ಸ್ಯಾಂಡಲ್ ವುಡ್: ಕನ್ನಡ ಚಿತ್ರರಂಗದಲ್ಲಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡಲು ಸೂಕ್ತ ವ್ಯವಸ್ಥೆ ಇಲ್ಲವೆಂಬ ಕೊರಗು ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಅನೇಕ ಕನ್ನಡ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗಾಗಿ ಮುಂಬೈ, ಹೈದರಾಬಾದ್ ನಂತಹ ನಗರಗಳಿಗೆ ತೆರಳುವುದು ಸಹಜವಾಗಿದೆ. ಆ ಒಂದುಕೊರತೆ ನೀಗಿಸುವ ಸಲುವಾಗಿ ಅನೇಕರು ರ್ನಾಟಕದಲ್ಲಿ ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಆ ಸಾಲಿಗೆ ಬುಕ್ಕಾಪಟ್ಟಣ ವಾಸು ಅವರು ಸೇರಿಕೊಂಡಿದ್ದಾರೆ. ಮೂರು ದಶಕದಿಂದ ಚಿತ್ರರಂಗದಲ್ಲಿತೊಡಗಿಸಿಕೊಂಡಿರುವ ಇವರು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಬುಕ್ಕಾಪಟ್ಟಣ ವಾಸು ಕ್ರಿಯೇಟಿವ್ ಟೈಮ್ಸ್ ಸ್ಟುಡಿಯೋ ಸ್ಥಾಪಿಸಿದ್ದು, ಸ್ಟುಡಿಯೋ ಸಿನಿಮಾಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಬೇಕಾದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇದರಉದ್ಘಾಟನೆ ಇತ್ತೀಚೆಗೆ ನೆರವೇರಿದೆ. ಈಗಾಗಲೇ ಸೆಂಚುರಿ ಫಿಲ್ಮ್ ಇನ್ಸಿಟಿಟ್ಯೂಟ್ ಎಂಬ ಚಲನಚಿತ್ರ
ತರಬೇತಿ ಸಂಸ್ಥೆ ಸ್ಥಾಪಿಸಿದ್ದು, ಈ ಮೂಲಕ ಅನೇಕ ಪ್ರತಿಭೆಗಳನ್ನು ಹುಟ್ಟುಹಾಕಿದ್ದಾರೆ ಬುಕ್ಕಾಪಟ್ಟಣವಾಸು. ಇದೀಗ ಕ್ರಿಯೇಟಿವ್ ಟೈಮ್ಸ್ ಸ್ಟುಡಿಯೋ ಸ್ಥಾಪನೆ ಮಾಡುವ ಮೂಲಕ ಚಿತ್ರರಂಗಕ್ಕೆಮತ್ತೊಂದು ಕೊಡುಗೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ಟುಡಿಯೋಉದ್ಘಾಟನೆಯಲ್ಲಿ ಹಿರಿಯ ಸಾಹಿತಿ , ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ದೊಡ್ಡರಂಗೇಗೌಡರು,ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕರ್, ನಿರ್ದೇಶಕ ಓಂ ಸಾಯಿಪ್ರಕಾಶ್ , ಸಂಗೀತ ನಿರ್ದೇಶಕ ವಿ ಮನೋಹರ್, ಬಾಮ ಹರೀಶ್ , ಬಾಮ ಗಿರೀಶ್ಹಾಗೂ ಭವಶ್ರೀ ರೈ ಭಾಗಿಯಾಗಿ ಬುಕ್ಕಾಪಟ್ಟಣ ವಾಸು ಹೊಸ ಸಾಹಸಕ್ಕೆ ಎಲ್ಲರೂ ಮೆಚ್ಚುಗೆಸೂಚಿಸಿದ್ದಾರೆ.
ಸ್ಟುಡಿಯೋ ವಿಶೇಷತೆ ಕುರಿತು ಮಾತನಾಡಿದ ಶ್ರೀಸಾಯಿಕೃಷ್ಣ ಅತ್ಯಾಧುನಿಕ ತಂತ್ರಜ್ಞಾನದಸೌಲಭ್ಯಗಳನ್ನೊಳಗೊಂಡ ಸ್ಟುಡಿಯೋ ಇದಾಗಿದೆ. ಹೊಸ ಪ್ರತಿಭೆಗಳಿಗೆ ಸಪರ್ಟಿವ್ ಆಗಿ ನಾವು ಕೆಲಸಮಾಡುತ್ತಿದ್ದೇವೆ ಎಂದರು. ಬುಕ್ಕಾಪಟ್ಟಣ ವಾಸು ಮಾತನಾಡಿ, ಮೊದಲು ಜಾಹೀರಾತಿಗೆಂದೇ ಈ ಸಂಸ್ಥೆ
ನಿರ್ಮಿಸಿದ್ದು, ಇದೇ ಬ್ಯಾನರ್ ನಿಂದ ಈಗ ಹೊಸ ಸಿನಿಮಾ ಶುರು ಮಾಡುತ್ತಿದ್ದೇವೆ. ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಬೇಕಾದ ಎಲ್ಲಾ ರೀತಿಯ ಆಧುನಿಕ ತಂತ್ರಜ್ಞಾನವನ್ನು ಸ್ಟುಡಿಯೋ ಒಳಗೊಂಡಿದೆ ಎಂದು ತಿಳಿಸಿದ್ದಾರೆ.