News Kannada
Thursday, March 23 2023

ಯುಎಇ

ಏ.23 ಕ್ಕೆ ದುಬೈಯಲ್ಲಿ ಕೆಐಸಿ ಗ್ರಾಂಡ್ ಇಫ್ತಾರ್ ಆಮಂತ್ರಣ ಪತ್ರಿಕೆ ಅನಾವರಣ

Photo Credit : News Kannada

ದುಬೈ :  ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೆಐಸಿ ಕುಂಬ್ರ , ಸಂಸ್ಥೆಯ ಪ್ರಚಾರಾರ್ಥ ಯುಎಇಯಲ್ಲಿ ನಡೆಸಿಕೊಂಡು ಬರುವ ಗ್ರಾಂಡ್ ಇಫ್ತಾರ್  ಕಾರ್ಯಕ್ರಮವನ್ನು ಏಪ್ರಿಲ್ 23 ರ ಶನಿವಾರದಂದು ಆಪಲ್ ಇಂಟರ್ನ್ಯಾಷನಲ್ ಸ್ಕೂಲ್ ಕುಸೈಸ್ ನಲ್ಲಿ ನಡೆಸಲಾಗುವುದೆಂದು ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ರವರು ತಿಳಿಸಿದರು.

ಪ್ರಸಕ್ತ ಕಾರ್ಯಕ್ರಮದ ಆಮಂತ್ರ ಪತ್ರಿಕೆಯನ್ನು ಗ್ರಾಂಡ್ ಇಫ್ತಾರ್ ಕಾರ್ಯಕ್ರಮದ ಚೇರ್ಮನ್ ಅಶ್ರಫ್ ಷಾ ಮಾಂತೂರ್ ರವರು ಉದ್ಯಮಿಗಳು ಕೆ ಐಸಿ ಹಿತೈಷಿಯು ಆದ ಯೂಸೂಫ್ ಹಾಜಿ ಬೇರಿಕೆ ರವರಿಗೆ ಹಸ್ತಾಂತರಿಸುವ ಮೂಲಕ ಅನಾವರಣ ಗೊಳಿಸಲಾಯಿತು.

ಈ ಸಂಧರ್ಭದಲ್ಲಿ ಕಾರ್ಯಕ್ರಮದ ಕುರಿತು ವಿವರಣೆ ನೀಡಿದ ಅಶ್ರಫ್ ಷಾ ಮಾಂತೂರ್ ರವರು , ಕಳೆದ ಎರಡು ವರ್ಷಗಳಲ್ಲಿ ಕೋರೋಣ ರೋಗದ ಕಾರಣ ದುಬೈ ಸರಕಾರದ ನಿಯಮಾನುಸಾರ ಯಾವುದೇ ಸಭೆ ಸಮಾರಂಭಗಳು ನಡೆಸಲು ಅಸಾಧ್ಯವಾಗಿದ್ದು , ಇದೀಗ ನಾವು ಇಫ್ತಾರ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಏ. 23 ರ ಶನಿವಾರ ಸಂಜೆ 4.30 ಗಂಟೆಯಿಂದ ಕಾರ್ಯಕ್ರಮವು ಆಧ್ಯಾತ್ಮಿಕ ಅಸ್ಮಾ ಉಲ್ ಹುಸ್ನಾ ಮಜ್ಲಿಸ್ ನೊಂದಿಗೆ  ಪ್ರಾರಂಭಗೊಳ್ಳಲಿದ್ದು , ವಿವಿಧ ಕ್ಷೇತ್ರಗಳ ಗಣ್ಯರು , ಅನಿವಾಸಿ ಉದ್ಯಮಿಗಳು , ಉಲಮಾ ಉಮರಾ ನೇತಾರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೆಗ ಇಫ್ತಾರ್ ವ್ಯವಸ್ಥೆ ಇದ್ದು , ಅನಿವಾಸಿ ದೀನೀ ಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಕೆಐಸಿ ಕೇಂದ್ರ ಸಮಿತಿ ಗೌರವಾಧ್ಯಕ್ಷರೂ, ದಾರುಸ್ಸಲಾಮ್ ಬೆಳ್ತಂಗಡಿ ಯು ಎ ಇ  ಸಮಿತಿ ಅಧ್ಯಕ್ಷರಾದ ಸಯ್ಯದ್ ಆಸ್ಕರ್ ಅಲಿ ತಂಙಲ್  ಕೋಲ್ಪೆ , ಕೆ ಐ ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಷರೀಫ್ ಕೊಡಿನೀರ್ , ಕೆ ಐ ಸಿ ಹಿತೈಷಿ ಶಂಸುದ್ದೀನ್ ಸೂರಲ್ಪಾಡಿ , ದಾರುನ್ನೂರ್ ಕಾಶಿಪಟ್ನ ಯು ಎ ಇ ಸಮಿತಿ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ , ನೂರುಲ್ ಹುದಾ ಮಾಡನ್ನೂರ್ ಯು ಎ ಇ ಸಮಿತಿ ಅಧ್ಯಕ್ಷರಾದ ಷರೀಫ್ ಕಾವು, ಶಂಸುಲ್ ಉಲಮಾ ತೋಡಾರ್ ಯು ಎ ಇ ಸಮಿತಿ ಅಧ್ಯಕ್ಷರಾದ ಸಲೀಂ ಮೂಡಬಿದ್ರಿ, ಇಸಾಕ್ ಹಾಜಿ ತೋಡಾರ್ , ಲತೀಫ್ ಮದರ್ ಇಂಡಿಯಾ, ಅಬ್ದುಲ್ ಖಾದರ್ ಬೈತಡ್ಕ, ಅಬ್ದುಲ್ ಸಲಾಂ ಬಪ್ಪಳಿಗೆ,   ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯು ಎ ಇ ಪ್ರಧಾನ ಕಾರ್ಯದರ್ಶಿ  ಸುಲೈಮಾನ್ ಮೌಲವಿ ಕಲ್ಲೇಗ , ಲತೀಫ್ ಕೌಡಿಚ್ಚಾರ್ ,ಕೆ ಐ ಸಿ ದುಬೈ ಸಮಿತಿ ಅಧ್ಯಕ್ಷರಾದ  ಅಶ್ರಫ್ ಅರ್ತಿಕೆರೆ, ಎಸ್ ಕೆ ಎಸ್ ಎಸ್ ಎಫ್ ವಿಖಾಯ  ಕರ್ನಾಟಕ ಯು ಎ ಇ ಚೇರ್ಮನ್ ನವಾಝ್ ಬಿ ಸಿ ರೋಡ್ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನೂರ್ ಮುಹಮ್ಮದ್ ನೀರ್ಕಜೆ  ಸ್ವಾಗತಿಸಿ,  ಗ್ರಾಂಡ್ ಇಫ್ತಾರ್ ಕಾರ್ಯದರ್ಶಿ ಅಸೀಫ್ ಮರೀಲ್ ವಂದಿಸಿದರು.

See also  ಜಾಗತಿಕ ಲಿಂಗಾಯುತ ಮಹಾಸಭಾ ಸಾಗರೋತ್ತರ ಘಟಕದಿಂದ 889ನೇ ಬಸವ ಜಯಂತಿ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು