News Kannada
Thursday, September 28 2023
ಹೊರನಾಡ ಕನ್ನಡಿಗರು

ಸಿಡ್ನಿಯಲ್ಲಿ ಶ್ರೀವೆಂಕಟಕೃಷ್ಣ ಮಂದಿರಕ್ಕೆ ಭೂಮಿಪೂಜೆ

Bhoomi pujan for Sri Venkatakrishna Temple in Sydney
Photo Credit : News Kannada

ಉಡುಪಿ: ವಿಶ್ವಾದ್ಯಂತ ಶ್ರೀಕೃಷ್ಣ ಭಕ್ತಿ ಪ್ರಚಾರ ಮಾಡುತ್ತಿರುವ ಮತ್ತು ಅಲ್ಲಲ್ಲಿ ಶ್ರೀಕೃಷ್ಣ ಮಂದಿರವನ್ನು ಸ್ಥಾಪಿಸಿರುವ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ ಆಸ್ಟ್ರೇಲಿಯಾದ ಸಿಡ್ನಿ ಮಹಾನಗರದಲ್ಲಿ ಬೃಹತ್ ಶ್ರೀಕೃಷ್ಣಮುಖ್ಯಪ್ರಾಣ ಮತ್ತು ಗುರುರಾಯಯರ ಮಂದಿರವನ್ನು ನಿರ್ಮಿಸಲು ಸಂಕಲ್ಪಿಸಲಾಗಿದ್ದು, ಅದರ ಭೂಮಿಪೂಜೆಯನ್ನು ನಡೆಸಲಾಯಿತು.

ಶ್ರೀರಾಮಕೃಷ್ಣ ಅಂಕಿತವಾದ ಇಟ್ಟಿಗೆಗಳಿಗೆ ಭಕ್ತರು ಶ್ರೀರಾಘವೇಂದ್ರ ನಾಮ ಜಪ ಮಾಡುತ್ತ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಸ್ಥಳದಲ್ಲಿ ಭೂವರಾಹ ಹೋಮವನ್ನು ಶ್ರೀಮಠದ ನಿತೀಶಾಚಾರ್ಯ ಮತ್ತು ಶ್ರೀನಿವಾಸಾಚಾರ್ಯ ನೆರವೇರಿಸಿದರು.

ಬೆಂಗಳೂರು ಮಹಾನಗರದಲ್ಲಿ ತಮ್ಮ ಸುವರ್ಣ ಚಾತುರ್ಮಾಸ್ಯ ದೀಕ್ಷೆಯಲ್ಲಿರುವ ಪುತ್ತಿಗೆ ಶ್ರೀಪಾದರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕಳುಹಿಸಿದ ಪವಿತ್ರ ಪ್ರಸಾದವನ್ನು ಭೂಮಿಪೂಜೆಯಲ್ಲಿ ಇರಿಸಲಾಯಿತು.

ಮಠದ ಮುಖ್ಯಕಾರ್ಯದರ್ಶಿ ಪ್ರಸನ್ನಾಚಾರ್ಯ ಸ್ವಾಗತಿಸಿದರು. ಜಗನಮೋಹನ್ ಕೆ. ವಂದಿಸಿದರು. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

See also  ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್, ಆನ್‌ಲೈನ್ ಕ್ವಿಝ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು