News Kannada
Wednesday, March 29 2023

ಸಾಂಡಲ್ ವುಡ್

ಕನ್ನಡದ ಬಾವುಟಕ್ಕೆ ಎಲ್ಲರೂ ಮರ್ಯಾದೆ ಕೊಡಲೇಬೇಕು: ನಟ ಧ್ರುವ ಸರ್ಜಾ

Photo Credit :

 ಸ್ಯಾಂಡಲ್‌ವುಡ್:  ಮಹಾರಾಷ್ಟ್ರದಲ್ಲಿ ಕರ್ನಾಟಕದ ಧ್ವಜ ಸುಟ್ಟು ಹಾಕಿದ ಘಟನೆ ಬಗ್ಗೆ ನಟ ಧ್ರುವ ಸರ್ಜಾ ಕೂಡ ತಮ್ಮ ಧ್ವನಿ ಎತ್ತಿದ್ದಾರೆ. ಆ ಬಗ್ಗೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.ರಚಿತಾ ರಾಮ್ ಮತ್ತು ಅಜಯ್ ರಾವ್ ನಟನೆಯ ಲವ್ ಯೂ ರಚ್ಚು ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು.

ಈ ವೇಳೆ ಕರುನಾಡಿನ ಧ್ವಜದ ಬಗ್ಗೆ ಅವರು ಮಾತನಾಡಿದರು.ಕರ್ನಾಟಕದ ಬಾವುಟಕ್ಕೆ ಎಲ್ಲರೂ ಮರ್ಯಾದೆ ಕೊಡಲೇಬೇಕು. ಮರ್ಯಾದೆ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿಲ್ಲ. ಅದು ಮನಸ್ಸಿನಲ್ಲೇ ಇರುತ್ತದೆ. ನಾವು ನಿಮಗೆ ಯಾವ ರೀತಿ ಮರ್ಯಾದೆ ಕೊಡುತ್ತೇವೋ ಅದೇ ರೀತಿ ನೀವು ನಮ್ಮ ಧ್ವಜವನ್ನು ಗೌರವಿಸಬೇಕು ಎಂದಿದ್ದಾರೆ. ಶಿವರಾಜ್‌ಕುಮಾರ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದ್ದಾರೆ. ಅದೇ ರೀತಿ ಜಗ್ಗೇಶ್, ಸಂತೋಷ್, ಆನಂದ್‌ರಾಮ್ ಸೇರಿದಂತೆ ಕನ್ನಡದ ಅನೇಕ ಸೆಲೆಬ್ರಿಟಿಗಳು ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ.

ಸೋಶಿಯಲ್ ಮೀಡಿಯಾ ಮೂಲಕ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಟ್ಯಾಗ್ಮಾ ಡಿ ಟ್ವೀಟ್ ಮಾಡಲಾಗುತ್ತಿದೆ.

See also  'ಸಮುದ್ರಂ' ಟೈಟಲ್ ರಿಲೀಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12795
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು