News Kannada
Thursday, March 30 2023

ಕರ್ನಾಟಕ

ಬಾಬಾಬುಡಾನ್ ಗಿರಿ ವಿವಾದ ಬಗೆಹರಿಸಲು ಸಿಎಂಗೆ ವಿಎಚ್ಪಿ ಮನವಿ

Photo Credit :

ಬಾಬಾಬುಡಾನ್ ಗಿರಿ ವಿವಾದ ಬಗೆಹರಿಸಲು ಸಿಎಂಗೆ ವಿಎಚ್ಪಿ ಮನವಿ

ಚಿಕ್ಕಮಗಳೂರು: ದತ್ತಪೀಠವನ್ನು ಹಿಂದುಗಳ ಶ್ರದ್ಧಾ ಕೇಂದ್ರವನ್ನಾಗಿಸುವಲ್ಲಿ ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ಹಿಂದು ಪರ ಸಂಘಟನೆಗಳ ಪರವಾಗಿ ಜಿಲ್ಲಾ ವಿಎಚ್ಪಿ ನಿಯೋಗವು ಮುಖ್ಯಮಂತ್ರಿಗಳನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ವಿವಾದವನ್ನು ಕೂಡಲೇ ಪರಿಹರಿಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದೆ ಎಂದು ವಿಎಚ್ಪಿ ಪ್ರಧಾನ ಕಾರ್ಯದರ್ಶಿ ಯೋಗೇಶ್ ರಾಜ್ ಅರಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಾಬಾಬುಡನ್ ಗಿರಿ ಮತ್ತು ದತ್ತಪೀಠ ಕಂದಾಯ ಇಲಾಖೆ ದಾಖಲೆಯನ್ವಯ ಎರಡು ಬೇರೆ ಬೇರೆ ಪ್ರತ್ಯೇಕ ತಾಣಗಳು ಎಂಬುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಹಿಂದು ಧಾರ್ಮಿಕ ವಿಧಿ ವಿಧಾನಗಳನ್ನು ಸದರಿ ಪೀಠದಲ್ಲಿ ನಿರ್ವಹಿಸಲು ಹಿಂದೂ ಅರ್ಚಕರನ್ನು ನೇಮಿಸಬೇಕು. ಇಂತಹ ಹಲವು ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳಿಗೆ ನಿಯೋಗದಲ್ಲಿದ್ದ ಮುಖಂಡರು ಗೃಹ ಸಚಿವರು, ಕಾನೂನು ಸಚಿವರು, ಮುಜರಾಯಿ ಸಚಿವರಿಗೂ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ಚಿಕ್ಕಮಗಳೂರಿನ ಬಸವಕೇಂದ್ರದ ಜಯಬಸವಾನಂದ ಸ್ವಾಮೀಜಿ, ಶಂಕರದೇವರ ಮಠದ ಸ್ವಾಮೀಜಿ, ಎಳನಡು ಮಠದ ಜ್ಞಾನಪ್ರಭು ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ, ಭೇರಗಂಡಿ ಮಠದ ಸ್ವಾಮೀಜಿ ಶಾಸಕ ಸಿ.ಟಿ.ರವಿ, ಡಿ.ಎನ್.ಜೀವರಾಜ್ ವಿಎಚ್ಪಿ ಪ್ರಮುಖರಾದ ಜಿ.ಗೋಪಾಲ್, ಕೇಶವಹೆಗಡೆ, ಶಿವಶಂಕರ್, ಯೋಗೀಶ್ ರಾಜ್ ಅರಸ್, ಶ್ರೀಕಾಂತ್ ಪೈ, ವಕೀಲರಾದ ರವೀಂದ್ರ ಹಾಗೂ ಬಿಜೆಪಿ ಮುಖಂಡರಾದ ಮಧುಕುಮಾರ್ ರಾಜ್ ಅರಸ್ ಹಲವು ಗಣ್ಯರು ನಿಯೋಗದಲ್ಲಿದ್ದರು.

See also  ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಚಿವ ಗೋಪಾಲಯ್ಯ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು