News Kannada
Wednesday, October 04 2023
ಸಾಂಡಲ್ ವುಡ್

ನಿರ್ದೇಶಕನಾದ ಆಕ್ಸಿಡೆಂಟ್

New Project 2021 09 17T162203.034
Photo Credit :
ಬೆಂಗಳೂರು:  ನಟ, ನಿರೂಪಕ ಸೌರಭ್ ಕುಲಕರ್ಣಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿರಿ ಲಂಬೋದರ ವಿವಾಹ ಎನ್ನುವ ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಟ್ವಿಸ್ಟ್ ವಿತ್ ಫ್ಯಾಮಿಲಿ ಡ್ರಾಮ ನಮ್ಮನೆ ಪ್ರೊಡಕ್ಷನ್ ಟೀಮ್ ತಂಡ ಈ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದೆ. ನಿರ್ಮಾಣ ಮಾತ್ರವಲ್ಲದೆ ಕಥೆ, ಚಿತ್ರಕಥೆ ಸಂಭಾಷಣೆ ಜವಾಬ್ದಾರಿಯಲ್ಲೂ ನಮ್ಮನೆ ತಂಡ ಭಾಗಿಯಾಗಿದೆ.
ಸಿನಿಮಾ ಕಥೆಯ ಕುರಿತು ಹೆಚ್ಚಿನ ವಿವರ ಬಿಟ್ಟುಕೊಡದ ಸೌರಭ್, ಟ್ವಿಸ್ಟ್ ಒಳಗೊಂಡ ಫ್ಯಾಮಿಲಿ ಡ್ರಾಮ ಎಂದಷ್ಟೇ ಹೇಳಿ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಈ ಹಿಂದೆ ನಟನೆಯನ್ನು ಹೊರತು ಪಡಿಸಿ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಂಜನ್ ಭಾರದ್ವಾಜ್ ಮತ್ತು ದಿಶಾ ರಮೇಶ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಾಯಕಿ ದಿಶಾ ರಮೇಶ್ ಹಾಸ್ಯ ನಟ ಮಂಡ್ಯ ರಮೇಶ್ ಅವರ ಪುತ್ರಿ.
ಕಳೆದೊಂದು ವರ್ಷಗಳಿಂದ ಸೌರಭ್ ಈ ಚಿತ್ರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಕ್ರೌಡ್ ಫಂಡ್ ನೆರವಿನೊಂದಿಗೆ ಮೂಡಿ ಬರುತ್ತಿರುವುದಾಗಿ ಅವರು ತಿಳಿಸಿದ್ದಾರೆ. ತಂತ್ರಜ್ನರು, ಸ್ನೇಹಿತರು, ನೆಂಟರಿಷ್ತರು ಈ ಸಿನಿಮಾಗೆ ಹಣ ಹೂಡಿದ್ದಾರೆ.
ತಾರಾಗಣದಲ್ಲಿ ರಾಜೇಶ್ ನಟರಂಗ, ಸುಂದರ್ ವೀಣಾ, ರೋಹಿತ್ ನಾಗೇಶ್, ಬಾಲ ರ್ರಾಜ್ವಾಡಿ, ಶಬರಿ ಮಂಜು, ಶಿವಕುಮಾರ್, ಪಿ.ಡಿ ಸತೀಶ್ ಚಂದ್ರ, ಸಂತೋಷ್ ಕರ್ಕಿ, ಗಿರೀಶ್ ಜತ್ತಿ ಮತ್ತು ಅಶೋಕ್ ಬಿ.ಎ ಮುಂತಾದವರಿದ್ದಾರೆ.
See also  'ಡಿ5' ಚಿತ್ರದ ಲಿರಿಕಲ್ ಸಾಂಗ್, ಜನ್ಕರ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಅಕ್ಟೋಬರ್ 29ರಂದು ರಿಲೀಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು