News Kannada
Sunday, October 01 2023
ಯುಎಇ

ಯುಎಇ: ದುಬೈ ಗಡಿನಾಡು ಉತ್ಸವ  ಸಮಿತಿಗೆ ಪದಾಧಿಕಾರಿಗಳ ಆಯ್ಕೆ

Borderland Festival Committee elects office bearers
Photo Credit : By Author

ಯುಎಇ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಕೇರಳ ಘಟಕ (ಕಾಸರಗೋಡು) ಮತ್ತು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.) ಕಾಸರಗೋಡು ಇದರ ಯುಎಇ ಘಟಕಗಳ ಸಂಯೋಜನೆಯಲ್ಲಿ ಗಲ್ಫ್  ದುಬೈಯಲ್ಲಿ ಇದೇ ಬರುವ ನ.೨೦ರ ಭಾನುವಾರ  ಜರಗಲಿರುವ ದುಬೈ ಗಡಿನಾಡು ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಕಳೆದ ಆದಿತ್ಯವಾರ ದುಬಾಯಿ ಅಲ್ಲಿನ ಕೆಎಂಸಿಸಿ ಸಭಾಗೃಹದಲ್ಲಿ ನಡೆಸಲ್ಪಟ್ಟಿತು.

ಜಾನಪದ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ, ಕೋಶಾಧಿಕಾರಿ ಝೆಡ್.ಎ ಕಯ್ಯಾರ್ ಉಪಸ್ಥಿತರಿದ್ದು ಮಾಹಿತಿಪತ್ರ ಬಿಡುಗಡೆ ಗೊಳಿಸಿದರು.

೨೦೧೯ರ ಮಾರ್ಚ್ ನಲ್ಲಿ ನಡೆಸಲುದ್ದೇಶಿಸಿ ಕೊರೋನಾ ನಿಮಿತ್ತ ಮುಂದೂಡಿಸಲ್ಪಟ್ಟ  ಗಡಿನಾಡು ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು ಗೌರವಾಧ್ಯಕ್ಷ ಆಗಿ ಅಮರದೀಪ ಕಲ್ಲೂರಾಯ, ಅಧ್ಯಕ್ಷ ಆಗಿ ನ್ಯಾಯವಾದಿ ಇಬ್ರಾಹಿಂ ಕಲೀಲ್ ಅರಿಮಲ, ಪ್ರಧಾನ ಸಂಚಾಲಕರಾಗಿ ಸದನ್ ದಾಸ್, ಸಂಯೋಜಕರಾಗಿ ಇಬ್ರಾಹಿಂ ಬೆರಿಕೆ, ಉಪಾಧ್ಯಕ್ಷರುಗಳಾಗಿ ಅಶ್ರಫ್ ಕ್ಲಾಸಿಕ್, ಪ್ರಧಾನ ಕಾರ್ಯದರ್ಶಿ ಮುನೀರ್ ಕುಬಣೂರು, ಜಾಯ್ ಡಿಸೋಜಾ ಕಯ್ಯಾರ್, ಅಶ್ರಫ್ ಪಾವೂರು, ಮಂಜುನಾಥ್ ಕಾಸರಗೋಡು, ಅನೀಶ್ ಶೆಟ್ಟಿ, ಅಮಾನುಲ್ಲಾ ಮೀಂಜ, ಅಜೀಜ್ ಸಾಗ್, ಅಶ್ರಫ್ ಪಿ.ಪಿ ಬಾಯಾರ್ ಆಯ್ಕೆ ಮಾಡಲಾಗಿದೆ. ಸಹ ಸಂಚಾಲಕರಾಗಿ ಕಾರ್ತಿಕ್ ವಾಮನ್ ರಾವ್, ಯೂಸುಫ್ ಶೇಣಿ, ಸಿದ್ದಿಕ್ ಕ್ಲಾಸಿಕ್, ಆಶಿಕ್ ಮಿಯಾ, ಮಧು, ಶಾಕಿರ್ ಬಾಯಾರ್, ಕೋಶಾಧಿಕಾರಿ ಇಬ್ರಾಹಿಂ ಬಾಜೂರಿ, ಸಾಂಸ್ಕöÈತಿಕ ಸಮಿತಿ ಸಂಚಾಲಕರಾಗಿ ರಾಮಚಂದ್ರ ಬೆದ್ರಡ್ಕ, ಮಾಧ್ಯಮ ಸಂಯೋಜಕರಾಗಿ ಮುನೀರ್ ಬೇರಿಕೆ ಮತ್ತು ಝುಬೈರ್ ಕುಬಣೂರು ಆಯ್ಕೆಯಾಗಿದ್ದಾರೆ.

See also  ಮಂಗಳೂರು: ಸಹ್ಯಾದ್ರಿಯಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು