ಉಡುಪಿ: ಸತ್ಯ ಘಟನೆ ಆಧಾರಿತ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂಬುದು ಎಷ್ಟು ಸರಿ. ಇತಿಹಾಸ ಜನರಿಗೆ ಗೊತ್ತಾಗಲೇಬೇಕು ಎಂದು ಚಿತ್ರನಟಿ, ಬಿಜೆಪಿ ನಾಯಕಿ ತಾರಾ ಹೇಳಿದರು.
ದಿ ಕೇರಳ ಸ್ಟೋರಿ ಚಿತ್ರ ಬಿಡುಗಡೆ ಸಂಬಂಧಿಸಿ ಉಂಟಾಗಿರುವ ವಿವಾದದ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಕಾಶ್ಮೀರಿ ಫೈಲ್ಸ್ ಸಿನಿಮಾ ಬಂದಾಗಲೂ ಇದೇ ತರಹದ ಚರ್ಚೆಗಳು ಶುರುವಾಗಿದ್ದವು. ಆ ಚಿತ್ರದಲ್ಲಿ ಎಲ್ಲೂ ಕೂಡ ಸುಳ್ಳನ್ನು ವೈಭವೀಕರಿಸಿರಲಿಲ್ಲ. ನಡೆದ ಸತ್ಯವನ್ನು ಚಿತ್ರದ ಮೂಲಕ ತೋರಿಸಿದ್ದರು ಎಂದರು.
ದಿ ಕೇರಳ ಸ್ಟೋರಿ ರೀತಿಯಲ್ಲಿ ನಾನೇ ‘ಮುನ್ನುಡಿ’ ಎಂಬ ಚಿತ್ರವನ್ನು ಮಾಡಿದ್ದೆ. ನಿಜವಾದ ಘಟನೆಯನ್ನು ಆಧರಿಸಿ ಆ ಚಿತ್ರ ತಯಾರಾಗಿತ್ತು. ಇಂತಹ ಚಿತ್ರಗಳು ಸತ್ಯದ ಮುಖವನ್ನ ತೋರಿಸುತ್ತವೆ ಎಂದರು.