News Kannada
Thursday, March 30 2023

ಸಾಂಡಲ್ ವುಡ್

ಭಾವನಾತ್ಮಕವಾಗಿ ಬಂಧಿಸುತ್ತಿದೆ ‘ಕನ್ನೇರಿ’ ಚಿತ್ರದ  ಈ ಹಾಡು..!

Photo Credit :

ಸ್ಯಾಂಡಲ್ ವುಡ್: ಕೆಲವೊಂದು ಸಿನಿಮಾಗಳು ಭಾವಾನಾತ್ಮಕವಾಗಿ ಎಲ್ಲರನ್ನು ಆವರಿಸಿ ಬಿಡುತ್ತದೆ. ನೋಡುತ್ತಾ ನೋಡುತ್ತಾ ಕಣ್ಣಾಲಿಗಳು ತೇವವಾಗುತ್ತವೆ. ಅಂತದ್ದೊಂದು ಸನ್ನಿವೇಶ ಸೃಷ್ಟಿಸುತ್ತಿರುವುದು ಕನ್ನೇರಿ ಸಿನಿಮಾ. ಸದ್ಯ ಮತ್ತೊಂದು ಸಾಂಗ್ ರಿಲೀಸ್ ಮಾಡಿ, ಭಾವನೆಯಲ್ಲೇ ಕಟ್ಟಿ ಹಾಕುತ್ತಿದೆ.

‘ಕಾಣದ ಊರಿಗೆ ಕೂಲಿಗೆ ಹೊರಟೋಳೆ.. ಕಣ್ತುಂಬ ಕನಸುಗಳ ತೇರನ್ನೇ ಹೊತ್ತೋಳೆ’ ಸಾಲಿನಿಂದ ಆರಂಭವಾಗುವ ಈ ಹಾಡು ಮತ್ತೆ ಮತ್ತೆ ಕೇಳಬೇಕು, ನೋಡಬೇಕು ಎನಿಸುತ್ತಿದೆ. ಕೇಳುತ್ತಾ ಹೋದಾಗ ಮತ್ತೆ ಮತ್ತೆ ಕಾಡುವ ಸಾಲುಗಳು ನಮ್ಮ ಕಣ್ಣಾಲಿಯಲ್ಲಿ ನೀರು ತರಿಸುತ್ತವೆ. ಗೇಣುದ್ದ ಗೆಣಸಿಗೆ ಕಾಡೆಲ್ಲಾ ಅಲೆದವಳೆ.. ಕನಸಿಲ್ಲ ಯಾಕವ್ವ ಕಣ್ಣಾಗಾ.. ಬಲವಿಲ್ಲ ಯಾಕವ್ವ ರೆಟ್ಯಾಗ.. ಜೇನಿಗೆ ಹೋದ ಅಪ್ಪ ಆನೆಗೆ ಬಲಿಯಾದ..  ಈ ಸಾಲುಗಳು ಅದೆಷ್ಟು ರಿಯಾಲಿಟಿಯನ್ನ ಹೊತ್ತು ಸಾಗುತ್ತಿವೆ ಅನ್ನೋದನ್ನ ಸಪರೇಟ್ ಆಗಿ ಹೇಳಬೇಕಿಲ್ಲ.

ಕೀರ್ತನಾ ಹೊಳ್ಳ ಹಾಗೂ ಇಂದು ನಾಗರಾಜ್ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ಮಣಿಕಾಂತ್ ಕದ್ರಿ ಸಂಗೀತ ಒಂದು ಕ್ಷಣ ಎಲ್ಲರೊಳಗೂ ನರಳುವಂತೆ ಮಾಡುತ್ತಿದೆ. ಈ ಸಿನಿಮಾದಿಂದ ಈಗಾಗಲೇ ಎರಡು ಹಾಡುಗಳು ರಿಲೀಸ್ ಆಗಿ ಎಲ್ಲರ ಮನ ಗೆದ್ದಿವೆ.  ಇದೀಗ ಈ ಹಾಡು ಕೂಡ ಎಲ್ಲರ ಮನಸ್ಸಿನ ಕದ ತಟ್ಟಿದೆ. ಹಾಡಿನ ಸಾಹಿತ್ಯವೇ ಇಷ್ಟು ಹತ್ತಿರವಾಗಿದ್ದರೆ, ಸಿನಿಮಾ ಇನ್ನೆಷ್ಟು ಗಟ್ಟಿ ಕಥೆಯನ್ನ ಹೊಂದಿರಬಹುದು ಎಂಬುದು ಎಲ್ಲರ ಕುತೂಹಲ.

ಈಗಾಗಲೇ ಎಲ್ಲರಿಗೂ ಗೊತ್ತಿರೋ ವಿಚಾರ ಕನ್ನೇರಿ ಸಿನಿಮಾ ದಿಡ್ಡಳ್ಳಿ ಜನರ ಬದುಕು ಬವಣೆಯನ್ನ ಆಧರಿಸಿ ಹೆಣೆಯಲಾಗಿದೆ. ಅಲ್ಲಿನ ಜನರ ಜೀವನ ಹೋರಾಟದ ಬಳಿಕ ಏನಾಯ್ತು ಅನ್ನೋದನ್ನ ತೋರಿಸಲು ಹೊರಟಿದ್ದಾರೆ ನಿರ್ದೇಶಕರು. ಎಷ್ಟೆಲ್ಲಾ ತಯಾರಿ ನಡೆಸಿದ್ದಾರೆ, ಹೇಗೆಲ್ಲಾ ಸಿನಿಮಾ ಮೂಡಿ ಬಂದಿರಬಹುದು ಎಂಬುದ ಈಗಾಗಲೇ ಹಾಡುಗಳನ್ನ ನೋಡಿದವರಿಗೆ ತಿಳಿಯುತ್ತಿದೆ, ನಿರ್ದೇಶಕ ನೀನಾಸಂ ಮಮಜು ಕೂಡ ಅದೆಷ್ಟು ಎಫರ್ಟ್ ಹಾಕಿದ್ದಾರೆ ಎಂಬುದು ಗೊತ್ತಾಗ್ತಿದೆ.

ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ನಲ್ಲಿ ಪಿಪಿ ಹೆಬ್ಬಾರ್ ಮತ್ತು ಚಂದ್ರಶೇಖರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ರೆ, ಅರುಣ್ ಸಾಗರ್, ಅನಿತಾ ಭಟ್, ಸರ್ದಾರ್ ಸತ್ಯ, ಕರಿ ಸುಬ್ಬು ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

See also  ನೈಜ ಘಟನೆ ಆಧಾರಿತ ‘ಕನ್ನೇರಿ’ ನಾಳೆ ರಾಜ್ಯಾದ್ಯಂತ ರಿಲೀಸ್..!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

6528

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು