News Kannada
Sunday, April 02 2023

ಕರ್ನಾಟಕ

ಬಾವಿಗೆ ಬಿದ್ದ ವ್ಯಕ್ತಿ ಬದುಕಿ ಬಂದ..

Photo Credit :

ಬಾವಿಗೆ ಬಿದ್ದ ವ್ಯಕ್ತಿ ಬದುಕಿ ಬಂದ..

ಮಾಗಡಿ : ಮದ್ಯದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಬಾವಿ ಕಟ್ಟೆಯಲ್ಲಿ ಕೂರುವ ಸಂದರ್ಭ ಆಯ ತಪ್ಪಿ ಪಾಳು ಬಾವಿಗೆ ಬಿದ್ದ ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರ ಸಹಕಾರದಿಂದ ಮೇಲೆತ್ತಲಾಗಿದ್ದು, ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಮಾಗಡಿ ಪಟ್ಟಣದ ವಾಸವಿ ಶಾಲಾ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ.  ರೆಡ್ಡಿಯಪ್ಪ(45)  ಎಂಬಾತನೇ ಬಾವಿಗೆ ಬಿದ್ದು ಬದುಕಿ ಬಂದವನು. ಈತ ಕಲ್ಯಾಗೇಟ್ ನ ಪುರಸಭೆ ಸದಸ್ಯ ಶಿವಕುಮಾರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಾಗಿದ್ದು, ಕುಡಿದ ಅಮಲಿನಲ್ಲಿದ್ದ ರೆಡ್ಡಿಯಪ್ಪ ಬುಧವಾರ ರಾತ್ರಿ 8.30ರ ಸಮಯದಲ್ಲಿ ಪಾಳು ಬಾವಿಯ ಕಟ್ಟೆ ಮೇಲೆ ಕುಳಿತ ಆತ ಆಯ ತಪ್ಪಿ ಬಾವಿಗೆ ಬಿದ್ದಿದ್ದಾನೆ.

ತಕ್ಷಣ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಆದರೆ ಅಗ್ನಿ ಶಾಮಕದಳ ತಡವಾಗಿ ಬಂದ ಕಾರಣ ಸ್ಥಳೀಯರೇ ಹಗ್ಗದ ಸಹಾಯದಿಂದ ರೆಡ್ಡಿಯಪ್ಪನನ್ನು ಮೇಲೆತ್ತಿದ್ದಾರೆ. ರೆಡ್ಡಿಯಪ್ಪನಿಗೆ ತಲೆಗೆ ತೀವ್ರ ಪೆಟ್ಟುಬಿದ್ದು ಸಾಕಷ್ಟು ರಕ್ತ ಸುರಿಯುತ್ತಿತ್ತು 108 ಆಂಬ್ಯುಲೆನ್ಸ್ಗೆ ಕರೆ ಮಾಡಿದರೂ ಬಾರದ ಕಾರಣ ಅಗ್ನಿ ಶಾಮಕ ವಾಹನದಲ್ಲೇ ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆ ಪಕ್ಕದಲ್ಲಿಯೇ ಪಾಳು ಬಾವಿ ಇದ್ದರೂ ಅದನ್ನು ಮುಚ್ಚದೆ ಹಾಗೆ ಬಿಟ್ಟಿರುವುದೇ ಘಟನೆಗೆ ಕಾರಣವಾಗಿದೆ. ಇನ್ನು ಮುಂದೆಯಾದರೂ ಸಂಬಂಧಿಸಿದವರು ಬಾವಿಯನ್ನು ಮುಚ್ಚುವ ಕೆಲಸ ಮಾಡುವರೇ ಎಂಬುದನ್ನು ಕಾದು ನೋಡಬೇಕಿದೆ.

See also  ‘ಸ್ಪುಟ್ನಿಕ್‌ ವಿ’ ಲಸಿಕೆ ತಯಾರಿಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ ಅನುಮತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು