ದುಬೈ: ಯುಎಇ ರಾಷ್ಟ್ರೀಯ ದಿನಾಚರಣೆಯೊಂದಿಗೆ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿ ಅಧೀನದಲ್ಲಿ ಕೆಐಸಿ ಕ್ರಿಸ್ಟಲ್ ಜುಬಿಲಿ ಮೀಟ್ ಎಂಬ ಬೃಹತ್ ಕಾರ್ಯಕ್ರಮವು ಡಿಸೆಂಬರ್ 11 ರಂದು ದುಬೈ ಇರಾನಿಯನ್ ಕ್ಲಬ್ ಹತ್ತಿರವಿರುವ ಜೇಮ್ಸ್ ಪ್ರೈವೇಟ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ.
ಆ ಪ್ರಯುಕ್ತ ತಾಯಿನಾಡಿನ ಗಣ್ಯ ಅತಿಥಿಗಳಾದ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಗೌರವ ಸಲಹೆಗಾರರಾದ ಸಯ್ಯದ್ ಅಲಿ ತಂಙಲ್ ಕುಂಬೋಲ್, ಅಕಾಡೆಮಿ ಅಧ್ಯಕ್ಷರಾದ ಕೆ ಪಿ ಆಕರ್ಷಣ್ ಅಹಮ್ಮದ್ ಹಾಜಿ ಹಾಗೂ ಕ್ರಿಸ್ಟಲ್ ಜುಬಿಲಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಗೈಯಲ್ಲಿರುವ ಹಾಜಿ ಹುಸೈನ್ ದಾರಿಮಿ ರೆಂಜಲಾಡಿ ಯವರನ್ನು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಐಸಿ ಪದಾಧಿಕಾಗಳು ಹೂ ಗುಚ್ಚ ನೀಡಿ ಸ್ವಾಗತಿಸಿದರು. ಈ ಸಂಧರ್ಭದಲ್ಲಿ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಸ್ವಾಗತ ಸಮಿತಿ ಅಧ್ಯಕ್ಷರಾದ ಶರೀಫ್ ಕಾವು, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ, ಕ್ರಿಸ್ಟಲ್ ಜುಬಿಲಿ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ, ಸುಲೈಮಾನ್ ಮೌಲವಿ ಕಲ್ಲೇಗ, ಬರ ದುಬೈ ಸಮಿತಿ ನೇತಾರರಾದ ಅಶ್ರಫ್ ಅರ್ತಿಕೆರೆ, ಅಝೀಝ್ ಸೊರಕೆ ಮೊದಲಾದವರು ಉಪಸ್ಥಿತರಿದ್ದು ಪ್ರೀತಿ ಪೂರ್ವಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಡಿಸೆಂಬರ್ 11 ರಂದು ಸಂಜೆ 4.30 ರಿಂದ ಪ್ರಾರಂಭಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಅತ್ತಿಪಟ್ಟ ಉಸ್ತಾದ್ ಎಂದೇ ಚಿರಪರಿಚಿತರು, ಸೂಫೀವರ್ಯರು ಪ್ರಮುಖ ಪಂಡಿತ ಶ್ರೇಷ್ಟರು ಆದ ಅತ್ತಿಪಟ್ಟ ಮೊಹಿಯುದ್ದೀನ್ ಕುಟ್ಟಿ ಮುಸ್ಲಿಯಾರ್ ರವರು ನೇತೃತ್ವ ನೀಡಲಿದ್ದು, ಯುಎಇ ಸೌದಿ ಅರೇಬಿಯಾ ಖತಾರ್ ಕುವೈಟ್ ಮೊದಲಾದ ಅರಬ್ ರಾಷ್ಟ್ರಗಳ ಉದ್ಯಮಿಗಳು, ಸಾಮಾಜಿಕ ದಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಗೈದ ನೇತಾರರು, ಕೆಐಸಿ ಹಿತೈಷಿಗಳು ಉಪಸ್ಥಿತರಿರಲಿದ್ದಾರೆ. ಸುಮಾರು ಒಂದು ಸಾವಿಕ್ಕಿಂತಲೂ ಅಧಿಕ ಕೆಐಸಿ ಹಿತೈಷಿ ವರ್ಗ ಪಾಲ್ಗೊಳ್ಳುವ ನಿರೀಕ್ಷೆಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದ್ದರಿಂದ ಅನಿವಾಸಿ ಕೆಐಸಿ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸ್ವಾಗತ ಸಮಿತಿ ಅಧ್ಯಕ್ಷರಾದ ಶರೀಫ್ ಕಾವು ಹಾಗೂ ಕೆಐಸಿ ಕೇಂದ್ರ ಸಮಿತಿ ಅದ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ರವರು ವಿನಂತಿಸಿಕೊಂಡಿರುತ್ತಾರೆ .