News Kannada
Thursday, March 30 2023

ಕರ್ನಾಟಕ

ದತ್ತಾಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು: ಹಿಂದೂಪರ ಸಂಘಟನೆಗಳ ಒತ್ತಾಯ

Photo Credit :

ದತ್ತಾಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು: ಹಿಂದೂಪರ ಸಂಘಟನೆಗಳ ಒತ್ತಾಯ

ಮೂಡಿಗೆರೆ: ದತ್ತಪೀಠವು ಹಿಂದೂಗಳಿಗೆ ಸೇರಿದ್ದೆಂದು ಎಲ್ಲಾ ನ್ಯಾಯಾಲಗಳು ವಿವಾಧತೀತವಾಗಿ ಒಪ್ಪಿಕೊಂಡಿದೆ. ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರಕ್ಕೆ ಸೂಚಿಸಿದ್ದು, ಈ ಹಿಂದೆ ಅಲ್ಲಿಂದ ಕಾಣೆಯಾಗಿರುವ ಹಿಂದೂ ದೇವರಗಳ ಪ್ರತಿಮೆ, ಪಾದುಕೆಗಳನ್ನು ಪುನರ್ ಸ್ಥಾಪಿಸಬೇಕು. ಗೋರಿಗಳ ತೆರವುಗೊಳಿಸಿ ಹಿಂದೂ ಅರ್ಚಕರ ನೇಮಕ ಮಾಡುವಂತೆ ವಿಎಚ್‍ಪಿ ಮತ್ತು ಭಜರಂಗದಳ ಮುಖಂಡರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಎಚ್‍ಪಿ ತಾಲೂಕು ಅಧ್ಯಕ್ಷ ಭರತ್ ಕನ್ನಹಳ್ಳಿ ಮಾತನಾಡಿ, ದತ್ತಾತ್ರೆಯ ಪೀಠ ಜಾಗರ ಹೋಬಳಿಯ ಇನಾಂ ದತ್ತಾತ್ರೆಯ ಪೀಠ ಗ್ರಾಮದ ಸ.ನಂ. 95, 96 ರಲ್ಲಿ ಹಿಂದೂಗಳ ದೇವಸ್ಥಾನಗಳಿದ್ದು, ಸಾವಿರಾರು ವರ್ಷಗಳಿಂದ ಹಿಂದೂಗಳು ಪೂಜಿಸುತ್ತಾ ಬಂದಿದ್ದು, ಮಹಾಮದೀಯರ ಆಕ್ರಮಣಕ್ಕೆ ತುತ್ತಾಗಿ ಹಿಂದೂಗಳಿಂದ ಬಲವಂತವಾಗಿ ಕಿತ್ತುಕೊಂಡು ಅಲ್ಲಿ ಇಸ್ಲಾಂ ವಿವಾಧಿತ ಸ್ಥಳವನ್ನಾಗಿಸುವ ಹುನ್ನಾರ ನಡೆದಿತ್ತು.

ವಾಸ್ತವವಾಗಿ ಶ್ರೀ ಬಾಬಾಬುಡನ್ ಸ್ವಾಮಿ ದರ್ಗವು ಇದೇ ಗ್ರಾಮದ ನಾಗೇನಹಳ್ಳಿ ಸ.ನಂ.57ರಲ್ಲಿದೆ. ದತ್ತಪೀಠದ ವಿರೋಧಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜಿಲ್ಲಾ ನ್ಯಾಯಾಲಯದಿಂದ ಭಾರತದ ಉಚ್ಚ ನ್ಯಾಯಾಲಯದವರೆಗೆ ದಾವೆಗಳನ್ನು ಹೋಡಿದ್ದು, ಇದನ್ನು ಪರಿಶೀಲಿಸಿದ ಉಚ್ಚ ನ್ಯಾಯಾಲಯವು ಎಲ್ಲಾ ದಾವೆಗಳನ್ನು ವಜಾಗೊಳಿಸಿ ದತ್ತಪೀಠ ಹಿಂದೂಗಳದ್ದೆ. ಇದನ್ನು ರಾಜ್ಯ ಸರಕಾರ ಇತ್ಯರ್ಥಗೊಳಿಸಬೇಕೆಂದು ಆದೇಶ ನೀಡಿದ್ದರೂ ರಾಜ್ಯ ಸರಕಾರ ಇಲ್ಲಿಯವರೆಗೂ ಮೌನ ವಹಿಸಿದೆ. ಇದರಿಂದ ಹಿಂದೂಗಳನ್ನು ಕೆರಳಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರವಿದು ಎಂದು ದೂರಿದರು.

 

See also  ಇಂದು ಬೆಳಗಾವಿಯಲ್ಲಿ ಅಮಿತ್‌ ಶಾ ವೈಮಾನಿಕ ಸಮೀಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು