News Kannada
Thursday, March 23 2023

ಸಾಂಡಲ್ ವುಡ್

ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್ ನಲ್ಲಿ ರಾರಾಜಿಸಲಿದೆ ಸೈಕಲಾಜಿಕಲ್ ಥ್ರಿಲ್ಲರ್ ಸಿನೆಮಾ ‘ರುಗ್ನ’

Photo Credit : News Kannada

ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ಸಿನೆಮಾ ರುಗ್ನ. ಸೈಕಲಾಜಿಕಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಪ್ರತಿಭಾನ್ವಿತ ತಂಡದ ಈ ಚಿತ್ರಕ್ಕೆ ಸ್ಯಾಂಡಲ್ ವುಡ್ ಅಂಗಳದಲ್ಲಿ ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ವೆಂಕಟ್ ಭಾರಧ್ವಜ್ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಅಮೃತ ಫಿಲ್ಮಂ ಸೆಂಟರ್ ಬ್ಯಾನರ್ ನಡಿ ನಿರ್ಮಾಣವಾಗಿ ತೆರೆಗೆ ಬರಲು ಸಜ್ಜಾಗಿರೋ ಈ ಚಿತ್ರದ ಟೈಟಲ್ ‘ರುಗ್ನ’ ಅಂದ್ರೇನು ಎಂದು ನಿರ್ಮಾಪಕರನ್ನು ಕೇಳಿದ್ರೆ ಅವರು ಹೇಳೋದು, ಇದೊಂದು ಹಳೆಯ ಸಂಸ್ಕೃತ ಪದ. ಇದರರ್ಥ ಒಡೆದು ಹೋಗಿರೋದು ಎಂದು. ಚಿತ್ರದ ಕಥಾಹಂದರಕ್ಕೆ ಸೂಕ್ತ ಎನಿಸಿದ್ದರಿಂದ ಇದನ್ನೇ ಟೈಟಲ್ ಆಗಿ ಇಡಲಾಗಿದೆ ಎನ್ನುತ್ತಾರೆ.

ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟ ಅನುಭವಿಸಿ ಬದಲಾವಣೆಗೆ ಹಾತೊರೆಯುವ ವ್ಯಕ್ತಿಯೊಬ್ಬನ ಜೀವನದ ಸುತ್ತ ತೆರೆದುಕೊಳ್ಳುವ ಕಥಾ ಹಂದರದೊಂದಿಗೆ, ಅದು ಸಲೀಸಾಗಿರದೇ ನೋಡುಗರಿಗೆ ಥ್ರಿಲ್ ನೀಡುತ್ತ, ಕೌತುಕ ಮೂಡಿಸುತ್ತ ಒಂದೊಳ್ಳೆ ಮನರಂಜನೆ ನೀಡುವ ಕಥೆ ಚಿತ್ರದಲ್ಲಿದೆ.

‘ರುಗ್ನ’ ಚಿತ್ರಕ್ಕೆ ಸುನೀಲ್ ಎಸ್ ಭಾರಧ್ವಜ್ ನಿರ್ದೇಶನ ಮಾಡ್ತಿದ್ದು, ಈ ಸಿನೆಮಾದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ. ಇವರಿಗೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಸಾಥ್ ನೀಡಿದ್ದು ಸುಹಾಸ್ ಕೆಎಸ್ ರಾವ್. ಮೊದಲೇ ಹೇಳಿದಂತೆ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಅದಕ್ಕೆ ಬೇಕಾದ ಎಲ್ಲಾ ರೀತಿಯ ಎಲಿಮೆಂಟ್ ಚಿತ್ರದಲ್ಲಿದ್ದು, ತಾಂತ್ರಿಕವಾಗಿಯೂ ಅಷ್ಟೇ ಸ್ಟ್ರಾಂಗ್ ಆಗಿದ್ದು, ಸಿಂಕ್ ಸೌಂಡ್ ಬಳಿಸಿಕೊಂಡಿರೋದು ಚಿತ್ರದ ಮತ್ತೊಂದು ಸ್ಪೆಷಾಲಿಟಿ.

ಕಳೆದ ಏಪ್ರಿಲ್ ನಲ್ಲಿ ಸೆಟ್ಟೇರಿ ಚಿತ್ರೀಕರಣಕ್ಕೆ ಹೊರಟಿದ್ದ ಚಿತ್ರತಂಡ ಬೆಂಗಳೂರು, ಮಂಗಳೂರು, ಪಡುಬಿದ್ರೆಯಲ್ಲಿ ಯಶಸ್ವಿ 28 ದಿನಗಳ ಚಿತ್ರೀಕರಣ ಮುಗಿಸಿಕೊಂಡು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನೂ ಮುಗಿಸಿ ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇದೇ ಮೇ ತಿಂಗಳಲ್ಲಿ ಸಿನಿಮಾ ತೆರೆ ಮೇಲೆ ತರಲು ಚಿತ್ರತಂಡ ಸಜ್ಜಾಗಿದೆ. ಈ ನಡುವೆ ಚಿತ್ರತಂಡಕ್ಕೆ ಸಿಹಿ ಸುದ್ದಿಯೂ ಸಿಕ್ಕಿದೆ. ಹೌದು, ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ರುಗ್ನ ಸಿನಿಮಾ ಆಯ್ಕೆಯಾಗಿದೆ. ಬೇರೆ ಬೇರೆ ದೇಶದ ಸಿನಿಮಾಗಳು ತೆರೆ ಕಾಣುವ, ನುರಿತ ಸಿನಿಮಾ ತಜ್ಞರು ಇರುವ ವೇದಿಕೆಯಲ್ಲಿ ನಮ್ಮ ಸಿನಿಮಾ ಕೂಡ ಆಯ್ಕೆ ಆಗಿ ತೆರೆ ಕಾಣುತ್ತಿರುವುದು ಚಿತ್ರತಂಡದ ಸಂತಸಕ್ಕೆ ಪಾರವೇ ಇಲ್ಲವಾಗಿದೆ ಅಂತಾರೆ ನಿರ್ಮಾಪಕರು.

ತಾಂತ್ರಿಕವಾಗಿ ಒತ್ತು ನೀಡಿ ಶ್ರೀಮಂತವಾಗಿ ಮೂಡಿ ಬಂದಿರುವ ರುಗ್ನ ಚಿತ್ರಕ್ಕೆ ನಿರ್ದೇಶಕ ಸುನೀಲ್ ಎಸ್ ಭಾರಧ್ವಜ್ ಸಂಕಲನ ಜವಾಬ್ದಾರಿ ಹೊತ್ತುಕೊಂಡರೆ, ನಚಿಕೇತ್ ಶರ್ಮಾ ಸಂಗೀತ ನಿರ್ದೇಶನ, ಸಂಜಯ್ ಎಲ್ ಚೆನ್ನಪ್ಪ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಉದಯ್ ಆಚಾರ್, ಸುಪ್ರಿತ ಸತ್ಯನಾರಾಯಣ್, ಸುಗ್ರೀವ್ ಗೌಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸ್ಮಿತ ಕುಲ್ಕರ್ಣಿ, ಬಾಲ ರಾಜ್ವಾಡಿ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದ ತಾರಬಳಗದಲ್ಲಿದ್ದಾರೆ. ಚಿತ್ರ್ಕಕೆ ವೆಂಕಟ್ ಭಾರಧ್ವಜ್ ಜೊತೆಗೆ ಮನಿಮಾರನ್ ಸುಬ್ರಮಣಿಯನ್ ಕೂಡ ಬಂಡವಾಳ ಹೂಡಿ ಸಾಥ್ ನೀಡಿದ್ದಾರೆ.

See also  ಫೆ.25ರಂದು ಝೀ-5ನಲ್ಲಿ ರಿಲೀಸ್ ಆಗಲಿದೆ ದೃಶ್ಯ-2
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

6528

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು