News Kannada
Thursday, March 30 2023

ಸಾಂಡಲ್ ವುಡ್

‘ಕನ್ನೇರಿ’ ಚಿತ್ರದ ಹಾಡು ರಿಲೀಸ್ ಮಾಡಿ, ಚಿತ್ರತಂಡಕ್ಕೆ ಸಾಥ್ ಕೊಟ್ಟ ನಟ ವಸಿಷ್ಠ ಸಿಂಹ

Photo Credit : News Kannada

ಸ್ಯಾಂಡಲ್ ವುಡ್: ನೀನಾಸಂ ಮಂಜು ಆಕ್ಷನ್ ಕಟ್ ಹೇಳಿರುವ ಮಹಿಳಾ ಪ್ರಧಾನ ಚಿತ್ರ  ‘ಕನ್ನೇರಿ’ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿದ್ದು, ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಈ ನಡುವೆ  ಚಿತ್ರತಂಡ ಸಿನೆಮಾದ  ಒಂದೊಂದೇ ಸ್ಯಾಂಪಲ್ ಗಳನ್ನ  ರಿಲೀಸ್ ಮಾಡೋ ಮೂಲಕ ಕನ್ನೇರಿ  ಸಿನಿಮಾ ಮೇಲಿನ ನಿರೀಕ್ಷೆಯನ್ನ  ಹೆಚ್ಚು ಮಾಡುತ್ತಿದೆ. ನೀನಾಸಂ ಮಂಜು ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಕೊಟಿಗಾನಹಳ್ಳಿ ರಾಮಯ್ಯ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಕೊಡಗಿನಲ್ಲಿ ನಡೆದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಹಾಗೂ ಕ್ಷೀರ ಸಾಗರ ಅವರ ಜೇನು: ಆಕಾಶದ ಅರಮನೆ ಕಾದಂಬರಿ ಸ್ಪೂರ್ತಿಯೊಂದಿಗೆ ಹೆಣೆಯಲಾದ ಈ ಚಿತ್ರದಲ್ಲಿ ನಿರ್ವಸತಿಗರ ನೋವಿನ ಕಥೆಯಿದೆ, ನೆಲೆ ಹುಡುಕ ಹೊರಟ ಹೆಣ್ಣು ಮಗಳೊಬ್ಬಳ  ವ್ಯಥೆ ಇದೆ.
ನೈಜ ಘಟನೆಯಾಧಾರಿತ ಚಿತ್ರವನ್ನು ನೀನಾಸಂ ಮಂಜು ಕಮರ್ಶಿಯಲ್ ಎಳೆಯಲ್ಲಿ  ತೆರೆಗೆ ತರಲು ಸಜ್ಜಾಗಿದ್ದಾರೆ. ಬಿಡುಗಡೆಗೂ ಮುನ್ನವೇ ಒಂದೊಳ್ಳೆ ಪಾಸಿಟಿವ್ ಬಝ್ ಕ್ರಿಯೇಟ್ ಮಾಡಿರುವ ಈ ಚಿತ್ರಕ್ಕೆ ಚಿತ್ರರಂಗದ ಹಲವರು ಸಾಥ್ ನೀಡುತ್ತಿದ್ದಾರೆ.

ಹೌದು,  ಇದಕ್ಕೆ ಸಾಕ್ಷಿ ಎಂಬಂತೆ ಗೋಚರಿಸಿದ್ದು,  ಕನ್ನೇರಿ ಸಿನಿಮಾದ ಹಾಡಿನ ಬಿಡುಗಡೆ ಸಮಾರಂಭ. ಚಿತ್ರದ ಬಹು ನಿರೀಕ್ಷಿತ ಹಾಡು ‘ಕಾಣದ ಊರಿಗೆ ಕೂಲಿಗೆ ಹೊರಟೋಳೆ’ ಹಾಡಿನ ಬಿಡುಗಡೆ ಸಲುವಾಗಿ ಚಿತ್ರತಂಡ ಕಾರ್ಯಕ್ರಮವೊಂದನ್ನ  ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಜೊತೆಗೆ ಸ್ಯಾಂಡಲ್ ವುಡ್ ಖ್ಯಾತ ನಟ ವಸಿಷ್ಠ ಸಿಂಹ ಭಾಗಿಯಾಗಿ ಹಾಡನ್ನು ಬಿಡುಗಡೆ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ  ಪ್ರೋತ್ಸಾಹ ನೀಡಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಕಲಾವಿದರಾದ ಚಕ್ರವರ್ತಿ ಚಂದ್ರಚೂಡ್, ನಿರ್ಮಲ, ಸರ್ದಾರ್ ಸತ್ಯ ಕೂಡ ಭಾಗಿಯಾಗಿದ್ದರು. ಅದ್ಭುತವಾದ ಸಾಲುಗಳ ಹೊತ್ತ ಈ ಹಾಡಿಗೆ ಕೊಟಿಗಾನಹಳ್ಳಿ ರಾಮಯ್ಯ ಚೆಂದದ ಸಾಹಿತ್ಯ ರಚಿಸಿದ್ದು ಇಂದು ನಾಗರಾಜ್ ಮತ್ತು ಸರಿಗಮಪ ಖ್ಯಾತಿಯ ಕೀರ್ತನ್ ಹೊಳ್ಳ ಹಾಡಿಗೆ ದನಿಯಾದ್ರೆ, ಮಣಿಕಾಂತ್ ಕದ್ರಿ ಯವರ ಸಂಗೀತ ಸಂಯೋಜನೆ ಹಿತವಾಗಿ ಮೂಡಿಬಂದಿದೆ.

ಚಿತ್ರ ರಿಲೀಸ್ ಆದ್ಮೇಲೆ ಸಿನೆಮಾ ಒಪ್ಪೋದು, ಪ್ರೋತ್ಸಾಹ ಕೊಡೋದು ಒಂದು ಖುಷಿಯಾದ್ರೆ, ಬಿಡುಗಡೆಗೂ ಮೊದಲೇ ಚಿತ್ರರಂಗದ ಪ್ರೋತ್ಸಾಹ ಹಾಗೂ ಸಿನಿಪ್ರಿಯರು ತೋರುತ್ತಿರುವ ಪ್ರೀತಿ ಕನ್ನೇರಿ ಚಿತ್ರತಂಡಕ್ಕೆ ಅತೀವ ಸಂತಸವನ್ನುಂಟು ಮಾಡಿದೆ ಎಂದು ಚಿತ್ರತಂಡ ಖುಷಿಯಿಂದ ಹೇಳುತ್ತೆ.

ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಚಿತ್ರದಲ್ಲಿ    ಅರ್ಚನಾ ಮಧುಸೂದನ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನಿತ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ. ಮಠ್ ಒಳಗೊಂಡ ಅನುಭವಿ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ನಿರ್ಮಾಪಕರು. ಚಿತ್ರಕ್ಕೆ ಬಂಡವಾಳ ಹೂಡಿದ್ದು,  ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ಕೈಚಳಕ ಕನ್ನೇರಿ ಚಿತ್ರದಲ್ಲಿ ಮೋಡಿ ಮಾಡೋಕೆ ಸಜ್ಜಾಗಿದೆ.

See also  ‘ಕೆಜಿಎಫ್​ 2’ ಚಿತ್ರದ ಟ್ರೇಲರ್ ​ಇಂದು ರಿಲೀಸ್, ಸಿನಿಮಾ ಏಪ್ರಿಲ್​ 14ರಂದು ತೆರೆಗೆ!

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

6528

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು