ಕಾರವಾರ: ಮಳೆ ಮತ್ತು ಲೋಕ ಕಲ್ಯಾಣಕ್ಕಾಗಿ ದಕ್ಷಿಣ ಭಾರತದ ಪ್ರಸಿದ್ಧ ಉತ್ತರ ಕನ್ನಡದ ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಪರ್ಜನ್ಯ ಜಪ, ವಿಶೇಷ ಪೂಜೆ ನಡೆಯಿತು.
ಮಾರಿಕಾಂಬಾ ದೇವಸ್ಥಾನ ಬೆಳಿಗ್ಗೆ 9. 30ಕ್ಕೆ ದೇವರಿಗೆ ಪೂಜೆ ಸಲ್ಲಿಸಿ ಎದುರಿಗಿರುವ ತ್ರಯಂಬಕ ದೇವಸ್ಥಾನದಲ್ಲಿ 2 ಗಂಟೆಗಳ ಕಾಲ ಮಳೆ, ಬೆಳೆ ಸುಭೀಕ್ಷವಾಗಿ ಇರಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆಯನ್ನು ನಡೆಸಲಾಗಿದೆ.
ಪೂಜೆಯಲ್ಲಿ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿಗಳು, ನೂರಾರು ಭಕ್ತರು ಈ ವೇಳೆಯಲ್ಲಿ ಪಾಲ್ಗೊಂಡಿದ್ದರು.
ನೀರಿನ ಅಭಾವ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಆದೇಶದ ಮೇರೆಗೆ ನಡೆದ ಪರ್ಜನ್ಯ ಜಪ ಮತ್ತು ಚಂಡಿಕಾ ಪಾರಾಯಣವನ್ನು ಶಾಸ್ತ್ರೋಕ್ತವಾಗಿ ನಡೆಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.