ಶಿವಮೊಗ್ಗ: ರೌಡಿ ಶೀಟರ್ ಒಬ್ಬನನ್ನು ಭಾನುವಾರ ಮಧ್ಯಾಹ್ನ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಹೊರವಲಯದ ಸೂಳೆಬೈಲಿನಲ್ಲಿ ನಡೆದಿದೆ.
ರೌಡಿ ಶೀಟರ್ ಅಬೀದ್ ಕೊಲೆಯಾದ ವ್ಯಕ್ತಿ. ಹಲವು ಅಪರಾಧಗಳಲ್ಲಿ ಶರೋಪಿಯಾಗಿದ್ದ ಅಬೀದ್ ಹಲವರ ಜತೆ ದ್ವೇಷವನ್ನು ಕಟ್ಟಿಕೊಂಡಿದ್ದ ಎನ್ನಲಾಗಿದೆ.
ಭಾನುವಾರ ಈತನನ್ನು ಫಾಲೋ ಮಾಡಿದ ತಂಡ ಆಟದ ಮೈದಾನದ ಬಳಿ ಅಡ್ಡಗಟ್ಟಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆತನ ಎದೆ, ಹೊಟ್ಟೆ, ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಈ ಸಂಬಂಧ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಲ್ಲೆ ಮಾಡಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.