ಬೆಂಗಳೂರು : ಸ್ಯಾಂಡಲ್ ವುಡ್ ನಟ ಯಶಸ್ ಸೂರ್ಯ ಇಂದು ಅಂಬಿಕಾ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಬೆಂಗಳೂರಿನ ಬನಶಂಕರಿಯಲ್ಲಿ ಇರುವ ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಗುರುವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಅಂಬಿಕಾ ಅವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಸರಳವಾಗಿ, ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ, ಈ ಮದುವೆಯನ್ನು ಮಾಡಲಾಗಿದೆ. ಮದುವೆಗೆ ಚಿತ್ರರಂಗದ ಗಣ್ಯರು, ಯಶಸ್ ಅವರು ಆಪ್ತರು, ಸ್ನೇಹಿತರು ಆಗಮಿಸಿ, ನೂತನ ವಧು-ವರರಿಗೆ ಶುಭಾಶಯ ತಿಳಿಸಿದ್ದಾರೆ.
2007ರಲ್ಲಿ ತೆರೆಕಂಡ ‘ಯುಗ ಯುಗಗಳೇ ಸಾಗಲಿ’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಯಶಸ್, 2009ರಲ್ಲಿ ತೆರೆಕಂಡ ‘ಶಿಶರ’ ಸಿನಿಮಾದಿಂದ ಗಮನಸೆಳೆದರು. ‘ಚಿಂಗಾರಿ’, ‘ಪರಮಶಿವ’, ‘ಜಿಲೇಬಿ’, ‘ಚಕ್ರವರ್ತಿ’, ‘ಸೈಕೋ ಶಂಕರ’, ‘ರಾಮ ಧಾನ್ಯ’, ‘ಚಿಟ್ಟೆ’, ‘ಒಡೆಯ’ ಅವರ ನಟಿಸಿದ್ದ ಇನ್ನಿತರ ಸಿನಿಮಾಗಳು. 2019ರಲ್ಲಿ ತೆರೆಕಂಡ ಬಹುನಿರೀಕ್ಷಿ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಸಹದೇವನ ಪಾತ್ರವನ್ನು ಯಶಸ್ ನಿಭಾಯಿಸಿದ್ದರು.