದಾರೆ. ಸಂಕಲನ ಹರೀಶ್ ಕೊಡ್ಪಾಡಿ ಮತ್ತು ಸುಶಾಂತ್ ಪೂಜಾರಿ ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಮನಸೆಳೆಯುವ ಮೂರು ಹಾಡುಗಳಿದ್ದು, ತೋಮಸ್ ಎಂ.ಎಂ. ಮತ್ತು ಸೀತಾ ಆರ್. ಶೇಟ್ ರಚಿಸಿದ್ದಾರೆ. ಸಂಗೀತಾ ಬಾಲಚಂದ್ರ ಮತ್ತು ಗುರುರಾಜ್ ಎಂ.ಬಿ. ಧ್ವನ್ವಿ ನೀಡಿದ್ದಾರೆ. ಪೋಸ್ಟಲ್ ಡಿಸೈನ್‌ ದಿನೇಶ್ ಗ್ಲೋಸಿಂಗ್ ಡಿಜಿಟಲ್ ಮೂಡಬಿದಿರೆ ನಿರ್ವಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಮಾರ್ಗದರ್ಶಕ ವಿವೇಕ್ ವಿನ್ಸೆಂಟ್ ಪಾಯಸ್, ಸಹ ನಿರ್ದೇಶಕ ಸಂದೇಶ ಬಡಕೋಡಿ, ಬಾಲ ನಟಿ ಶ್ರೀಮಾ ಉಜಿರೆ, ಚಂದ್ರ ಕೋಟ್ಯಾನ್, ರಾಘವೇಂದ್ರ ಅರ್ ಶೇಟ್ ಇದ್ದರು.

ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ತೋಮಸ್‌ ಎಂ.ಎಂ.ಮೂಲತಃ ಕೇರಳದ ಕಣ್ಣೂರಿನವರು. ಕಳೆದ 15 ವರ್ಷಗಳಿಂದ ವೇಣೂರಿನಲ್ಲಿ ಕುಟುಂಬ ಸಮೇತರಾಗಿ ನೆಲೆಸಿದ್ದಾರೆ. ಚಿತ್ರಕಲಾ ಶಿಕ್ಷಕರಾಗಿ ಮಕ್ಕಳ ಭಾವನೆಗಳನ್ನು, ಪೋಷಕರ ಸಮಸ್ಯೆಗಳನ್ನು ಬಹಳಷ್ಟು ಹತ್ತಿರದಿಂದ ಅರ್ಥೈಸಿಕೊಂಡವರು. ಮೂಲ ಕೇರಳವಾದರೂ ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡವರು. ಹಾಗಾಗಿಯೇ ತನ್ನ ನಿರ್ದೇಶನದ ಚಲನಚಿತ್ರ ಕನ್ನಡ ಭಾಷೆಯಲ್ಲಿ ಹೊರತರುವ ಪ್ರಯತ್ನ ಮಾಡಿದ್ದಾರೆ.

See also  ನೌಕರರ ಮುಷ್ಕರ : ಔರಾದ್‌ನಲ್ಲಿ ಪರದಾಡಿದ ಜನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು