ಬೆಂಗಳೂರು: ನಟ, ನಿರೂಪಕ ಸೌರಭ್ ಕುಲಕರ್ಣಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿರಿ ಲಂಬೋದರ ವಿವಾಹ ಎನ್ನುವ ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಟ್ವಿಸ್ಟ್ ವಿತ್ ಫ್ಯಾಮಿಲಿ ಡ್ರಾಮ ನಮ್ಮನೆ ಪ್ರೊಡಕ್ಷನ್ ಟೀಮ್ ತಂಡ ಈ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದೆ. ನಿರ್ಮಾಣ ಮಾತ್ರವಲ್ಲದೆ ಕಥೆ, ಚಿತ್ರಕಥೆ ಸಂಭಾಷಣೆ ಜವಾಬ್ದಾರಿಯಲ್ಲೂ ನಮ್ಮನೆ ತಂಡ ಭಾಗಿಯಾಗಿದೆ.
ಸಿನಿಮಾ ಕಥೆಯ ಕುರಿತು ಹೆಚ್ಚಿನ ವಿವರ ಬಿಟ್ಟುಕೊಡದ ಸೌರಭ್, ಟ್ವಿಸ್ಟ್ ಒಳಗೊಂಡ ಫ್ಯಾಮಿಲಿ ಡ್ರಾಮ ಎಂದಷ್ಟೇ ಹೇಳಿ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಈ ಹಿಂದೆ ನಟನೆಯನ್ನು ಹೊರತು ಪಡಿಸಿ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಂಜನ್ ಭಾರದ್ವಾಜ್ ಮತ್ತು ದಿಶಾ ರಮೇಶ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಾಯಕಿ ದಿಶಾ ರಮೇಶ್ ಹಾಸ್ಯ ನಟ ಮಂಡ್ಯ ರಮೇಶ್ ಅವರ ಪುತ್ರಿ.
ಕಳೆದೊಂದು ವರ್ಷಗಳಿಂದ ಸೌರಭ್ ಈ ಚಿತ್ರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಕ್ರೌಡ್ ಫಂಡ್ ನೆರವಿನೊಂದಿಗೆ ಮೂಡಿ ಬರುತ್ತಿರುವುದಾಗಿ ಅವರು ತಿಳಿಸಿದ್ದಾರೆ. ತಂತ್ರಜ್ನರು, ಸ್ನೇಹಿತರು, ನೆಂಟರಿಷ್ತರು ಈ ಸಿನಿಮಾಗೆ ಹಣ ಹೂಡಿದ್ದಾರೆ.
ತಾರಾಗಣದಲ್ಲಿ ರಾಜೇಶ್ ನಟರಂಗ, ಸುಂದರ್ ವೀಣಾ, ರೋಹಿತ್ ನಾಗೇಶ್, ಬಾಲ ರ್ರಾಜ್ವಾಡಿ, ಶಬರಿ ಮಂಜು, ಶಿವಕುಮಾರ್, ಪಿ.ಡಿ ಸತೀಶ್ ಚಂದ್ರ, ಸಂತೋಷ್ ಕರ್ಕಿ, ಗಿರೀಶ್ ಜತ್ತಿ ಮತ್ತು ಅಶೋಕ್ ಬಿ.ಎ ಮುಂತಾದವರಿದ್ದಾರೆ.