News Kannada
Friday, March 31 2023

ಕರ್ನಾಟಕ

ಮಳೆಯಲ್ಲೇ ಜರುಗಿದ ಹಿಂಡಿಮಾರಮ್ಮನ ಕೊಂಡೋತ್ಸವ

Photo Credit :

ಮಳೆಯಲ್ಲೇ ಜರುಗಿದ ಹಿಂಡಿಮಾರಮ್ಮನ ಕೊಂಡೋತ್ಸವ

ಯಳಂದೂರು: ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದಲ್ಲಿ ಶ್ರೀ ಹಿಂಡಿಮಾರಮ್ಮನ ಕೊಂಡೋತ್ಸವ ಸುರಿಯುವ ಮಳೆಯಲ್ಲೇ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಹಬ್ಬದ ನಿಮಿತ್ತ ಹಿಂಡಿಮಾರಮ್ಮ ದೇವಿಗೆ ವಿಶೇಷ ಅಲಂಕಾರ, ಹೋಮ, ಹವನಗಳನ್ನು ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ತಮ್ಮಡಿಗಳು ದೇವಿಯ ಉತ್ಸವ ಮೂರ್ತಿಯೊಂದಿಗೆ ರಾಷ್ಟ್ರೀಯ ಹೆದ್ದಾರಿ 209 ಪಕ್ಕದಲ್ಲಿ ಹಾಕಿದ್ದ ಕೊಂಡದ ಸ್ಥಳಕ್ಕೆ ತೆರಳಿ ಕೊಂಡವನ್ನು ಹಾಯ್ದರು, ತಮ್ಮಡಿಗಳಲ್ಲದೆ, ಈ ಕೊಂಡಕ್ಕೆ ಹರಕೆ ಹೊತ್ತು ಬಂದಿದ್ದ ನೂರಾರು ಭಕ್ತರು ತಮ್ಮಡಿಗಳ ನಂತರ ಕೊಂಡವನ್ನು ಹಾಯ್ದು ಹರಕೆ ತೀರಿಸಿದರು.

ಇನ್ನು ಗ್ರಾಮದಲ್ಲಿ ಹರಕೆ ಹೊತ್ತಿದ್ದ 100ಕ್ಕೂ ಹೆಚ್ಚು ಭಕ್ತರು ತಮ್ಮ ಬಾಯಿಗೆ ಬೀಗಗಳನ್ನು ಹಾಕಿಕೊಂಡು ಕೊಂಡವನ್ನು ಹಾಯುವ ಮೂಲಕ ಹರಕೆಗಳನ್ನು ತೀರಿಸಿದರು. ತಮ್ಮ ಇಷ್ಟಾರ್ಥಗಳನ್ನು ಮಾರಮ್ಮ ದೇವಿಯ ಬಳಿ ಹರಕೆ ಹೊತ್ತಿದ್ದ ಭಕ್ತರು ತಮ್ಮ ಹರಕೆಗಳು ಫಲಪ್ರದವಾದ ನಂತರ ದೀಪಾವಳಿ ಸಮಯದಲ್ಲಿ ನಡೆಯುವ ಕೊಂಡೋತ್ಸವದಲ್ಲಿ ತಮ್ಮ ಬಾಯಿಗೆ ದೇವಸ್ಥಾನದ ತಮ್ಮಡಿಗಳಿಂದ ಕಬ್ಬಿಣದ ತಂತಿಗಳಿಂದ ಬಾಯಿಗೆ ಬೀಗ ಹಾಕಿಸಿಕೊಂಡು ದೇವಸ್ಥಾನದಿಂದ ಹೊರಟು ಕೊಂಡೋತ್ಸವವು ನಡೆಯುವ ಸ್ಥಳದವರೆಗೆ ಮಾರಮ್ಮ ದೇವಿಯ ಉತ್ಸವ ಮೂರ್ತಿಯ ಜೊತೆ ಹೋಗಿ ತಮ್ಮಡಿಗಳು ಕೊಂಡವನ್ನು ಹಾಯ್ದ ನಂತರ ಇವರು ಕೊಂಡವನ್ನು ಹಾಯುವುದು ಹಿಂದಿನಿಂದಲೂ ನಡೆದು ಬಂದ ಆಚರಣೆಯಾಗಿದೆ.

See also  ಪ್ರವಾಹ: ಕರ್ನಾಟಕದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು