ವಿನು ಬಳಂಜ ನಿರ್ದೇಶನದ ‘ಬೇರ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಕಲಾವಿದರನ್ನು ಒಳಗೊಂಡ ಸಿನೆಮಾ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ಕಲಾವಿದ ಸ್ವರಾಜ್ ಶೆಟ್ಟಿ ಹೇಳಿದ್ದಾರೆ.
ಬದುಕುವುದಕ್ಕೆ ವ್ಯಾಪಾರ ಒಂದೆಡೆಯಾದರೆ, ಬದುಕು ಮುಗಿಸುವುದೇ ಇನ್ನೊಂದೆಡೆ ವ್ಯಾಪಾರ. ಮುಗ್ಧ ಅಮ್ಮಂದಿರ ಮಕ್ಕಳು ಸಾಯ್ತಾರೆ. ಅದು ಆಗಬಾರದು ಎನ್ನುವ ಆಶಯದೊಂದಿಗೆ ಸಿನೆಮಾ ಮಾಡಿದ್ದೇವೆ. ಕಲ್ಲಡ್ಕದಲ್ಲಿ ಮ್ಯೂಸಿಯಂ ಒಂದಿದೆ. ಅಲ್ಲಿ ಈ ಕತೆ ಹೊಳೆಯಿತು. ಕರಾವಳಿಯ ಜನರಿಗೆ ಕನೆಕ್ಟ್ ಆಗುವ ನಿಟ್ಟಿನಲ್ಲಿ ಸಿನೆಮಾ ಮೂಡಿಬಂದಿದೆ ಎಂದು ವಿನು ಬಳಂಜ ಹೇಳಿದ್ದಾರೆ.
ವಿನು ಬಳಂಜ ತುಳುನಾಡಿನ ಪ್ರತಿಭೆ. ಟಿ.ಎನ್. ಸೀತಾರಾಮ್ ಅವರ ಶಿಷ್ಯ. ಹಲವು ಧಾರಾವಾಹಿ ಮಾಡಿದ್ದರು ಅವರು ಇನ್ನಷ್ಟು ಚಿತ್ರ ಮಾಡುವಂತಾಗಲಿ ಎಂದು ಹಿರಿಯ ಕಲಾವಿದ ವಿಜಯ ಕುಮಾರ್ ಕೊಡಿಯಾಲಬೈಲ್ ಶುಭಹಾರೈಸಿದ್ದಾರೆ. ಚಿತ್ರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರೋಲ್ ಮಾಡಿದ್ದೇನೆ. ಕರಾವಳಿಗೆ ಈ ಕತೆ ತುಂಬ ಕನೆಕ್ಟ್ ಆಗಿದೆ ಎಂದು ಅಶ್ವಿನ್ ಹಾಸನ ಸಂತಸ ವ್ಯಕ್ತಪಡಿಸಿದ್ದಾರೆ. ಅಮಾಯಕರನ್ನು ಉಪಯೋಗಿಸಿ ಹೇಗೆ ಬಿಸಾಡುತ್ತಾರೆ. ಅದು ಹೇಗೆ ವ್ಯಾಪಾರ ಆಗ್ತದೆ? ಜೀವನ ಹಾಳು ಮಾಡಿಕೊಳ್ಳದೆ ಸಾಗಲು ಈ ಸಿನೆಮಾ ಉತ್ತಮ ಮೆಸೆಜ್ ನೀಡಲಿದೆ ನಟ ಧವಳ್ ದೀಪಕ್ ಹೇಳಿದ್ದಾರೆ.