ಚಿಕ್ಕಮಗಳೂರು: ರಾಜ್ಯದ ಎರಡೇ ಜಿಲ್ಲೆಗಳಲ್ಲಿದ್ದ ಮಂಗನ ಕಾಯಿಲೆ ಇದೀಗ ಚಿಕ್ಕಮಗಳೂರಿಗೂ ಕಾಲಿಟ್ಟಿದ್ಯಾ ಎಂಬ ಅನುಮಾನ ಹುಟ್ಟಿದೆ. ಯಾಕಂದ್ರೆ, ಕಾಫಿನಾಡಿನ ಗಿರಿಭಾಗದ ತೋಟಗಳಲ್ಲಿ ಅಲ್ಲಲ್ಲೆ ಇಂಡು-ಇಂಡಾಗಿ ಮಂಗಗಳು ಸಾವನ್ನಪ್ಪಿದ್ದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ.
ಕಾಫಿತೋಟದ ಲೈನ್ಗಳಲ್ಲಿ ಕೆಲಸ ಮಾಡೋ ಕೂಲಿ ಕಾರ್ಮಿಕರು ಕೂಡ ಕಳೆದೊಂದು ವಾರದಿಂದ ಮೈ-ಕೈನೋವು, ಜ್ವರ, ತಲೆನೋವಿನಿಂದ ಬಳಲುತ್ತಿದ್ದು, ಇದು ಮಂಗನ ಕಾಯಿಲೆಯ ಮುನ್ಸೂಚನೆಯಾ ಎಂದು ಗ್ರಾಮೀಣ ಭಾಗದ ಜನ ಆತಂಕಕ್ಕೀಡಾಗಿದ್ದಾರೆ.ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ. ಹೌದು ಮಂಗನ ಕಾಯಿಲೆ ಶಿವಮೊಗ್ಗದ ತೀರ್ಥಹಳ್ಳಿ, ಬೆಳಗಾವಿಯ ಖಾನಾಪುರದಲ್ಲಷ್ಟೆ ಕಂಡು ಬಂದಿತ್ತು. ಆದ್ರೀಗ, ಈ ಮಾರಣಾಂತಿಕ ಕಾಯಿಲೆ ಚಿಕ್ಕಮಗಳೂರಿಗೂ ಕಾಲಿಟ್ಟಿರೋ ಲಕ್ಷಣಗಳು ಬಲವಾಗಿವೆ. ಯಾಕಂದ್ರೆ, ತಾಲೂಕಿನ ದಾಸರಹಳ್ಳಿ ಬಳಿಯ ಬೈನೇಕೂಲ್ ಎಸ್ಟೇಟ್, ಮುಳ್ಳಯ್ಯನಗಿರಿ ಸಮೀಪದ ಕಾಫಿತೋಟ ಹಾಗೂ ಗಿರಿಭಾಗದ ತೋಟಗಳಲ್ಲಿ ಅಲ್ಲಲ್ಲೇ ಮಂಗಗಳ ಇಂಡು ಸಾವನ್ನಪ್ಪಿವೆ. ಇದ್ರಿಂದ ಗಿರಿಭಾಗದ ಜನ ಭಯಗೊಂಡಿದ್ದಾರೆ. ಸಾಮಾನ್ಯವಾಗಿ ಮಂಗನ ಕಾಯಿಲೆ ಬೇಸಿಗೆಯಲ್ಲಿ ಹರಡುತ್ತದೆ. ಮಂಗಗಳು ಇದ್ದಕ್ಕಿದ್ದಂತೆ ಸಾಯುತ್ವೆ. ಇದರ ವೈರಾಣುಗಳು ಮನುಷ್ಯನಿಗೂ ಹರಡಿ ಮನುಷ್ಯ ತಲೆನೋವು, ಕೆಮ್ಮು, ಜ್ವರದಿಂದ ಬಳಲಿ ಸಾಯಲೂಬಹುದು. ರಾಜ್ಯಾದ್ಯಂತ ಎದುರಾಗಿರೋ ಭೀಕರ ಬರದಿಂದ ಮಂಗಗಳು ಇದ್ದಕ್ಕಿದ್ದಂತೆ ಸಾಯ್ತಿದ್ದು, ಇದು ಮಂಗನ ಕಾಯಿಲೆಯ ಮುನ್ಸೂಚನೆಯ ಎಂದು ಚಿಕ್ಕಮಗಳೂರಿನ ಗಿರಿಭಾಗದ ಜನ ಆತಂಕದಲ್ಲಿ ಬದುಕುವಂತಾಗಿದೆ.
ಈಗಾಗ್ಲೇ ಕಾಫಿತೋಟದ ಲೈನ್ಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಕಳೆದೊಂದು ವಾರದಿಂದಲೂ ತಲೆನೋವು, ಜ್ವರ, ಕೆಮ್ಮಿನಿಂದ ಬಳಲ್ತಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಳೆ ಇಲ್ಲದೆ ಕಾಫಿಯೂ ಸಂಪೂರ್ಣ ನಾಶವಾಗಿದ್ದು, ಮಂಗಗಳು ಸತ್ತು ಕರಗಿದ ಮೇಲೆ ವಾಸನೆಯ ಮೂಲಕವಷ್ಟೆ ಸಾವಿನ ಸ್ಪಷ್ಟತೆ ಸಿಗ್ತಿದೆ. ಆದ್ರೆ, ಸ್ಥಳಕ್ಕೆ ಬಂದ ವೈದ್ಯರು, ಮಂಗಗಳ ಮೈಮೇಲಿನ ಕೂದಲು ಉದುರಿಲ್ಲ. ದೇಹದ ಮೇಲೆ ಯಾವುದೇ ಟಿಕ್ಸ್ಗಳಿಲ್ಲ. ಆದ್ರೆ, ಲೈನ್ನಲ್ಲಿ ವಾಸ ಮಾಡೋ ಜನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂತಹ ಸೂಚನೆಗಳಿದ್ರೆ, ಅವರ ರಕ್ತದ ಸ್ಯಾಂಪಲ್ಗಳನ್ನ ಲ್ಯಾಬ್ಗೆ ಕಳುಹಿಸಿ, ರಿಪೋರ್ಟ್ ಬಂದ ಮೇಲೆ ಸೂಕ್ತ ಕ್ರಮಕೈಗೊಳ್ಳೋದಾಗಿ ಹೇಳ್ತಾರೆ.
ಒಟ್ಟಾರೆಯಾಗಿ ಕಾಫಿನಾಡಿನ ಇತಿಹಾಸದಲ್ಲಿ ಇಲ್ಲಿನ ಜನ ಮಂಗನ ಕಾಯಿಲೆ ಹೆಸರನ್ನೇ ಕೇಳಿರಲಿಲ್ಲ. ಆದ್ರೆ, ಭೀಕರ ಬರಗಾಲಕ್ಕೆ ತುತ್ತಾಗಿರೋ ಕಾಫಿನಾಡಿಗೆ ಈ ಕಾಯಿಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಲ್ಲಿನ ಪರಿಸ್ಥಿತಿ, ವೈದ್ಯರ ಹೇಳಿಕೆ ಗಮನಿಸಿದ್ರೆ ಇದು ನಿಜಕ್ಕೂ ಮಂಗನ ಕಾಯಿಲೆಯಾ ಅನ್ಸತ್ತೆ. ಹೊಟ್ಟೆಪಾಡಿಗಾಗಿ ಎಲ್ಲಿಂದಲೋ ಬಂದು ಬದುಕು ಕಂಡುಕೊಂಡಿರೋರೆ ಹೆಚ್ಚಿದ್ದಾರೆ. ಇದು ಮಂಗನ ಕಾಯಿಲೆ ಆಗದಿದ್ರೆ ಸಾಕೆಂಬುದು ಕಾಫಿನಾಡಿಗರ ಹೆಬ್ಬಯಕೆ ಆಗಿದೆ.