News Kannada
Sunday, March 26 2023

ಕರ್ನಾಟಕ

ಜಮೀನಿಗೆ ಬಾರ್ ಸ್ಥಳಾಂತರ ವಿರುದ್ಧ ಪ್ರತಿಭಟನೆ

Photo Credit :

ಜಮೀನಿಗೆ ಬಾರ್ ಸ್ಥಳಾಂತರ ವಿರುದ್ಧ ಪ್ರತಿಭಟನೆ

ಗುಂಡ್ಲಪೇಟೆ: ಸುಪ್ರೀಂಕೋರ್ಟ್ ಆದೇಶದಂತೆ ಹೆದ್ದಾರಿಯಲ್ಲಿದ್ದ ಬಾರ್ ಅನ್ನು ಕಾಲೇಜು ಸಮೀಪದ ಜಮೀನಿಗೆ ಸ್ಥಳಾಂತರಿಸಿರುವ ವಿರುದ್ಧ ತಾಲೂಕಿನ ತೆರಕಣಾಂಬಿ ಗ್ರಾಮಸ್ಥರು ಪ್ರತಿರೋಧ ವ್ಯಕ್ತಪಡಿಸಿದರು.

ಗ್ರಾಮದಲ್ಲಿನ ಬಾರನ್ನು ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಸ್ಥಾಪಿಸಲಾಗಿದ್ದು, ಇದಕ್ಕೆ ಅಬಕಾರಿ ಇಲಾಖೆಯು ಅನುಮತಿಯನ್ನು ನೀಡಿದೆ. ಈ ಸ್ಥಳದ ಸಮೀಪದಲ್ಲಿ ಪರಿಶಿಷ್ಟ ವರ್ಗದ ಜನರ ಬಡಾವಣೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪೊಲೀಸ್ ವಸತಿಗೃಹ, ಕಾನ್ವೆಂಟ್, ಹಿಂದುಳಿದ ವರ್ಗಗಳ ಮೊರಾರ್ಜಿ ವಸತಿ ಶಾಲೆಗಳಿವೆ. ಇಷ್ಟಿದ್ದರೂ ಕೂಡ ಅಬಕಾರಿ ಇಲಾಖೆಯು ಹಾಗೂ ಸ್ಥಳೀಯ ಗ್ರಾಮಪಂಚಾಯಿತಿಗಳು ಬಾರ್ ಪ್ರಾರಂಭಿಸಲು ಒಳಗೊಳಗೆ ಅನುಮತಿ ನೀಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗ್ಗೆ ಬಾರ್ ನಾಮಫಲಕ ಅಳವಡಿಸಿ ವ್ಯವಹಾರ ಪ್ರಾರಂಭಿಸುತ್ತಿದ್ದಂತೆಯೇ ರೊಚ್ಚಿಗೆದ್ದ ಮಹಿಳೆಯರು ಹಾಗೂ ಗ್ರಾಮಸ್ಥರು ಬಾರ್ ಕಾರ್ಯಾರಂಭಿಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆದರೆ ಇದಕ್ಕೊಪ್ಪದ ಬಾರ್ ಮಾಲೀಕರು ತಾವು ಸಂಬಂಧಪಟ್ಟವರಿಂದ ಅನುಮತಿ ಪಡೆದುಕೊಂಡಿದ್ದು ತಾವು ವ್ಯವಹಾರ ನಡೆಸುವುದಾಗಿ ಹೇಳಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಇಲ್ಲಿ ಬಾರ್ ಎದುರು ಬಡಾವಣೆಯ ನಿವಾಸಿಗಳು ನೀರು ಹಿಡಿಯುವ ತೊಂಬೆಯಿದ್ದು ಮಹಿಳೆಯರು ಹಾಗೂ ಮಕ್ಕಳು ಕುಡುಕರ ಹಾವಳಿಯಿಂದ ತೊಂದರೆಗೊಳಗಾಗಲಿದ್ದಾರೆ. ಅಲ್ಲದೆ ಶಾಲೆಕಾಲೇಜುಗಳಿಗೆ ಹೋಗುವ ಮಕ್ಕಳ ಮೇಲೆ ತೀವ್ರ ದುಷ್ಪರಿಣಾಮಬೀರಲಿದೆ. ಆದ್ದರಿಂದ ಗ್ರಾಮ ಮಿತಿಯಲ್ಲಿ ಬಾರ್ ಸ್ಥಾಪನೆ ಬೇಡ ಎಂದು ಒತ್ತಾಯಿಸಿದರು.

ಸಹಾಯಕ ಸಬ್ ಇನ್ಸ್ಪೆಕ್ಟರ್ ಶಿವಣ್ಣ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ನೀಡುವಂತೆ ಪ್ರತಿಭಟನಾಕಾರರ ಮನವೊಲಿಸಿದರು. ಇನ್ನುಮುಂದೆ ಬಾರ್ ಕಾರ್ಯಾರಂಭ ಮಾಡಿದರೆ ಮಹಿಳೆಯರು ಹಾಗೂ ಮಕ್ಕಳು ಬಾರ್ ಎದುರು ಕುಳಿತು ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿ ಪ್ರತಿಭಟನಾಕಾರರು ತೆರಳಿದರು.

ಪ್ರತಿಭಟನಾ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ನಾರಾಯಣನಾಯ್ಕ, ಟಿ.ಎಸ್.ಮಹದೇವಸ್ವಾಮಿ, ಮಾಜಿ ಅಧ್ಯಕ್ಷೆ ಮಹದೇವಮ್ಮ, ಮುಖಂಡರಾದ ಆನಂದ, ಟಿ.ಆರ್.ಪ್ರಕಾಶ್, ಬಸವನಾಯ್ಕ, ಗೋಪಾಲನಾಯ್ಕ, ಸಿದ್ದು, ರಘು, ರವಿ, ನಾಗೇಶ್, ಕುಮಾರ್, ಕಮಲಮ್ಮ, ಸುವರ್ಣ, ಶಾಂತಿ, ಭಾರತಿ, ರಾಜಮ್ಮ, ಶಿವನಾಯ್ಕ ಸೇರಿದಂತೆ ಸುಮಾರು 250ಕ್ಕೂ ಹೆಚ್ಚಿನ ಜನರಿದ್ದರು.

See also  ಕುಡಿಯಲು ದುಡ್ಡು ಸಿಗಲಿಲ್ಲ ಅಂತ ತನ್ನ ಕಾಲನ್ನೇ ಕಡಿದುಕೊಂಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು