ಹುಬ್ಬಳ್ಳಿ : ಇವತ್ತು ಜಗದೀಶ್ ಶೆಟ್ಟರ್ ಪರ ಮತಯಾಚನೆ ಮಾಡಿದ್ದು ಖುಷಿ ತಂದಿದೆ.ರೋಡ್ಶೋ ವೇಳೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಾನೂ ಪ್ರಚಾರಕ್ಕೆ ಬಂದಿರುವ ಬಗ್ಗೆ ಟ್ರೋಲ್ ಮಾಡುವವರ ಬಗ್ಗೆ ನಾ ಏನೂ ಮಾತನಾಡಲ್ಲ.ಯಾತಕ್ಕೆ ಟ್ರೋಲ್ ಮಾಡಬೇಕು, ಟ್ರೋಲ್ ಮಾಡುವವರು ತಮ್ಮ ಮನಸ್ಸಿಗೆ ಯಾವೇ ಪ್ರಶ್ನೆ ಮಾಡಿಕೊಳ್ಳಿ ಇದು ಸರಿನಾ ಅಂತ ಎಂದು ನಟ ಡಾ. ಶಿವರಾಜಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ರೋಡ್ಶೋನಲ್ಲಿ ಇಷ್ಟೊಂದು ಜನ ಬಂದಿದ್ದಾರೆ, ಇವರೆಲ್ಲ ಟ್ರೋಲ್ ಮಾಡಲಿಕ್ಕೆ ಬಂದಿದ್ದಾರೇನೂ.ಇಲ್ಲಿ ಬಂದವರೆಲ್ಲ ಕಾಂಗ್ರೆಸ್ನವರಲ್ಲ, ಬಿಜೆಪಿಯವರು ಇದ್ದಾರೆ, ಪಕ್ಷೇತರರು ಇದ್ದಾರೆ. ಇವತ್ತು ನಮ್ಮ ಕರ್ತವ್ಯ ನಾವು ಮಾಡಲಿಕ್ಕೆ ಬಂದಿದ್ದೇವೆ, ಇದಕ್ಕೆ ಜನ್ರು ಉತ್ತಮ ಪ್ರೀತಿ ತೋರಿಸುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೆ ಆದ ವ್ಯಕ್ತಿತ್ವ ಇರುತ್ತದೆ, ಐಡಿಯಾಲಜಿ ಇರುತ್ತೆಅವರದ್ದೆ ಕೆಲವು ಆಸೆಗಳು ಇರ್ತಾವೆ, ಅದಕ್ಕಾಗಿ ಬಂದಿರುತ್ತೇವೆ, ಅದನ್ನ ಬಿಟ್ಟು ನಾವು ಯಾರನ್ನ ದೋಷಿಸಲು ಇಲ್ಲಿ ಬಂದಿಲ್ಲ. ಟ್ರೋಲ್ ಮಾಡುವ ಅವಶ್ಯಕತೆ ಇಲ್ಲ, ಯಾತಕ್ಕೆ ಮಾಡಬೇಕು, ಮನುಷ್ಯ ಅರ್ಥ ಮಾಡಿಕೊಂಡರೆ ಸಾಕು. ಎಷ್ಟು ದಿನ ಟ್ರೋಲ್ ಮಾಡ್ತಿರಿ, ಅದು ಸರ್ವ ಆಗಲ್ಲ. ಮನುಷ್ಯ ಯಶಸ್ವಿ ಆಗಬೇಕಾದ್ರೆ ಹಾರ್ಟ್ ಮತ್ತು ಮೆದುಳು ಮೊದಲು ಸರಿಯಾಗಿರಬೇಕು. ಮೊದಲು ನಿಮ್ಮ ಹೃದಯವನ್ನ ಕೇಳಿ ಆಮೇಲೆ ಟ್ರೋಲ್ ಮಾಡಿ.ಹುಬ್ಬಳ್ಳಿಗೂ ನಮಗೂ ಒಳ್ಳೆಯ ಸಂಬಂಧಿ ಇದೆ. ಇಷ್ಟು ದಿನ ಸಿನಿಮಾ ಪ್ರಚಾರಕ್ಕಾಗಿ ಬರ್ತಾ ಇದ್ದೆ, ಇವತ್ತು ಈ ಪ್ರಚಾರಕ್ಕಾಗಿ ಬಂದದ್ದೇನೆ ಎಂದರು.
ಪ್ರಶಾಂತ ಸಂಬರಗಿ ಟ್ವಿಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ,ಹೌದಾ ನಮ್ಮಲ್ಲಿ ದುಡ್ಡು ಇಲ್ವಾ..? ಅವರು ಟ್ವಿಟ್ ಮಾಡಿದ್ದು ತಪ್ಪು.ನಾನೂ ಹಣ ಹಿಸಿದುಕೊಂಡು ಪ್ರಚಾರಕ್ಕೆ ಬಂದಿಲ್ಲಾ. ನಾನೂ ಹಾರ್ಟ್ನಿಂದ, ಒಬ್ಬ ಮನುಷ್ಯನಾಗಿ ಪ್ರಚಾರಕ್ಕೆ ಬಂದಿದ್ದೇನೆ.ಇಲ್ಲಿ ವ್ಯಾಪಾರಕ್ಕೋಸ್ಕರ ಇಲ್ಲಿ ಬಂದಿಲ್ಲ, ಪ್ರೀತಿ ವಿಶ್ವಾಸಗೋಸ್ಕರ ಇಲ್ಲಿ ಬಂದಿದ್ದೇನೆ.ಬೇರೆ ಯಾರನ್ನೂ ಟೀಕೆ ಮಾಡಲಿಕ್ಕ ನಾ ಬಂದಿಲ್ಲ. ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡಬೇಕು ಆ ಬಗ್ಗೆ ನಾನ್ ಮಾತನಾಡುತ್ತೇನೆ. ಇಲ್ಲಿ ಬೇರೆ ಯಾರು ಬಗ್ಗೆ ನಾನ್ ಮತಾನಾಡಿದ್ನಾ..? ಎಂದರು.