News Karnataka Kannada
Thursday, April 18 2024
Cricket
ಹೊರನಾಡ ಕನ್ನಡಿಗರು

ಕೆಡಿಎಂಸಿ ಕಾರ್ಪೋರೇಟರ್ ದಯಶಂಕರ್ ಶೆಟ್ಟಿ ನೇತೃತ್ವದಲ್ಲಿ ಆಹಾರ ವಸ್ತುಗಳ ವಿತರಣೆ

Photo Credit :

ಕೆಡಿಎಂಸಿ ಕಾರ್ಪೋರೇಟರ್ ದಯಶಂಕರ್ ಶೆಟ್ಟಿ ನೇತೃತ್ವದಲ್ಲಿ ಆಹಾರ ವಸ್ತುಗಳ ವಿತರಣೆ

ಮುಂಬಯಿ: ಕಲ್ಯಾಣ್ – ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಅಧ್ಯಕ್ಷ – ಶಿವಸೇನೆ ಕಾರ್ಪೋರೇಟರ್ ದಯಶಂಕರ್ ಪಿ. ಶೆಟ್ಟಿ, ಅವರ ನೇತೃತ್ವದಲ್ಲಿ ಕಲ್ಯಾಣ್ – ಡೊಂಬಿವಲಿ ಪ್ರದೇಶದಲ್ಲಿ ಲಾಕ್‌ಡೌನ್ ನಿಂದಾಗಿ ಅಸಾಯಕರಾಗಿದ್ದ ಸಾವಿರಾರು ಜನರಿಗೆ ಸಹಕರಿಸುತ್ತಿರುವರು. ಈ ಕಠಿಣ ಸಮಯದಲ್ಲಿ ಸಹಾಯವನ್ನು ನೀಡಿದ ದಾನಿಗಳು ಮತ್ತು ಇತರರಿಗೆ ದಯಾಶಂಕರ್ ಪಿ. ಶೆಟ್ಟಿ ಕೃತಜ್ನತೆ ಅರ್ಪಿಸಿದರು. ರೆಡಿ-ಟು-ಈಟ್ ಸೆಂಟ್ರಲ್ ಕಮ್ಯುನಿಟಿ ಕಿಚನ್ ಅನ್ನು ಸ್ಥಾಪಿಸಿದ್ದು, ಮುಂಬರುವ ದಿನಗಳಲ್ಲಿ ಇದು ಸಹಕಾರಿಯಾಗುತ್ತದೆ.

ದಯಾಶಂಕರ್ ಪಿ.ಶೆಟ್ಟಿ ಮತ್ತು ಅವರ ತಂಡವು ಈ ಕಾರ್ಯವನ್ನು ನಿರ್ವಹಿಸುವಾಗ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುತ್ತಾರೆ.

ಈಗಾಗಲೇ 17000 ಕ್ಕೂ ಹೆಚ್ಚು ಫೇಸ್ ಮಾಸ್ಕ್‌ಗಳನ್ನು , ಅಕ್ಕಿ, ಅಟ್ಟಾ / ಗೋಧಿ, ದಾಲ್ ಮತ್ತು ತೈಲವನ್ನು ಒಳಗೊಂಡಿರುವ 1800 ಕ್ಕೂ ಹೆಚ್ಚು ಆಹಾರ ಧಾನ್ಯ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಏಪ್ರಿಲ್ 27 ರವರೆಗೆ ಅವರು 4000 ಕೆಜಿಗಿಂತ ಹೆಚ್ಚು ಗೋಧಿ / ಗೋಧಿ ಹಿಟ್ಟು, 4000 ಕೆ.ಜಿ. ಅಕ್ಕಿ,  2000 ಕೆಜಿ ದಾಲ್ ಮತ್ತು 2000 ಲೀಟರ್ ಅಡುಗೆ ಎಣ್ಣೆ ಯನ್ನು ಈಗಾಗಲೇ ವಿತರಿಸಿದ್ದು ಇದು ಮುಂದುವರಿಯುತ್ತಿದೆ.

ಇವರ ತಂಡವು ಸುಮಾರು 6000 ಲೀಟರ್‌ಗಳನ್ನು ಎಫ್‌ಡಿಎ 3% ಹೈಡ್ರೋಜನ್ ಪೆರಾಕ್ಸೈಡ್ ಸೋಂಕು ನಿವಾರಕವನ್ನು ಸಂಗ್ರಹಿಸಿ ಪರಿಸರದಲ್ಲಿ ಸಿಂಪಡಿಸಿದೆ. ಇದಕ್ಕೆ ಕೆಡಿಎಂಸಿಯ ಯಂತ್ರಗಳನ್ನು ಬಳಸಲಾಗುತ್ತಿತ್ತು ಒಂದೆರಡು ಯಂತ್ರಗಳನ್ನು ಖರೀದಿಸಿ ಈ ಸೋಂಕುನಿವಾರಕವನ್ನು ಸಿಂಪಡಿಸಲು ತರಬೇತಿ ಪಡೆದ ವ್ಯಕ್ತಿಗಳನ್ನು ನೇಮಿಸಲಾಗಿದೆ.

ಈಶ್ವರ ಎಂ. ಐಲ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು