News Kannada
Friday, March 31 2023

ಕರ್ನಾಟಕ

ಅಪಾಯ ಆಹ್ವಾನಿಸುವ ಸೇತುವೆ!

Photo Credit :

ಅಪಾಯ ಆಹ್ವಾನಿಸುವ ಸೇತುವೆ!

ಯಳಂದೂರು: ಸೇತುವೆ ಎಂದ ಮೇಲೆ ಅದರ ಎರಡು ಬದಿಯಲ್ಲೂ ತಡೆಗೋಡೆ ಇದ್ದೇ ಇರುತ್ತದೆ. ಆದರೆ ಯಳಂದೂರು ತಾಲೂಕಿನ ಚಂಗಚಹಳ್ಳಿಯಿಂದ ಗೂಳಿಪುರ ಗ್ರಾಮಕ್ಕೆ ಹಾದು ಹೋಗುವ ಮುಖ್ಯರಸ್ತೆಯಲ್ಲಿರುವ ಕಬಿನಿ ಸೇತುವೆಗೆ ತಡೆಗೋಡೆಗಳಿಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಈ ರಸ್ತೆಯಲ್ಲಿ ಪ್ರತಿ ದಿನವೂ ನೂರಾರು ವಾಹನಗಳು ಓಡಾಡುತ್ತಿದ್ದು, ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದಲ್ಲ. ಸೇತುವೆ ನಿರ್ಮಾಣ ಮಾಡುವ ಸಂದರ್ಭ ತಡೆಗೋಡೆ ನಿರ್ಮಾಣ ಮಾಡಲಾಗಿತ್ತಾದರೂ ತದ ನಂತರದ ವರ್ಷಗಳಲ್ಲಿ ತಡೆಗೋಡೆ ಶಿಥಿಲಗೊಂಡು ನೆಲಕ್ಕುರುಳಿದೆ. ಆದರೆ ಅದನ್ನು ದುರಸ್ತಿ ಮಾಡುವ ಕೆಲಸಕ್ಕೆ ಯಾರೂ ಮುಂದಾಗದ ಕಾರಣದಿಂದ ದುಸ್ಥಿತಿಯಲ್ಲಿದೆ.

ಸೇತುವೆಗೆ ತಡೆಗೋಡೆಯಿಲ್ಲದ ಕಾರಣದಿಂದ ಸೇತುವೆ ಬಳಿ ತೆರಳುವಾಗ ಭಯವಾಗುತ್ತದೆ. ಅಷ್ಟೇ ಅಲ್ಲ ಹೊರಗಿನಿಂದ ಬರುವ ಚಾಲಕರಿಗೆ ಸೇತುವೆ ಇದೆ ಎಂಬುವುದೇ ಗೊತ್ತಾಗುವುದಿಲ್ಲ. ಹೀಗಾಗಿ ಒಂದುವೇಳೆ ಎಚ್ಚರ ತಪ್ಪಿ ಬದಿಗೆ ತೆರಳಿದರೆ ಅಪಾಯ ತಪ್ಪಿದಲ್ಲ.

ಬೇಸಿಗೆಯ ಸಂದರ್ಭ ನೀರು ಬತ್ತಿಹೋಗಿದ್ದು, ಮಳೆಗಾಲದಲ್ಲಿ ಈ ನಾಲೆಯಲ್ಲಿ ಕಬಿನಿ ನೀರು ಹರಿಯುವುದರಿಂದ ಭಯದಲ್ಲೇ ವಾಹನ ಚಾಲಕರು ಚಾಲನೆ ಮಾಡಬೇಕಾಗಿದೆ. ಬೇಸಿಗೆಯಾಗಿರುವುದರಿಂದ ಈಗಲೇ ತಡೆಗೋಡೆಯನ್ನು ಸಂಬಂಧಿಸಿದ ಕಾವೇರಿ ನೀರಾವರಿ ನಿಗಮ ನಿರ್ಮಿಸಿದರೆ ಅನುಕೂಲವಾಗಬಹುದೇನೋ? ಆದರೆ ಆ ಬಗ್ಗೆ ತಲೆಕೆಡಿಸಿಕೊಂಡಂತೆ ಕಂಡು ಬರುತ್ತಿಲ್ಲ. ಅಷ್ಟೇ ಅಲ್ಲದೆ ಆ ವ್ಯಾಪ್ತಿ ಜನಪ್ರತಿನಿಧಿಗಳು ಕೂಡ  ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಹೀಗಾಗಿ ಹಲವರು ಬಿದ್ದು ಗಾಯಗೊಂಡಿದ್ದಾರೆ.

ಇನ್ನಾದರೂ ಇದರತ್ತ ಗಮನಹರಿಸಿ ಸೇತುವೆಗೆ ತಡೆಗೋಡೆಯನ್ನು ಸಂಬಂಧಿಸಿದವರು ನಿರ್ಮಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

See also  ಸಮುದ್ರಕ್ಕೆ ಹಾರಿದ್ದ ಕಾಸರಗೋಡಿನ ಆರೋಪಿಯ ಶವ ಉಡುಪಿಯಲ್ಲಿ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು