News Kannada
Saturday, April 01 2023

ಕರ್ನಾಟಕ

ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ ಬಂಧನ

Photo Credit :

ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ ಬಂಧನ

ಸುಂಟಿಕೊಪ್ಪ: ಪಾನಮತ್ತನಾದ ವ್ಯಕ್ತಿಯೋರ್ವ ಪಟ್ಟಣದಲ್ಲಿ ಕೋವಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿಕೊಂಡು ಸಾರ್ವಜನಿಕರಲ್ಲಿ ಭಯದ ವಾತವರಣ ಸೃಷ್ಟಿಸಿದ ಘಟನೆ ನಡೆದಿದ್ದು, ಪೊಲೀಸರ ಸಮಯೋಚಿತ ಕರ್ತವ್ಯ ಪ್ರಜ್ಞೆಯಿಂದ ಆತನನ್ನು ಬಂಧಿಸಲಾಗಿದೆ.

ಇಲ್ಲಿನ ಪಟ್ಟಣದ ಹೃದಯ ಭಾಗದ ಮದ್ಯದಂಗಡಿ ಮುಂದೆ ಗುರುವಾರ ಮಧ್ಯರಾತ್ರಿ ರಾತ್ರಿ 9.30 ಗಂಟೆಗೆ ಅಂದಗೋವೆಯ ಚಿಕ್ಕಂಡ.ಎ.ವಸಂತ(34) ಎಂಬಾತ ಪಾನಮತ್ತನಾಗಿ ತನ್ನ ಸ್ವಾಧೀನದಲ್ಲಿದ್ದ ಜಮ್ಮಾ ಬೈರೇಸ್ನ ಡಬಲ್ ಬ್ಯಾರಲ್ ಕೋವಿಯಿಂದ ಗಾಳಿಯಲ್ಲಿ ಪೊಲೀಸರ ಮುಂದೆಯೇ ಒಂದು ಸುತ್ತು ಗುಂಡು ಹಾರಿಸಿದ್ದಾನೆ.

ಅಲ್ಲಿದ್ದ ಸಾರ್ವಜನಿಕರು ಆಟೋಚಾಲಕರು ಇದೇನೆಂದು ಭಯಭೀತರಾಗಿ ಎದ್ದು ಬಂದು ನೋಡಿದಾಗ ವಸಂತ ಪಾನಮತ್ತನಾಗಿ ಮತ್ತೆ ಗುಂಡು ಹಾರಿಸಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಭಯಗೊಂಡ ಅವರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಸುದ್ಧಿ ಮುಟ್ಟಿಸಿದ್ದು, ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ ಹಾಗೂ ಸಿಬ್ಭಂದಿ ಸ್ಥಳಕ್ಕೆ ಧಾವಿಸಿ ಬಂದು ಕೋವಿಯಿಂದ ಗುಂಡು ಹಾರಿಸಿ ಸಾರ್ವಜನಿಕರಿಗೆ ಭಯದ ಅತಂಕ ಸೃಷ್ಟಿಸಿದ ಆರೋಪಿ ವಸಂತನನ್ನು ವಶಕ್ಕೆ ಪಡೆದುಕೊಂಡು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

See also  ವಾಹನಗಳಿಂದ ಬ್ಯಾಟರಿ ಕದಿಯುತ್ತಿದ್ದವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು