News Kannada
Thursday, March 23 2023

ಕರ್ನಾಟಕ

ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀಜಗನ್ನಾಥ ಸ್ವಾಮಿ ರಥೋತ್ಸವ

Photo Credit :

ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀಜಗನ್ನಾಥ ಸ್ವಾಮಿ ರಥೋತ್ಸವ

ಮಡಿಕೇರಿ: ನಗರದ ಇಸ್ಕಾನ್ ಶ್ರೀಜಗನ್ನಾಥ ಮಂದಿರದ ವತಿಯಿಂದ 10 ನೇ ವರ್ಷದ ಶ್ರೀಜಗನ್ನಾಥ ಸ್ವಾಮಿ ರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ನಗರದ ಪೇಟೆ ಶ್ರೀರಾಮಮಂದಿರ ದೇವಾಲಯದ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ವೃಂದಾವನದ ಇಸ್ಕಾನ್ ಸಮಿತಿಯ ಉಪಾಧ್ಯಕ್ಷರಾದ ಭಕ್ತಿ ಆಶ್ರಯ ವೈಷ್ಣವ ಮಹಾರಾಜ್ ಭಕ್ತಿಯ ಮೂಲಕ ಆತ್ಮಶಕ್ತಿಯನ್ನು ಗಳಿಸಬಹುದೆಂದು ಅಭಿಪ್ರಾಯಪಟ್ಟರು. ಜೀವನದಲ್ಲಿ ಭಕ್ತಿ ಪ್ರಧಾನವಾಗಿರಬೇಕೆಂದು ಸಲಹೆ ನೀಡಿದರು.

ಪತ್ರಿಕೋದ್ಯಮಿ ಜಿ.ರಾಜೇಂದ್ರ ಮಾತನಾಡಿ, ಧರ್ಮನಿಷ್ಠೆ ಮತ್ತು ಭಕ್ತಿ ನಿಷ್ಠೆಯಿಂದ ಮುಕ್ತಿ ಸಾಧ್ಯವೆಂದು ಅಭಿಪ್ರಾಯಪಟ್ಟರು. ಭಕ್ತಿಯ ಮೂಲಕ ಭಗವಂತನಿಗೆ ಶರಣಾಗತಿಯಾಗುವುದರಿಂದ ಶಾಂತಿ ಹಾಗೂ ಸಹನೆಯನ್ನು ಹೊಂದಬಹುದೆಂದು ತಿಳಿಸಿದರು.

ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್.ದೇವಯ್ಯ, ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಶಾರದಾ ಮಂದಪ್ಪ, ಮಡಿಕೇರಿಯ ಇಸ್ಕಾನ್ ಶ್ರೀಜಗನ್ನಾಥ ಮಂದಿರದ ಅಧ್ಯಕ್ಷರಾದ ಸುಧೀರ್ ಚೈತನ್ಯ ದಾಸ್, ಪ್ರಮುಖರಾದ ತ್ರಿವಿಕ್ರಮದಾಸ್, ರಾಜಣ್ಣ, ಶಿವರಾಂ, ನಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.

ಶ್ರೀಜಗನ್ನಾಥ ಸ್ವಾಮಿಯ ರಥಯಾತ್ರೆಯು ಪೇಟೆ ಶ್ರೀರಾಮಮಂದಿರದಿಂದ ಆರಂಭಗೊಂಡು ಗಣಪತಿ ಬೀದಿ, ಎ.ವಿ.ಶಾಲೆ, ಮಹದೇವಪೇಟೆ, ಬಸ್ ನಿಲ್ದಾಣ, ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಗಾಂಧಿ ಮೈದಾನವನ್ನು ತಲುಪಿತು. ಭಕ್ತರು ರಥವನ್ನು ಎಳೆದು ಕೃಷ್ಣನಾಮ ಸ್ಮರಣೆ ಮಾಡಿದರು.

ಗಾಂಧಿ ಮೈದಾನದಲ್ಲಿ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನ ಹಾಗೂ ಕಿರು ನಾಟಕ ಭಕ್ತ ಪ್ರಹ್ಲಾದ ಪ್ರದರ್ಶನಗೊಂಡಿತು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗವಾಯಿತು.

See also  ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಸುಮಲತಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು