News Kannada
Saturday, March 25 2023

ಕರ್ನಾಟಕ

ಶಿಂಷಾ ನದಿ ದಡದಲ್ಲಿ ಬೀಡು ಬಿಟ್ಟ ಕಾಡಾನೆಗಳು

Photo Credit :

ಶಿಂಷಾ ನದಿ ದಡದಲ್ಲಿ ಬೀಡು ಬಿಟ್ಟ ಕಾಡಾನೆಗಳು

ಮದ್ದೂರು: ಕಾಡಾನೆಗಳ ಹಿಂಡೊಂದು ಆಹಾರ ಅರಸಿ ಬಂದು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದ ಬಳಿ ಶಿಂಷಾ ನದಿ ದಡದಲ್ಲಿ ಬೀಡು ಬಿಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

ಕಳೆದ ರಾತ್ರಿ ಮುತ್ತತ್ತಿ ಅರಣ್ಯದಿಂದ ಆಗಮಿಸಿದ ಮೂರು ದೊಡ್ಡ ಕಾಡಾನೆಗಳು ಹಾಗೂ ಒಂದು ಮರಿಯಾನೆ ಗ್ರಾಮದ ಹಲವು ರೈತರ ಗದ್ದೆಗೆ ನುಗ್ಗಿ ಭಾಗಶಃ ಬೆಳೆಗಳನ್ನು ನಾಶಪಡಿಸಿವೆ. ಕಾಡಿಗೆ ಹಿಂದಿರುವ ವೇಳೆಗೆ ಬೆಳಕು ಹರಿದ ಪರಿಣಾಮ ಕಾಡಿಗೆ ಹೋಗದೆ, ಶಿಂಷಾನದಿಗೆ ಇಳಿದು ಜಲಕ್ರೀಡೆಯಾಡಿದವು.

ಆನೆಗಳು ಬಂದಿರುವ ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಗಳ ಜನರು ಗುಂಪು ಗುಂಪಾಗಿ ಆಗಮಿಸಿ ಕಾಡಾನೆಗಳನ್ನು ವೀಕ್ಷಿಸಿದರು. ಅಷ್ಟರಲ್ಲಿ ಸುದ್ದಿ ತಿಳಿದ ಪೊಲೀಸರು ಹಾಗೂ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಆಗಮಿಸಿ ಜನರನ್ನು ದೂರ ತೆರಳುವಂತೆ ಸೂಚಿಸಿದರು.

ಮುತ್ತತ್ತಿ ಅರಣ್ಯ ವ್ಯಾಪ್ತಿಯಿಂದ ಆಹಾರ ಅರಸಿ ಕಾಡಾನೆಗಳು ಬಂದಿವೆ. ಸಂಜೆ ವೇಳೆಗೆ ಕಾಡಿಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಲಯ ಅರಣ್ಯಾಧಿಕಾರಿ ಡಾ.ಶಶಿಧರ್‌ ತಿಳಿಸಿದರು. ಕಾಡಾನೆಗಳು ರೈತರ ಬೆಳೆಗಳನ್ನು ನಾಶ ಪಡಿಸಿದ್ದು, ಈ ಕೂಡಲೇ ಅಧಿಕಾರಿಗಳು ನಷ್ಟವನ್ನು ಅಂದಾಜಿಸಿ ತಕ್ಷಣವೇ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

See also  ಅಪಘಾತದಲ್ಲಿ ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಸೇರಿ ಇಬ್ಬರಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು