News Kannada
Wednesday, March 29 2023

ಕರ್ನಾಟಕ

ಶ್ರೀಗಂಧ ಕಳ್ಳತನ: ವೃದ್ಧೆ ಸಹಿತ ಇಬ್ಬರ ಬಂಧನ

Photo Credit :

ಶ್ರೀಗಂಧ ಕಳ್ಳತನ: ವೃದ್ಧೆ ಸಹಿತ ಇಬ್ಬರ ಬಂಧನ

ಚಾಮರಾಜನಗರ: ಅರಣ್ಯದಿಂದ ಶ್ರೀಗಂಧ ಮರವನ್ನು ಕಡಿದು ಅದನ್ನು ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳಿಬ್ಬರನ್ನು ಅರಣ್ಯಾಧಿಕಾರಿಗಳು ಮಾಲು ಸಹಿತ ಬಂಧಿಸಿದ್ದಾರೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಆಡಿನಕಣಿವೆಯ ಮುರುಗನ್(21) ಹಾಗೂ ತಾಲೂಕಿನ ಭೀಮನಬೀಡು ಗ್ರಾಮದ ವೃದ್ಧೆ ಸುಬ್ಬಮ್ಮ(70) ಬಂಧಿತರಾಗಿದ್ದಾರೆ. ಇವರಿಬ್ಬರು ಆನೆದಂತ, ಶ್ರೀಗಂಧ ಮಾರಾಟ ದಂಧೆಯ ಜಾಲದೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಬಂಡೀಪುರ ಅರಣ್ಯ ವಲಯದಿಂದ ಬೆಲೆಬಾಳುವ ಶ್ರೀಗಂಧವನ್ನು ಕಡಿದು ಕೇರಳದ ಕಳ್ಳರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಸುಬ್ಬಮ್ಮ ವೃದ್ಧೆಯಾಗಿದ್ದರೂ ಇದೇ ವೃತ್ತಿಯನ್ನು ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ ಆರು ತಿಂಗಳ ಹಿಂದೆ ಓಂಕಾರ ವಲಯದಲ್ಲಿ ಸಾವಿಗೀಡಾಗಿದ್ದ ಆನೆಯ ಕೊಂಬು ಮಾರಾಟ ಮಾಡುವಾಗ ಸಿಕ್ಕಿ ಬಿದ್ದು ಸುಬ್ಬಮ್ಮ ಬಂಧನಕ್ಕೊಳಗಾಗಿದ್ದಳು.

ಆದರೂ ಕಳ್ಳತನವನ್ನು ಬಿಟ್ಟಿರಲಿಲ್ಲ. ಈ ನಡುವೆ ಶ್ರೀಗಂಧ ಮರವನ್ನು ಕಡಿದು ಅದರ ತಿರುಳನ್ನು ತೆಗೆದು ಆರು ತುಂಡುಗಳನ್ನಾಗಿ ಮಾಡಿದ ಸುಮಾರು ಐದು ಕೆಜಿಯಷ್ಟು ಗಂಧವನ್ನು ಮಾರಾಟ ಮಾಡಲು ಮುರುಗನ್ ಟೈಗರ್ ರಿಂಚ್ ರೆಸಾರ್ಟ್ ನಿಂದ ಭೀಮನಬೀಡು ಗ್ರಾಮಕ್ಕೆ  ತೆರಳುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಸುಬ್ಬಮ್ಮನ ಮನೆ ಮೇಲೆ ದಾಳಿ ಮಾಡಿದ್ದು, ಈ ವೇಳೆ  ಸುಬ್ಬಮ್ಮ ಹಾಗೂ ಮುರುಗನ್ ಮಾಲು ಸಹಿತ ಸಿಕ್ಕಿ ಬಿದ್ದಿದ್ದಾರೆ.

ಆ ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿಗಳಾದ ನವೀನ್ ಕುಮಾರ್, ಮುಕುಂದ, ಸಿಬ್ಬಂದಿ ನೇತ್ರಾವತಿ, ಸವಿತಾ, ದಿಲೀಪಕುಮಾರ್, ಹರೀಶ್, ರವಿಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.

See also  ಕಲ್ಲಳ್ಳ ಹಾಡಿ ಜನರಿಗೆ ಸೌಲಭ್ಯ ಮರೀಚಿಕೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು